ತಾಲ್ಲೂಕು ಹಾಲು ಉತ್ಪಾದಕರ ಸಹಕಾರ‌ ಸಂಘಗಳ ನೌಕರರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Date:

ಕೋಲಾರ: ಜಿಲ್ಲಾ‌ ಹಾಲು ಒಕ್ಕೂಟದ‌ ಅಭಿವೃದ್ಧಿಯ ದೃಷ್ಟಿಯಿಂದ ಸೋಲಾರ್ ಘಟಕ ನಿರ್ಮಿಸಲಾಗಿದ್ದು ರಾಜಕೀಯ ಕಾರಣಕ್ಕೆ ಏನೇನೋ ಆರೋಪ ಕೇಳಿ ಬಂದಿದೆ ಈ ಬಗ್ಗೆ ಬೇಕಾದರೆ ತನಿಖೆ ‌ನಡೆಸಲಿ ಏನಾದರೂ ತಪ್ಪಿದ್ದರೆ ನಾವೂ ಜವಾಬ್ದಾರರಾಗುತ್ತೇವೆ. ಏಕೆಂದರೆ ಸೌರ ಘಟಕ ಸ್ಥಾಪನೆ ನಿರ್ಧಾರ ಕೈಗೊಂಡಾಗ ಆಡಳಿತ ಮಂಡಳಿ ಸಭೆಯಲ್ಲಿ ನಾನೂ ಇದ್ದೆ‌ ಎಂದು ಕೋಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಹೇಳಿದರು.

ನಗರದ ಜಿಲ್ಲಾ ಸಹಕಾರ‌ ಒಕ್ಕೂಟದ ಸಭಾಂಗಣದಲ್ಲಿ‌ ಕೋಲಾರ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ‌ ನೌಕರರ ಸಂಘದ 2025ನೇ ಸಾಲಿನ ವಾರ್ಷಿಕ ‌ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು ಹಿಂದಿನ ಆಡಳಿತ ಮಂಡಳಿ ಸಮಯದಲ್ಲಿ ಹಲವು ಸಮಸ್ಯೆ‌ ಎದುರಾದವು ರಾಜಕೀಯ ಉದ್ದೇಶದಿಂದ ಒಕ್ಕೂಟದ ಮೇಲೆ‌ ಕೆಲ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ನಾನು ಈ ವೇದಿಕೆಯಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು. ಆದರೆ ಚುನಾವಣೆಯ ಕಾರಣ ರಾಜಕಾರಣ ‌ಬಂದಿದೆ. ಜಾತಿಯೂ ಬೆರೆತಿದೆ. ಬಹಳ ‌ಬೇಸರವಾಗುತ್ತದೆ ಎಂದು ಹೇಳಿದರು ಚುನಾವಣೆಯಲ್ಲಿ ಕೋಲಾರ ‌ತಾಲ್ಲೂಕಿನಲ್ಲಿ ಮೂರು ಕ್ಷೇತ್ರ ಮಾಡಿ ನನ್ನ ಬಲ ಕುಗ್ಗಿಸಲು ಪ್ರಯತ್ನ ನಡೆಯಿತು. ಆದರೆ ನಾನು ಬಗ್ಗಲಿಲ್ಲ ಯಾವುದೇ ಸಮಸ್ಯೆ ಸವಾಲು ‌ಎದುರಿಸಲು ನಾನು‌ ಸಿದ್ಧ ಆದರೆ ನಾನು ಈಗ ಯಾವುದೇ ಕ್ಷೇತ್ರ ನೋಡದೆ ಕೆಲಸ‌ ಮಾಡಿಕೊಂಡು‌ ಹೋಗುತ್ತಿದ್ದೇನೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾವು ಹಾಲು ಒಕ್ಕೂಟದಿಂದ ಹಲವಾರು ಸೌಲಭ್ಯ ‌ಕಲ್ಪಿಸುವ ಕೆಲಸ ‌ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ‌ನಮಲ್ಲಿ ಹಾಲಿನ ಗುಣಮಟ್ಟದ ಮೇಲೆ ಇನ್ಸೆಂಟೀವ್‌ ಕೊಡಲಾಗುತ್ತಿದೆ‌ ವಿಮೆ ಕೊಡಿಸಲಾಗುತ್ತಿದೆ‌. ರೈತರಿಗೆ ಸೌಲಭ್ಯ ಕೊಡಬೇಕು,‌ ಗುಣಮಟ್ಟ ಹೆಚ್ಚಿಸಬೇಕು‌. ಜೊತೆಗೆ ನೌಕರರಿಗೂ ಸೌಲಭ್ಯ ಕೊಡಬೇಕು. ಮುಂದೆ ಕೂಡ ಯಾವುದೇ ಸಮಸ್ಯೆ‌ ಇದ್ದರೆ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು‌ ಭರವಸೆ ‌ನೀಡಿದರು.

