ಬಾಗಲಕೋಟೆ | ʼಮನರೇಗಾʼ ಸಮರ್ಪಕ ಅನುಷ್ಠಾನಕ್ಕೆ ಗ್ರಾಕೂಸ ಒತ್ತಾಯ: ಪ್ರಧಾನಿಗೆ ಮನವಿ

Date:

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ(ಗ್ರಾಕೂಸ) ಸಮಿತಿಯಿಂದ ವಿಬಿ- ಜಿ ರಾಮ್‌ ಜಿ ವಿರೋಧಿಸಿ ʼಮನರೇಗಾʼ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಕಾಯ್ದೆಯನ್ನು ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.

ಬಳಿಕ ಪ್ರತಿಭಟನಾಕಾರರು ತಾಲೂಕಿನ ಮಮಟಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಖಾಂತರ ಪ್ರಧಾನ ಮಂತ್ರಿ ಮೋದಿಯವರಿಗೆ ಮನವಿ ಸಲ್ಲಿಸಿದರು.

“ಮನರೇಗಾ ದೇಶದ ಎಲ್ಲ ಗ್ರಾಮೀಣ ಜನರಿಗೂ ಉದ್ಯೋಗದ ಹಕ್ಕಾಗಿದೆ. ಜನರಿಗೆ ತಾವಿರುವ ಪ್ರದೇಶದಲ್ಲೇ ನೂರು ದಿನಗಳ ಕೆಲಸ ಕೇಳಿ ಪಡೆಯುವ ಅವಕಾಶವಿತ್ತು. ವಲಸೆಯಿಂದ ಮರಳಿದವರೂ ಕೂಡ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಪಡೆಯಬಹುದಾಗಿತ್ತು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ವಿಬಿ-ಗ್ರಾಮ್ ಜಿ ಕಾನೂನಿನ(ಪರಿಚ್ಛೇದ 5(1)ರ ಪ್ರಕಾರ, ಕೇಂದ್ರ ಸರ್ಕಾರ ತನ್ನಿಚ್ಚೆಯಂತೆ ನೋಟಕ್ಕೆ ಮಾಡಿ ಬಜೆಟ್‌ ನೀಡುವ ಪ್ರದೇಶಗಳಲ್ಲಿ ಮಾತ್ರ ಇದು ಜಾರಿಯಲ್ಲಿರುತ್ತದೆ. ಇದರರ್ಥ, ದೇಶದ ಎಲ್ಲ ಜನರಿಗೂ, ಎಲ್ಲ ಕಡೆಯೂ ಉದ್ಯೋಗ ಒಂದು ಹಕ್ಕಾಗಿ ಉಳಿಯುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಉದ್ಯೋಗದ ಖಾತರಿಯೇ ಇರುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನರೇಗಾ ಅನುಷ್ಠಾನಕ್ಕೆ ಗ್ರಾಕೂಸ ಒತ್ತಾಯ

“ಮನರೇಗಾದಲ್ಲಿ ತಮಗೆ ಬೇಕಾದಾಗ ಗ್ರಾಮೀಣ ಭಾಗದ ಎಷ್ಟು ಜನ ಬೇಕಾದರೂ ಕೆಲಸಕ್ಕೆ ಅರ್ಜಿ ಹಾಕಬಹುದಾಗಿತ್ತು. ಅರ್ಜಿ ಹಾಕಿದ ಹದಿನೈದು ದಿನದೊಳಗೆ ಕೆಲಸ ನೀಡುವುದು ಸರ್ಕಾರದ ಕರ್ತವ್ಯವಾಗಿದ್ದು, ಕೂಲಿ ಹಣ ಪಾವತಿಸುವ ಹೊಣೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದಾಗಿತ್ತು. ಬಜೆಟ್‌ಗೆ ಇಂತಿಷ್ಟೇ ಎಂಬ ಮಿತಿ ಇರಲಿಲ್ಲ. ಬೇಡಿಕೆ ಇದ್ದಷ್ಟು ಬಜೆಟ್ ಪೂರೈಸುವುದು ಕೇಂದ್ರ ಸರ್ಕಾರದ ಹೊಣೆಯಾಗಿತ್ತು”‌ ಎಂದರು.

