ಬಾಗಲಕೋಟೆ | ಇಸ್ರೇಲ್‌ ತಂತ್ರಜ್ಞಾನ; ರೈತರಿಗೆ ಜಾಗೃತಿ ಮೂಡಿಸುವ ಮೂಲಕ ಟನ್‌ಗಟ್ಟಲೆ ಟೊಮೆಟೊ ಬೆಳೆದ ತೋಟಗಾರಿಕೆ ವಿವಿ

Date:

ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಕೆಜಿಗೆ ₹200 ದಾಟಿತ್ತು. ಆ ವೇಳೆ ರೈತರು ಟೊಮೆಟೊವನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯಬೇಕು ಎನ್ನುವುದನ್ನು ತೋರಿಸಿಕೊಡುವ ಉದ್ದೇಶದಿಂದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದವರು ಒಂದು ಎಕರೆಯಲ್ಲಿ ಟೊಮೆಟೊ ಬೆಳೆ ಬಿತ್ತನೆ ಮಾಡುವ ಮೂಲಕ ರೈತರಿಗೆ ತರಬೇತಿ ನೀಡಿದ್ದರು.

ತರಬೇತಿಗೆ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಯಿಂದ ಇದೀಗ 20 ಟನ್‌ ಟೊಮೆಟೊ ಫಸಲು ಬಂದಿದೆ. ಆದರೆ ಈಗ ಬೆಲೆ ಇಲ್ಲ. ಆದರೆ ಬೆಳೆದ ಟೊಮೆಟೊ ಕೊಳೆಯಲು ಬಿಡದೆ ಟೊಮೆಟೊ ಉಪ ಉತ್ಪನ್ನಗಳನ್ನು ಮಾಡಿದ್ದಾರೆ. ಇನ್ನೂ ಉಳಿದಿದ್ದನ್ನು ಉಚಿತವಾಗಿ ಬಾಗಲಕೋಟೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ.

ತರಕಾರಿ ಬೆಳೆಗಳು ಕೆಲವೊಮ್ಮೆ ಬಂಪರ್‌ ಬೆಲೆ ತಂದರೆ ಮತ್ತೆ ಕೆಲವು ಬಾರಿ ದರವೇ ಸಿಗದೆ ಬೀದಿಗೆ ಬಿದ್ದ ಉದಾಹರಣೆಗಳೂ ಇವೆ. ಇದರಿಂದ ಬಹುಪಾಲು ತೊಂದರೆಯಾಗುವುದು ರೈತರಿಗೆ. ಇಂತಹ ಸಂದರ್ಭದಲ್ಲಿ ಬೆಳೆಗಳನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯಬೇಕು, ಮಾರುಕಟ್ಟೆಯನ್ನು ರೂಪಿಸಿಕೊಳ್ಳುವುದು ಹೇಗೆ ಎನ್ನುವ ಕುರಿತು ರೈತರಿಗೆ ನಿಯಮಿತವಾಗಿ ತರಬೇತಿಗಳು ಬೇಕಾಗುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂತಹ ಉದ್ದೇಶದಿಂದಲೇ ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ರೈತರಿಗೆ ಟೊಮೆಟೊ ಬೆಳೆ ತರಬೇತಿ ಯೋಜನೆ ರೂಪಿಸಿತು. ಹದಿನೈದು ವರ್ಷದ ಇತಿಹಾಸ ಇರುವ ತೋಟಗಾರಿಕೆ ವಿಶ್ವವಿದ್ಯಾಲಯ ಇಪ್ಪತ್ತು ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಆಗಾಗ ವಿಸ್ತರಣಾ ಚಟುವಟಿಕೆ ರೂಪಿಸುತ್ತಲೇ ಬರುತ್ತಿದೆ.