ಎಲ್ಲಾ ಡೇರಿಗಳಲ್ಲಿ ಕಾಮನ್ ಸಾಫ್ಟ್‌ವೇರ್ ಅಳವಡಿಸಿಕೊಳ್ಳದಿದ್ದರೆ ಒಕ್ಕೂಟದ ನೀಡುವ ಹಣ ತಡೆಹಿಡಿಯಲಾಗುತ್ತದೆ ಆಡಳಿತ ‌ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.‌ ಶೇ ೧೦೦ರಷ್ಟು ಕೆಲಸ ‌ಆಗಬೇಕು ಎಂದು‌ ಸೂಚನೆ ನೀಡಿದರು.

ನಾವು ಒಕ್ಕೂಟದಲ್ಲಿ ಐದು ವರ್ಷ ಕೆಲಸ‌ ಮಾಡಲು ಅವಕಾಶ ಸಿಗಲು ಡೇರಿ ಕಾರ್ಯದರ್ಶಿಗಳು ಪ್ರಧಾನ ಪಾತ್ರ ವಹಿಸಿದ್ದಾರೆ‌ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೋಲಾರ ‌ಒಕ್ಕೂಟದಿಂದ ಆರೇಳು ಲಕ್ಷ ಚಿಕ್ಕಬಳ್ಳಾಪುರ ಒಕ್ಕೂಟದಿಂದ ಐದಾರು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಲು ಆಡಳಿತ ಮಂಡಳಿಯ ದಿಟ್ಟ‌ ನಿರ್ಧಾರಗಳು ಕಾರಣ ಈಗ ಎರಡೂ ಬೇರೆ ಬೇರೆ ಆಗಿವೆ ಒಕ್ಕೂಟ ವಿಭಜನೆ ಆದ ಮೇಲೆ ಹಲವು ಸವಾಲು ಎದುರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂವಿಕೆ ಡೇರಿ ಸೋಲಾರ್ ಘಟಕ ‌ಸಿದ್ಧಗೊಂಡಿವೆ ಹಾಲು ಉತ್ಪಾದಕರ ಹೆಣ್ಣು ಮಕ್ಕಳಿಗೆ ‌ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ ಶ್ರೀನಿವಾಸಪುರದಲ್ಲಿ ಪಶು ಆಹಾರ ಘಟಕ ನಿರ್ಮಾಣಕ್ಕೆ ಡಿಪಿಆರ್ ಆಗಿದೆ ಎಂದರು.

ಹಿಂದೆ‌ ಕೋವಿಡ್ ಬಂದಾಗ ಭಾರಿ ಸವಾಲು ಎದುರಾಗಿತ್ತು. ಹಾಲು ಖರೀದಿ ನಿಲ್ಲಿಸುತ್ತಾರೆ ಎಂಬ ಆತಂಕದಲ್ಲಿ ಹೈನುಗಾರರು ಇದ್ದರು.‌ ಆದರೆ, ನಾವು ರೈತರಿಗೆ ಬೆನ್ನೆಲುಬಾಗಿ ನಿಂತೆವು ಸಭೆ ನಡೆಸಿ ರೈತರ ಪರ ತೀರ್ಮಾನ ‌ಕೈಗೊಂಡೆವು. ಹಲವು ಕಾರ್ಯಕ್ರಮ ರೂಪಿಸಿದೆವು ಎಂದು ನೆನಪಿಸಿಕೊಂಡರು.

