ಕೇಂದ್ರ ಬಿಜೆಪಿಯ ನೇತೃತ್ವದ ಎನ್ಡಿಎ ಸರ್ಕಾರದ ಈ ವರ್ಷದ ಬಜೆಟ್ ಜನ ಸಾಮಾನ್ಯರಿಗೆ ನಿರಾಶೆ ತಂದಿದ್ದು, ಕಾರ್ಪೊರೇಟ್ ಪರ ಮತ್ತು ಅಕ್ಷರಶಃ ಜನವಿರೋಧಿ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಬಾಗಲಕೋಟೆ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ದಿನಸಿ ವಸ್ತುಗಳು, ಇಂಧನ, ಗ್ಯಾಸ್, ವಿದ್ಯುತ್ ದರಗಳ ಏರಿಕೆಗೆ ಯಾವುದೇ ನೈಜ ಪರಿಹಾರ ಇಲ್ಲ. ದುಬಾರಿಯಿಂದ ಬಳಲುತ್ತಿರುವ ಮಧ್ಯಮ ವರ್ಗ ಮತ್ತು ಬಡವರ ಮೇಲೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ. ದುಬಾರಿ ಬೆಲೆ ನಿಯಂತ್ರಣಕ್ಕೆ ಒಂದೇ ಒಂದು ಬಲವಾದ ಘೋಷಣೆಯೂ ಇಲ್ಲ. ಪ್ರತಿ ಬಾರಿಯೂ ಎನ್ಡಿಎ ಸರ್ಕಾರ ಹೀಗೇ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




