ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಕೆರೆ ರಸ್ತೆಯಲ್ಲಿ ಕಳುವಾಗಿದ್ದ ₹2.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆರೆಯ ರಸ್ತೆಯಲ್ಲಿ ಮುತ್ತಪ್ಪ ಗುಂಡಿಯವರ ಎಂಬ ಹೊಲದಲ್ಲಿ ಅಕ್ಕವ್ವ ಹೂಗಾರ ಎಂಬುವರು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅವರ ಕೊರಳಲ್ಲಿದ್ದ ಹತ್ತು ಗ್ರಾಂ ಚಿನ್ನದ ಆಭರಣ ಮತ್ತು ಐದು ಗ್ರಾಂ ಏಕಸರ ಆಭರಣಗಳನ್ನು ಹೊಸೂರಿನ ಅಬೂಬಕರ ಮುಲ್ಲಾ ಎಂಬುವನು ಕಳ್ಳತನ ಮಾಡಿದ್ದ. ಈ ಕುರಿತು ಅಕ್ಕವ್ವ ಹೂಗಾರ ಬನಹಟ್ಟಿಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಬಾಗಲಕೋಟೆ | ಜನಸಾಮಾನ್ಯರಿಗೆ ಮತ್ತೆ ಬರೆ: ಕೇಂದ್ರ ಬಜೆಟ್ ವಿರುದ್ಧ ನಾಗರಾಜ ಹದ್ಲಿ ಅಸಮಾಧಾನ
ಪ್ರಕರಣದ ಜಾಡು ಹಿಡಿದ ಬನಹಟ್ಟಿಯ ಪಿಎಸ್ಐ ಶಿವರಾಜ ಧರಿಗೋಣ ಮತ್ತು ಕ್ರೈಂ ಪಿಎಸ್ಐ ಪುರಂದರ ಪೂಜಾರಿ ಆರೋಪಿಯನ್ನು ಬಂಧಿಸುವಲ್ಲಿ ಮತ್ತು ಅವನಿಂದ ಚಿನ್ನದ ಆಭರಣಗಳನ್ನು ಮತ್ತು ಕಳ್ಳತನಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.