ಕೋಮುಲ್ ನಿರ್ದೇಶ ಎನ್.ಹನುಮೇಶ್ ಮಾತನಾಡಿ ಕಷ್ಟ ಸುಖಗಳಿಗೆ ಸ್ಪಂದಿಸಲು ಸಂಘ ಬೇಕು ಜೊತೆಗೆ ‌ಬೇಡಿಕೆ ಈಡೇರಿಕೆ ಅಗತ್ಯವಿರುತ್ತದೆ ಸಂಘದಿಂದ ಗ್ರಾಮಸ್ಥರಿಗೂ ಅನುಕೂಲ ಇದೊಂದು ‌ಸಮಾಜ ಸೇವೆ‌ ಇದ್ದಂತೆ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಸಂಘದ ಕಾರ್ಯದರ್ಶಿಗಳು ಆಧಾರಸ್ತಂಭ ಇದ್ದಂತೆ ಅವರು ಚೆನ್ನಾಗಿ ಕಾರ್ಯನಿರ್ವಹಿಸಬೇಕು‌ ಎಂದು ಸಲಹೆ‌ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ ಮಾತನಾಡಿ ರಾಜಕಾರಣದಲ್ಲಿ ಯಾರೇ ಉನ್ನತ ಸ್ಥಾನಕ್ಕೆ ಏರಿದ್ದರೂ ಅದಕ್ಕೆ ‌ಕಾರಣ ಸಹಕಾರ‌ ಕ್ಷೇತ್ರ. ಡಿಸಿಸಿ ಬ್ಯಾ‌ಂಕ್ ಈಗ ಕೆಟ್ಟ ಪರಿಸ್ಥಿತಿಯಲ್ಲಿದೆ. ಹತ್ತು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹೇಗಿತ್ತು? ಈಗ ‌ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ‌. ಇದಕ್ಕೆ ರಾಜಕಾರಣವೇ ‌ಕಾರಣ‌‌ . ಸಹಕಾರ ಸಂಘದಲ್ಲಿ ರಾಜಕಾರಣ ‌ಬೆರೆಯಬಾರದು ಎಂದು ಹೇಳಿದರು.

ಡಿಸಿಸಿ ಬ್ಯಾ‌ಂಕ್ ಗೆ ಚುನಾವಣೆ‌ ನಡೆದು ಹಲವು ತಿಂಗಳು ಕಳೆದಿದ್ದರೂ ಅಧ್ಯಕ್ಷರ ಆಯ್ಕೆ ನಡೆದ ಇಲ್ಲ. ಸಾಲ ವಸೂಲಾತಿ ಬಗ್ಗೆ ಅಧಿಕಾರಿಗಳು ಕಾಳಜಿ‌ ವಹಿಸುತ್ತಿಲ್ಲ ಎಂದು ದೂರಿದರು.

ಇದನ್ನು ಓದಿದ್ದೀರಾ…? ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಿದ ವಿಜಯಕುಮಾರ್ ಗೆ ಕಾಂಗ್ರೆಸ್ ಮುಖಂಡರಿಂದ ವಾಗ್ದಾಳಿ

ಈ ಸಂದರ್ಭದಲ್ಲಿ ನೌಕರರು ಕೆಲ ಬೇಡಿಕೆ‌ ಇಡಲಾಯಿತು. ಭವಿಷ್ಯ ‌ನಿಧಿ ಬೇಕು, ತರಬೇತಿ ನೀಡಬೇಕು, ಕಾಮನ್ ‌ಸಾಫ್ಟ್ ವೇರ್ ಅಳವಡಿಸಲು ತರಬೇತಿ ನೀಡಬೇಕು ಎಂದು ಮನವಿ‌ ಮಾಡಿದರು ಈ ಬಗ್ಗೆ ಗಮನಹರಿಸಲಾಗುವುದು‌ ಎಂದು ಕೋಮುಲ್ ನಿರ್ದೇಶಕರು ಭರವಸೆ ನೀಡಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...