ಭೀಮ್ ಆರ್ಮಿ ಸಂಘಟನೆಯ ಮೂಲ ಶಿಕ್ಷಣ ಉದ್ದೇಶ ವಂಚಿತರಿಗೆ ಶಿಕ್ಷಣ ಕೊಡಿಸುವುದಾಗಿದೆ. ಪರಿಶಿಷ್ಟ ಜನಾಂಗದವರು ಶಿಕ್ಷಣ ಪಡೆದಿರುವುದಿಲ್ಲ. ಹೆಚ್ಚು ಉದ್ಯೋಗದಲ್ಲಿ ತೊಡಗಿಸಿಕೊಂಡು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅಂತವವರಿಗೆ ಶಿಕ್ಷಣ ಕೊಡಿಸುವ ಉದ್ದೇಶದಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ ಎಂದು ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ರಾಜ್ಯ ಅಧ್ಯಕ್ಷ ಲವಿತ್ ಮೇತ್ರಿ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಭೀಮ್ ಆರ್ಮಿ ಸಭೆ ನಡೆಸಿದೆ. ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಕುಮಾರ್ ಚಲವಾದಿ, ಉಪಾಧ್ಯಕ್ಷರಾಗಿ ಸದಾಶಿವ ಭಜಂತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಚಾಂದ್ ಉದ್ಧಾರ, ಕಾರ್ಯದರ್ಶಿಯಾಗಿ ಶ್ರೀಧರ್ ಚಲವಾದಿ, ಸಂಚಾಲಕಾರಾಗಿ ಹುಸೇನ್ ಮಾದರ್ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಂಘಟನೆಯ ರಾಜ್ಯ ನಾಯಕ ಅನಿಲ್ ಬರಗಿ, ಆಯುಷ್ಮಾನ ಸಂತೋಷ್ ದೊಡಮನಿ, ಮುಧೋಳ ತಾಲೂಕ ಅಧ್ಯಕ್ಷ ಚೇತನ್ ಪೂಜಾರಿ, ಯುವ ಘಟಕದ ಅಧ್ಯಕ್ಷ ಮುಧೋಳ್ ಗಣೇಶ್ ಮಾವಲಕರ, ಸಂತೋಷ್ ಲಿಂಗಣ್ಣವರ್, ನಾಗರಾಜ್ ಸಂಕನಾಳ, ಕಿರಣ್ ಟವಳಿ, ಪೈಗಂಬರ್ ಮುಜಾವರ್, ರವಿ ಮಾದರ್ ಹಲವರು ಇದ್ದರು.




