ಧಾರವಾಡ | ದಣಿವರಿಯದ ಜೀವಗಳ ಸ್ವಾಭಿಮಾನಿ ಬದುಕಿಗೆ ‘ಲಿಂಬು ಸೋಡಾ’ ಆಸರೆ

Date:

  • 40 ವರ್ಷದಿಂದ ಲಿಂಬು ಸೋಡಾ ಮಾರಿ ಜೀವನ ಸಾಗಿಸುತ್ತಿರುವ ವೃದ್ಧ ದಂಪತಿ
  • ತಳ್ಳುಗಾಡಿಯಲ್ಲಿ ದುಡಿದು ತಿನ್ನುತ್ತಿರುವ ಅಜ್ಜ-ಅಜ್ಜಿಗೆ ಬೇಕಿದೆ ಸರ್ಕಾರದ ನೆರವು

”ಆವ ಕಾಯಕವಾದರೂ ಸ್ವಕಾಯಕ ಮಾಡಿ” ಎಂಬ ಶರಣರ ವಾಣಿಯಂತೆ ಸುಮಾರು 40 ವರ್ಷಗಳಿಂದ ದಣಿವರಿಯದೆ ಸತ್ಯ ಶುದ್ಧವಾದ ಕಾಯಕದಲ್ಲಿ ನಿರತರಾದವರು ಮೆಹಬೂಬಸಾಬ್ ಮತ್ತು ರಾಜಬಿ ಎಂಬ ವೃದ್ಧ ದಂಪತಿ.

ಧಾರವಾಡ ನಗರದ ಹೃದಯಭಾಗದ ಓಸವಾಲ್ ಟವರ್ ಮುಂದೆ ತಳ್ಳುವ ಗಾಡಿಯಲ್ಲಿ ಲಿಂಬು ಸೋಡಾ ವ್ಯಾಪಾರ ಮಾಡುವ ಇವರು, ತಮ್ಮ ಮೂವರು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಕೆಲವು ವರ್ಷಗಳ ನಂತರ ಮಕ್ಕಳು ಬೇರೆ ಮನೆ ನಿರ್ಮಿಸಿಕೊಂಡು ಪ್ರತ್ಯೇಕವಾಗಿ ವಾಸವಿದ್ದಾರೆ. ಅಂದಿನಿಂದ ಈವರೆಗೂ ‘ಒಲವೆ ಜೀವನ ಸಾಕ್ಷಾತ್ಕಾರ’ ಎಂಬಂತೆ ಈ ದಂಪತಿ ಬದುಕು ಸಾಗಿಸುತ್ತಿದ್ದಾರೆ.