ಜೂನ್‌ ಜುಲೈನಲ್ಲಿ ಟೊಮೆಟೊ ಬೆಳೆ ಗಗನಕ್ಕೇರಿತ್ತು. ಟೊಮೆಟೊ ಸಿಕ್ಕರೆ ಸಾಕು ಎಂದು ಎಷ್ಟೋ ಜನ ಕಡಿಮೆ ದರಕ್ಕೆ ವಿಚಾರಿಸುತ್ತಿದ್ದರೆ, ಬಹುತೇಕ ರೈತರು ನಾನೂ ಟೊಮೆಟೊ ಬೆಳೆದಿದ್ದರೆ ಚೆನ್ನಾಗಿತ್ತು ಎಂದು ಕೈ ಕೈ ಹಿಸುಕಿಕೊಂಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಬಿಟ್ಟರೆ ಬಹುತೇಕ ಎಲ್ಲ ಜಿಲ್ಲೆಗಳ ರೈತರ ಸ್ಥಿತಿಯೂ ಹೀಗೆಯೇ ಆಗಿತ್ತು.

ಈ ವೇಳೆಯನ್ನೇ ಬಳಸಿಕೊಂಡ ತೋಟಗಾರಿಕೆ ವಿಶ್ವವಿದ್ಯಾಲಯ ರೈತರಿಗೆ ಆಸಕ್ತಿ ಇರುವಾಗಲೇ ತರಬೇತಿ ಆಯೋಜಿಸಬೇಕು ಎಂದು ನಿರ್ಧರಿಸಿ, ಇಸ್ರೇಲ್‌ ಸೇರಿದಂತೆ ಹಲವು ದೇಶಗಳಿಗೆ ತರಬೇತಿಗೆಂದು ಹೋಗಿ ಬಂದಿರುವ ವಿಶ್ವವಿದ್ಯಾನಿಲಯದ ವಿಜ್ಞಾನಿಯೂ ಆಗಿರುವ ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಸೂಗೂರು ಅವರ ತಂಡ ರೈತರಿಗೆ ತಿಂಗಳ ತರಬೇತಿಯನ್ನು ರೂಪಿಸಿತು. ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಅದರಲ್ಲೂ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಗದಗ ಸೇರಿದಂತೆ ಹಲವು ಜಿಲ್ಲೆಗಳ ಆಯ್ದ ರೈತರನ್ನು ಆಯ್ದುಕೊಂಡು ತರಬೇತಿ ಆರಂಭಿಸಿತು.

ಬರೀ ಪಾಠದ ರೂಪದಲ್ಲಿರುವುದಕ್ಕಿಂತ ಪ್ರಾಯೋಗಿಕವಾಗಿ ತರಬೇತಿ ಇರಲಿ ಎಂದು ಬಾಗಲಕೋಟೆ ನವನಗರದಲ್ಲಿರುವ ಒಂದು ಎಕರೆ ಭೂಮಿಯನ್ನು ಅಣಿಗೊಳಿಸಿದರು.

