ರಂಜಾನ್ ಹಬ್ಬವನ್ನು ಎಲ್ಲ ಧರ್ಮದವರೂ ಭಾವೈಕ್ಯತೆಯೊಂದಿಗೆ ಆಚರಿಸುವುದು ಸಮಾಜದ ಸಾಮರಸ್ಯಕ್ಕೆ ಮಾದರಿಯಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅಭಿಪ್ರಾಯಪಟ್ಟರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪೂರ ಪಟ್ಟಣದ ಈದ್ಗಾ ಮೈದಾನದಲ್ಲಿ ಇಂದು ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಶಾಂತಿ, ಸಹಕಾರ ಮತ್ತು ಪರಸ್ಪರ ಗೌರವದ ಮೂಲಕ ಜಿಲ್ಲೆಯ ಅಭಿವೃದ್ಧಿ ಸಾಧಿಸಬೇಕು” ಎಂದು ಒತ್ತಿ ಹೇಳಿದ ಅವರು ಎಲ್ಲರಿಗೂ ರಂಜಾನ್ ಮುಬಾರಕ್ ಶುಭಾಶಯ ಕೋರಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಟ್ಟಡ ಕಾರ್ಮಿಕರ ನಿಧಿ ಬೇರೆ ಯೋಜನೆಗಳಿಗೆ ಬಳಕೆಗೆ ಸಿಐಟಿಯು ವಿರೋಧ, ಶಾಸಕರಿಗೆ ಮನವಿ
ಈ ಸಂದರ್ಭದಲ್ಲಿ ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕಿವಡಿ ವಕೀಲರು, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ್, ಮುಖಂಡರು ಶಿವಾನಂದ ಉದಪುಡಿ, ಅಲ್ಪಸಂಖ್ಯಾತರ ಮುಖಂಡರು ರಫೀಕ್ ಬೈರತಾರ್, ಹಸನ್ ಡೋಂಗ್ರಿ ಮಹಾಲಿಂಗಪೂರ, ಅಬ್ದುಲ್ ರೆಹಮಾನ್ ತೋರಗಲ್ ಸೇರಿದಂತೆ ಹಲವು ಸಮುದಾಯದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರು ಭಾಗವಹಿಸಿದ್ದರು.





