ಕೋಲಾರ: ತಾಲೂಕಿನ ಅರಿನಾಗನಹಳ್ಳಿ ಗ್ರಾಮದ ಶಿಕ್ಷಕ ಡಾ.ಮಂಜುನಾಥ್ ಅವರಿಗೆ ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಮತ್ತು ಲಕ್ಷ್ಯ ಕೆರಿಯರ್ ಅಕಾಡೆಮಿಯ ಸಹಯೋಗದಲ್ಲಿ ನೀಡುವ ಸ್ಪಾರ್ಕ್ ನಿರೂಪಣಾ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದನ್ನು ಓದಿದ್ದೀರಾ…? ದಾರಿ ಬಿಡಿಸುವ ವಿಚಾರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ
ಬೆಂಗಳೂರಿನ ಕಾಳತಮ್ಮನಹಳ್ಳಿಯ ಲಕ್ಷ್ಯ ಕೆರಿಯರ್ ಅಕಾಡೆಮಿಯಲ್ಲಿ ಜ.25 ರಂದು ನಡೆಯಲಿರುವ 2025-26ನೇ ಸಾಲಿನ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಂಜುನಾಥ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದು ಅವರು ರಾಜ್ಯಾದ್ಯಂತ ನಡೆದ ಅನೇಕ ಸಮಾರಂಭಗಳಲ್ಲಿ ತಮ್ಮ ವಿಶಿಷ್ಟ ಕಂಠಸಿರಿ ಪದಸಿರಿ ಸಂಪತ್ತಿನಿಂದ ಯಶಸ್ವಿಯಾಗಿ ನಿರೂಪಿಸಿ ನಿರ್ವಹಿಸಿ ವೇದಿಕೆಗಳಿಗೆ ನಿರೂಪಣೆಯ ಸೊಬಗನ್ನು ಹೆಚ್ಚಿಸಿದ್ದಾರೆ. ಅವರ ಉತ್ತಮ ನಿರೂಪಾಣಾ ಕೌಶಲ್ಯವನ್ನು ಗುರುತಿಸಿ ಸ್ಪಾರ್ಕ್ ನಿರೂಪಣಾ ರತ್ನ ರಾಜ್ಯ ಪ್ರಶಸ್ತಿ ನೀಡಲಾಗುತ್ತದೆ ಎಂದು ಆಯೋಜಕರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.