ಒಂದು ಎಕರೆ ಭೂಮಿಯಲ್ಲಿ ಹೇಗೆ ಟೊಮೆಟೊ ಬೆಳೆಬಹುದು ಎನ್ನುವುದನ್ನು ತೋರಿಸಲು ಸುಮಾರು ಒಂದು ಲಕ್ಷ ರೂ. ವೆಚ್ಚ ಮಾಡಿ ಪುಟ್ಟ ಕಂಬಗಳು, ಅದಕ್ಕೆ ತಂತಿ ಅಳವಡಿಸಿದರು. ಟೊಮೆಟೊ ನೆಲಕ್ಕೆ ಬೀಳದಂತೆ ಆ ತಂತಿಗಳು ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟರು. ಮೊದಲು ಸಿಂಧು ಎನ್ನುವ ತಳಿಯ ಟೊಮೆಟೊ ಬಿತ್ತನೆ ಮಾಡಿದರು. ಇದು ಮೂರು ತಿಂಗಳ ಬೆಳೆಯಾಗಿದ್ದರಿಂದ ಬೆಳೆ ಬೆಳಯುವ ವಿಧಾನ, ಬಿತ್ತನೆ ಬೀಜ ಸಂಗ್ರಹ, ಉಳುಮೆಗೆ ಸಿದ್ದತೆ, ರಕ್ಷಣೆ, ನೀರಿನ ನಿರ್ವಹಣೆ, ನೀರಿನ ಬಾಷ್ಪೀಕರಣ, ಬೆಳೆ ಕೊಯ್ಲು ಕರಗುವ ಗೊಬ್ಬರ ಬಳಕೆ ಸಹಿತ ಹಲವು ಅಂಶಗಳನ್ನು ರೈತರಿಗೆ ತಿಳಿಸಿಕೊಡಲಾಯಿತು. ಇದರೊಟ್ಟಿಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡರೆ ಖರ್ಚು ತಗ್ಗಲಿದೆ. ಇಳುವರಿ ಹೆಚ್ಚಲಿದೆ. ಕೃಷಿಯೂ ಇನ್ನಷ್ಟು ವೃತ್ತಿಪರವಾಗಲಿದೆ ಎನ್ನುವ ಅಂಶಗಳನ್ನು ಇಸ್ರೇಲ್‌ ಸಹಿತ ಹಲವು ದೇಶಗಳ ಮಾದರಿಗಳನ್ನು ವಿವರಿಸಲಾಯಿತು. ತರಬೇತಿ ಪಡೆದ ರೈತರೂ ತರಗತಿ ಜತೆಗೆ ಪ್ರಾಯೋಗಿಕ ತರಬೇತಿಯಿಂದ ಖುಷಿಯಾಗಿದ್ದಾರೆ.

ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯೊಂದನ್ನು ಬೆಳೆದಿರಲಿಲ್ಲ. ಅದರಲ್ಲೂ ಭಾರೀ ಬೇಡಿಕೆಯಾಗಿದ್ದ ಟೊಮೆಟೊವನ್ನು ಬೆಳೆದು ತೋರಿಸಿದರೆ ಪರಿಣಾಮಕಾರಿಯಾಗಿರಲಿದೆ ಎಂದು ಪ್ರಯತ್ನಿಸಿದ್ದಕ್ಕೆ ಅದು ಫಲವನ್ನೂ ನೀಡಿತ್ತು. ಎರಡು ತಿಂಗಳು ಆಗುವ ಹೊತ್ತಿಗೆ ಉತ್ತಮ ಫಸಲು ಬಂದಿತು. ಈಗ ಬರೋಬ್ಬರಿ 20 ಟನ್‌ ಟೊಮೆಟೊ ಬಂದಿದ್ದು. ಇನ್ನೂ 10 ಟನ್‌ ಫಸಲು ದೊರೆಯುವ ನಿರೀಕ್ಷೆಯಿದೆ.

ಈಗಾಗಲೇ ಬೆಳೆ ಬರುವ ಹೊತ್ತಿಗೆ ದರವೂ ಕುಸಿದಿದೆ. ತೋಟಗಾರಿಕೆ ವಿಶ್ವವಿದ್ಯಾನಿಲಯ ಪ್ರಾಯೋಗಿಕವಾಗಿ ಇದನ್ನು ರೂಪಿಸಿದ್ದರಿಂದ ಟೊಮೆಟೊದಿಂದ ಜಾಮ್‌, ಜ್ಯೂಸ್‌ ಸಹಿತ ಇತರೆ ಉತ್ಪನ್ನಗಳ ತಯಾರಿಯ ತರಬೇತಿಯನ್ನೂ ನೀಡಲಾಯಿತು. ಬಾಗಲಕೋಟೆಯಲ್ಲಿರುವ ಹಲವು ವಿದ್ಯಾರ್ಥಿ ನಿಲಯಗಳಿಗೆ ಟೊಮೆಟೊ ಸರಬರಾಜಾಗಿದೆ.