“ವಿಬಿ-ಜಿ ರಾಮ್‌ ಜಿ ಕಾನೂನಿನ ಪರಿಚ್ಛೇದ 4(5), 4(6)ರ ಪ್ರಕಾರ, ಪ್ರತಿಯೊಂದು ವಿತ್ತ ವರ್ಷಕ್ಕೂ ಆಯಾ ರಾಜ್ಯಕ್ಕೆ ಎಷ್ಟು ಹಣವನ್ನು ಕೊಡಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ತನ್ನದೇ ಅಳತೆಗೋಲಿನ ಮೇಲೆ ನಿರ್ಧರಿಸುತ್ತದೆ. ಅಂದರೆ ಯಾವ ವರ್ಷ ಯಾವ ಪಂಚಾಯಿತಿಗೆ ಎಷ್ಟು ಹಣ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ನಿರ್ಧಾರವಾಗಿರುತ್ತದೆ. ಅಂದರೆ ಆಯಾ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಬಜೆ‌ಟ್‌ಗೆ ಅನುಗುಣವಾಗಿಯೇ ಪಂಚಾಯಿತಿಗಳು ಉದ್ಯೋಗ ಕೊಡಬೇಕು. ‘ಮನರೇಗಾ’ ಕಾನೂನಿನಲ್ಲಿದ್ದ ‘ಬೇಡಿಕೆ ಇದ್ದಲ್ಲಿ ಕೆಲಸ ಕೊಡು, ಕೂಲಿಕೊಡು’ ಎನ್ನುವುದು ಹೋಗಿ ಈಗ ‘ಕೇಂದ್ರ ದಯಪಾಲಿಸಿದರೆ ಮಾತ್ರ ಕೆಲಸೆ ಎಂದಾಗುತ್ತದೆ”‌ ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಮೋದಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಗೆ ಹೆದರಿದ್ದೇಕೆ?

“ಮನರೇಗಾದಲ್ಲಿ ಕೆಲಸ ಕೊಡುವ ಜವಾಬ್ದಾರಿ ಪಂಚಾಯಿತಿಯೆಂದರೆ ರಾಜ್ಯ ಸರ್ಕಾರದ್ದು, ಕೆಲಸಗಾರರ ಕೂಲಿಯ ಸಂಪೂರ್ಣ ಮೊತ್ತವನ್ನು ಮತ್ತು ಸಾಮಗ್ರಿ-ಸಲಕರಣೆಗಳ ವೆಚ್ಚದ ‌ಶೇ.75ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿತ್ತು. ‘ವಿಬಿ-ಜಿ ರಾಮ್‌ ಜಿ’ ಕಾನೂನಿನ ಪರಿಚ್ಛೇದ 22(2)ರ ಪುಕಾರ, ಕೇಂದ್ರ ಮತ್ತು ರಾಜ್ಯಗಳ ನಡುವೆ ವೆಚ್ಚದ ಹಂಚಿಕೆಯ ಪ್ರಮಾಣ 60:40 ಇರುತ್ತದೆ. ರಾಜ್ಯ ಸರ್ಕಾರಗಳ ಮೇಲೆ ಇಷ್ಟು ದೊಡ್ಡ ಹೊರ ಹೊರೆಸುವುದರಿಂದ ಕೂಲಿ ಪಾವತಿಯಲ್ಲಿ ಆಗುವ ವಿಳಂಬ, ಅನಿಶ್ಚಿತತೆಗಳು ನಿತ್ಯದ ಗೋಳಾಗುತ್ತದೆ. ಕೂಲಿಯನ್ನೂ ತಾನೇ ಕೊಡಬೇಕಾಗಿ ಬಂದಾಗ ರಾಜ್ಯ ಸರ್ಕಾರವು ಕೆಲಸ ಕೊಡುವುದನ್ನೇ ಕಡಿಮೆ ಮಾಡಬಹುದು”‌ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫಕೀರವ್ವ, ಲಕ್ಷಮವ್ವ, ಪ್ರಭಾವತಿ, ಶಿವಬಾಯವ್ವ, ಹನಮವ್ವ, ಗೌರಮ್ಮ, ಮೀನಾಕ್ಷಿ, ಶಿವನಗೌಡ ಕರಿಗೌಡ, ಯಲ್ಲಪ್ಪ, ಈರಮ್ಮ, ಶಿವಕ್ಕ, ಶಂಕ್ರವ್ವ, ಪಾರ್ವತವ್ವ, ಲಕ್ಕವ್ವ, ಗೀತಾ ಹಾಗೂ ಶಿಲ್ಪಾ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಯುಕೆಪಿ-3ರ ಭೂಸ್ವಾಧೀನ ಜಮೀನುದಾರರಿಗೆ ಪರಿಹಾರ ವಿತರಣೆ

ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 14 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ...

ಬಾಗಲಕೋಟೆ | ಹಲ್ಲೆಗೋಳಗಾಗಿದ್ದ ದಲಿತ ಯುವಕ ಸಾವು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ...

ಇಳಕಲ್ | ಗೊರಬಾಳ ಗ್ರಾಪಂನಲ್ಲಿ ಭ್ರಷ್ಟಾಚಾರ ಆರೋಪ; ತನಿಖೆಗೆ ಒತ್ತಾಯ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮ ಪಂಚಾಯತ್‌ನಲ್ಲಿ 15ನೇ ಹಣಕಾಸು...

ಇರಾನ್‌ ಯುದ್ಧ | ವಿಜಯಪುರ-ಬಾಗಲಕೋಟೆ ಹೋಟೆಲ್‌ಗಳಿಗೆ ಸ್ವಲ್ಪ ತೊಂದರೆ: ಗೃಹಬಳಕೆ ಸಿಲಿಂಡರ್‌ಗಿಲ್ಲ ಕೊರತೆ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ...