ಮುಖ್ಯಮಂತ್ರಿಗಳು ಘೋಷಿಸಿದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10000 ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಮತ್ತು ಇದೇ ಬಜೆಟ್ ನಲ್ಲಿ ರೂ.1000 ಹೆಚ್ಚಳ ಮಾಡುವ ಆದೇಶವನ್ನು ಕೂಡಲೇ ನೀಡಲು ಮತ್ತು ಜನಸಂಖ್ಯೆ, ಮೌಲ್ಯಮಾಪನದ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೈಬಿಡುವ ಆತಂಕ ಸೃಷ್ಟಿಸಿರುವುದರ ವಿರುದ್ಧ ಎಐಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಜಿಲ್ಲಾ ಸಮಿತಿಯಿಂದ ‘ಜಿಲ್ಲಾ ಮಟ್ಟದ ಆತಾ ಕಾರ್ಯಕರ್ತೆಯರ ಪ್ರತಿಭಟನೆ ಯನ್ನು ನಾಳೆ ಆಗಸ್ಟ್ 12 ರಂದು ಬೆಳಗ್ಗೆ 11 ಗಂಟೆಗೆ ಮಣಿಪಾಲದಲ್ಲಿರುವ ರಜತಾದ್ರಿಯ ಮುಂಬಾಗದಲ್ಲಿ ನಡೆಯಲಿದೆ ಎಂದು ಸಂಘರ್ಷ ತಿಳಿಸಿದ್ದಾರೆ.




