ಸಂಘ ಸಂಸ್ಥೆಯ ಪದಾಧಿಕಾರಿಗಳು ಹೊರಗಿನ ಹೋರಾಟಕ್ಕಿಂತ ನಮ್ಮ ಒಳಗಿನಿಂದ ಹೋರಾಟ ಪ್ರಾರಂಭಿಸಬೇಕು. ಬುದ್ಧ, ಬಸವ, ಅಂಬೇಡ್ಕರವರು ನೀಡಿದ ತತ್ವಗಳನ್ನು ನಾವು ಮೊದಲು ನಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸುವದರ ಮುಖಾಂತರ ಹೋರಾಟ ಪ್ರಾರಂಭಿಸಬೇಕು” ಎಂದು ವಿಜಯ ಮಹಾಂತೇಶ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬೋಧಿಸತ್ವ ಗೌತಮಬುದ್ಧ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ), ಜಮಖಂಡಿ ಕಾರ್ಯಾಲಯದಲ್ಲಿ ಸರಳ ಸಾಮೂಹಿಕ ವಿವಾಹದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, “ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ,ಸಮಾಜದಲ್ಲಿ ತಾರತಮ್ಯ ನಿವಾರಣೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕು” ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಪರಶುರಾಮ ಕಾಂಬಳೆ ಮಾತನಾಡಿ, “ಸಮಾಜದಲ್ಲಿ ಎಲ್ಲ ರೀತಿಯ ಅಸಮತೋಲನ ಕಡಿಮೆಯಾಗಿ ಸಮಾಜದ ಯುವಕ, ಯುವತಿಯರಲ್ಲಿ ಮೂಡನಂಬಿಕೆ ಸಂಪ್ರದಾಯ ಹೋಗಲಾಡಿಸಿ ವೈಜ್ಞಾನಿಕ ಮನೋಭಾವನೆ ಮೂಡಿಸುವದರ ಜೊತೆಗೆ ಎಲ್ಲ ಜಾತಿಯ ಬಡವರಿಗೆ ಅನಕೂಲವಾಗುವ ದೃಷ್ಟಿಯಿಂದ ಬೌದ್ಧ ದಮ್ಮದ ವಿಧಿ-ವಿಧಾನಗಳೊಂದಿಗೆ ೨೧ ಜೋಡಿ ಉಚಿತ ಸರಳ ಸಾಮೂಹಿಕ ವಿವಾಹ ಮಾಡಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
“ವಧು-ವರರ ನೊಂದಣಿ ದಿನಾಂಕ: ೧೦-೦೩-೨೦೨೬ ರಿಂದ ೧೦-೦೪-೨೦೨೬ ರ ವರೆಗೆ ಇರುತ್ತದೆ. ಹಾಗೂ ದಿನಾಂಕ: ೦೫-೦೫-೨೦೨೬ ರಂದು ಜಮಖಂಡಿ ನಗರದಲ್ಲಿ ಸರಳ ಸಾಮೂಹಿಕ ವಿವಾಹ ಜರಗಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಬಸವರಾಜ ದೊಡಮನಿ, ಉಪಾಧ್ಯಕ್ಷರಾದ ಅಡಿವೆಪ್ಪ ಮಾದರ, ಖಜಾಂಚಿಯಾದ ಸದಾಶಿವ ಐನಾಪೂರ ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.