ತಮ್ಮ ಹೊಟ್ಟೆಗೆ ಅನ್ನ ನೀಡಿದ ಲಿಂಬು ಸೋಡಾ ವ್ಯಾಪಾರವನ್ನೆ ಮುಂದುವರಿಸಿಕೊಂಡು ಜೀವನ ಸಾಗಿಸುತಿದ್ದಾರೆ. ’ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ದ. ರಾ. ಬೇಂದ್ರೆ ಅವರ ಪ್ರಸಿದ್ಧ ಕವಿತೆಗೆ ಸಾಕ್ಷಿಯಾಗಿರುವ ಇವರ ಬದುಕೇ ಇಂದಿನ ಯುವ ಪೀಳಿಗೆಗೆ ಸದಾ ಮಾದರಿಯಾಗಿ ನಿಲ್ಲುತ್ತದೆ. ದುಡಿಯದೆ ತಿನ್ನಬೇಕೆಂಬ ಸೋಮಾರಿಗಳು ಈ ಅಜ್ಜ-ಅಜ್ಜಿಯ ದುಡಿಮೆಯ ಮುಂದೆ ತಲೆ ತಗ್ಗಿಸಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಧಾರವಾಡದ ಈ ವೃದ್ಧ ದಂಪತಿ ಯಾರ ಆಸರೆ ಇಲ್ಲದೆ ಪ್ರಾಮಾಣಿಕವಾಗಿ ದುಡಿದು ತಿನ್ನಬೇಕೆಂಬ ಸ್ವಾಭಿಮಾನಿಗಳು. ಕಲಾಭವನ (ಕಡಪಾ ಮೈದಾನ)ದ ಪಕ್ಕದಲ್ಲಿ ತಲೆಯೆತ್ತಿ ನಿಂತಿರುವ ಓಸವಾಲ್ ಟವರ್ ಮುಂದೆಯೆ ತಳ್ಳುವ ಗಾಡಿಯಲ್ಲಿ ಸುಮಾರು 40 ವರ್ಷಗಳಿಂದ ಸೋಡಾ ಮಾರಿ ಜೀವನ ಸಾಗಿಸಿದ ಇವರಿಗೆ ಇತ್ತೀಚಿನ ಬೆಲೆ ಏರಿಕೆಯ ದಿನಗಳಲ್ಲಿ ಬದುಕು ಬಹಳಷ್ಟು ದುಸ್ತರವಾಗಿದೆ. ಸ್ವಂತ ಮನೆಯಿಲ್ಲದ ಕಾರಣ ಬಾಡಿಗೆ ಮನೆಯಲ್ಲಿಯೆ ಜೀವನ ಸಾಗಿಸುತ್ತಿರುವ ಇವರ ಬದುಕಿಗೆ ಬೆಳಕಾಗಿ ಸರ್ಕಾರವು ಸಹಾಯಹಸ್ತ ಚಾಚುವುದು ಅವಶ್ಯವಾಗಿದೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ

ಸರ್ಕಾರದಿಂದ ಏನು ಸಹಾಯ ಅಪೇಕ್ಷಿಸುತ್ತೀರಿ? ಎಂದು ವೃದ್ಧ ದಂಪತಿಗಳನ್ನು ಪ್ರಶ್ನಿಸಿದಾಗ “ನಮಗೆ ವಾಸಿಸಲು ಒಂದು ಸಣ್ಣ ಮನೆ ಕೊಡಿಸಿದರೆ ಸಾಕು’ ಎಂದು ಮುಗ್ದ ಮನಸ್ಸಿನಿಂದ ಹೇಳುತ್ತಾರೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ರ ವರೆಗೆ ದುಡಿಯಲೇಬೇಕು. ಪತ್ನಿ ರಾಜಬಿ ಮೆಹಬೂಬಸಾಬ್ ಬಕಾರಿ ಅವರೆ ಸೋಡಾ ತಯಾರಿಕೆಗೆ ಬೇಕಾಗುವ ಲಿಂಬು, ಪಾಚಕ್, ಜೀರಿಗೆ, ಉಪ್ಪು ಇತರೆ ಸಾಮಗ್ರಿಗಳನ್ನು ತರುವುದು ಮೆಹಬೂಬಸಾಬ್ ಅವರೆ, ಲಿಂಬು ಸೋಡಾ ತಯಾರಿಸುವುದು ಕೂಡ ಅವರೆ.

ತಿಂಗಳ ಅಂತ್ಯ ಸಮೀಪ ಬರುತ್ತಿದ್ದಂತೆ ಬಾಡಿಗೆ ಕಟ್ಟುವುದೇ ಬಹುದೊಡ್ಡ ಚಿಂತೆ. ಮಕ್ಕಳು ಬಿಟ್ಟು ಹೋದಮೇಲೆ ’ನಿನಗೆ ನಾನು, ನನಗೆ ನೀನು’ ಎಂದು ನಡೆದ ವೃದ್ಧ ಶ್ರಮಜೀವಿಗಳಿಗೆ ಸರ್ಕಾರದ ಸಹಾಯ ಬೇಕೆ ಬೇಕು. ಇವರ ಅದಮ್ಯ ದುಡಿಮೆಯ ಛಲದ ಮುಂದೆ ವಯಸ್ಸು ಕೂಡಾ ಬೆದರಿ ನಿಂತಿರುವುದು ಸೋಜಿಗ.

– ಶರಣಪ್ಪ ಗೊಲ್ಲರ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...