“ನಮ್ಮ ಇಡೀ ಬೆಳೆ ಬೆಳೆಯಲು 45 ಸಾವಿರ ರೂ. ಸಾಕಾಗಿತ್ತು. ಆದರೆ ಕಬ್ಬಿಣದ ಕಂಬ, ತಂತಿ ಎಲ್ಲವನ್ನೂ ಅಳವಡಿಸಿದ್ದರಿಂದ ಒಂದು ಲಕ್ಷ ರೂ.ಗೆ ಖರ್ಚು ತಲುಪಿತು. ಟೊಮೆಟೊ 70 ದಿನಗಳ ಬೆಳೆ. ಅಂದರೆ ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿಯಾದರೂ ಬೆಳೆಯಬಹುದು. ಬೇಡಿಕೆ, ಮಾರುಕಟ್ಟೆ ಸ್ಥಿತಿಗತಿ ನೋಡಿಕೊಂಡು ರೈತರು ಬೆಳೆಯಬಹುದು. ಬೇಸಿಗೆಯಲ್ಲಿ ನೀರಿನ ಲಭ್ಯತೆ ಇಲ್ಲದೇ ಇರುವುದರಿಂದ ಇದರ ಬೆಳೆ ಕಷ್ಟ, ಬೇರೆ ಸಮಯದಲ್ಲಿ ಕಷ್ಟ ಆಗದು. ಮುಂದಿನ ಹತ್ತು ವರ್ಷದವರೆಗೂ ತರಬೇತಿ ನೀಡಬಹುದಾದ ವ್ಯವಸ್ಥೆಯನ್ನು ತೋಟಗಾರಿಕೆ ವಿವಿಯಲ್ಲಿ ಮಾಡಿದ್ದೇವೆ. ಈ ಪ್ರಯೋಗದಿಂದ ರೈತರೂ ಹಲವಾರು ವಿಷಯ ತಿಳಿದುಕೊಂಡಿದ್ದಾರೆ” ಎಂದು ತರಬೇತಿ ಉಸ್ತುವಾರಿ ಹೊತ್ತಿದ್ದ ಡಾ.ಪ್ರಸನ್ನ ಸೂಗೂರು ತಿಳಿಸಿದರು.

“ಇಸ್ರೇಲ್‌ನಲ್ಲಿ ತಂತ್ರಜ್ಞಾನ ಬಳಕೆ ಜತೆಗೆ ನೀರಿನ ಬಳಕೆಯನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಅಲ್ಲಿನ ರೈತರಿಗೆ ಮಾರುಕಟ್ಟೆಯ ವಾತಾವರಣದ ಅರಿವಿದೆ. ನಮ್ಮ ರೈತರಲ್ಲಿ ಇನ್ನೂ ಮಾರುಕಟ್ಟೆ, ತಂತ್ರಜ್ಞಾನ ಬಳಕೆ ಅಷ್ಟಾಗಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಈಗ ತರಬೇತಿ ನೀಡಿದ್ದು, ನಿರಂತರವಾಗಿ ಅವರನ್ನು ಉನ್ನತೀಕರಿಸುತ್ತೇವೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಯುಕೆಪಿ-3ರ ಭೂಸ್ವಾಧೀನ ಜಮೀನುದಾರರಿಗೆ ಪರಿಹಾರ ವಿತರಣೆ

ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 14 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ...

ಬಾಗಲಕೋಟೆ | ಹಲ್ಲೆಗೋಳಗಾಗಿದ್ದ ದಲಿತ ಯುವಕ ಸಾವು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ...

ಇಳಕಲ್ | ಗೊರಬಾಳ ಗ್ರಾಪಂನಲ್ಲಿ ಭ್ರಷ್ಟಾಚಾರ ಆರೋಪ; ತನಿಖೆಗೆ ಒತ್ತಾಯ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮ ಪಂಚಾಯತ್‌ನಲ್ಲಿ 15ನೇ ಹಣಕಾಸು...

ಇರಾನ್‌ ಯುದ್ಧ | ವಿಜಯಪುರ-ಬಾಗಲಕೋಟೆ ಹೋಟೆಲ್‌ಗಳಿಗೆ ಸ್ವಲ್ಪ ತೊಂದರೆ: ಗೃಹಬಳಕೆ ಸಿಲಿಂಡರ್‌ಗಿಲ್ಲ ಕೊರತೆ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ...