ಬಾಗೇಪಲ್ಲಿ:-ತಾಲ್ಲೂಕಿನ ಕಸಬಾ ಹೋಬಳಿ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ರೈತ ಎಲ್.ಮಂಜುನಾಥರೆಡ್ಡಿ ಹೊಲದಲ್ಲಿ ಎಸ್ಆರ್ಟಿ ವಿಧಾನದಲ್ಲಿ ಸಿರಿಧಾನ್ಯಗಳ ಬೆಳೆಸುವಿಕೆ ಹಾಗೂ ಪ್ರಾಥಮಿಕ ಸಂಸ್ಕರಣೆ ಕುರಿತು ಪ್ರಾಯೋಗಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿಎಸ್ಆರ್ಟಿ ಕಂಪನಿಯ ಸಿರಿಧಾನ್ಯ ಬೆಳೆಸುವಿಕೆ ಸಂಸ್ಕರಣೆ ಹವಾಮಾನ ಹಾಗೂ ರೈತಸ್ನೇಹಿ ಕೃಷಿ ವಿಧಾನಗಳ ಬಗ್ಗೆ ಗ್ರಾಮದ ರೈತರಿಗೆ ರೈತ ಸಂಘಟನೆಗಳ ಮುಖಂಡರಿಗೆ ಹಾಗೂ ಬೆಸ್ಟ್ ಯುನಿವರ್ಸಟಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಸಿರಿಧಾನ್ಯಗಳನ್ನು ಬೆಳೆಯುವ ರೈತರ ಕಡಿಮೆ ಆಗುತ್ತಿದೆ ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಾಗುವುದರಿಂದ ರೈತರ ಆರ್ಥಿಕ ಸ್ಥಿತಿ ಬಲಗೊಳ್ಳುವುದಲ್ಲದೆ ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ ಆದರೆ ಇಂದಿನ ದಿನಗಳಲ್ಲಿ ರೈತರು ಸಿರಿ ಧಾನ್ಯಗಳನ್ನು ಬೆಳೆಯುವುದು ವಿರಳವಾಗಿದೆ.ಇದರಿಂದ ಎಸ್ಆರ್ಟಿ ವಿಧಾನದಲ್ಲಿ ಸಿರಿಧಾನ್ಯ ಬೆಳೆ, ಸಂಸ್ಕರಣೆ, ಲಾಭದ ಬಗ್ಗೆ ರೈತರು ಅರಿವು ಪಡೆದುಕೊಳ್ಳಬೇಕು ಸಿರಿಧಾನ್ಯಗಳಿಗೆ ಜೈವಿಕ ಗೊಬ್ಬರ ಮುಖ್ಯ ಸಿರಿಧಾನ್ಯ ಸೇವಿಸುವುದರಿಂದ ಹೃದಯ ಸಂಬಂಧಿತ ರೋಗ ತಡೆಯಬಹುದು.
ಹೊಲದಲ್ಲಿ ಟ್ರ್ಯಾಕ್ಟರ್ ಮಾದರಿಯ ಯಂತ್ರದಿಂದ ಸಿರಿಧಾನ್ಯ ಬಿತ್ತುವುದು ಸಿರಿಧಾನ್ಯ ಬೆಳೆಯುವುದರ ಲಾಭ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಿರಿಧಾನ್ಯಗಳ ತಜ್ಞ ಲಕ್ಷ್ಮಿನಾರಾಯಣರೆಡ್ಡಿ ಪರಿಚಯ ಮಾಡಿದರು.
ಸಿರಿಧಾನ್ಯಗಳನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗುತ್ತಿದೆ ಇದರಿಂದ ಎಸ್ಆರ್ಟಿ ವಿಧಾನದಲ್ಲಿ ಸಿರಿಧಾನ್ಯ ಬೆಳೆ ಸಂಸ್ಕರಣೆ ಲಾಭದ ಬಗ್ಗೆ ರೈತರು ಅರಿವು ಪಡೆದುಕೊಳ್ಳಬೇಕು ಸಿರಿಧಾನ್ಯಗಳಿಗೆ ಜೈವಿಕ ಗೊಬ್ಬರ ಮುಖ್ಯ ಸಿರಿಧಾನ್ಯ ಸೇವಿಸುವುದರಿಂದ ಹೃದಯ ಸಂಬಂಧಿತ ರೋಗ ತಡೆಯಬಹುದು ಎಂದರು.
ಇದನ್ನು ಓದಿದ್ದೀರಾ..? ಅಪಘಾತ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪೊಲೀಸ್ ವಾಹನ
ಸೆಲ್ಕೋ ಫೌಂಡೇಷನ್ನ ಜಗದೀಶ್, ರೋಹಿತ್ ಐಎನ್ಎವಿ ಕಂಪನಿ ವೆಂಕಟರಾವ್, ಎಸ್ಆರ್ಟಿ ಫೌಂಡೇಷನ್ ಪರಶುರಾಮ್ ಮತ್ತು ಮಯೂರ್, ರೈತ ಮುಖಂಡ ಜಿ.ಎಂ.ರಾಮಕೃಷ್ಣಪ್ಪ, ಪ್ರಾಂತ ರೈತ ಮುಖಂಡ ಹೊಸಹುಡ್ಯ ಶ್ರೀನಿವಾಸರೆಡ್ಡಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕೃಷಿ ಅಧಿಕಾರಿ ನಾರಾಯಣರೆಡ್ಡಿ, ಎಚ್.ಟಿ.ಗೋವಿಂದಪ್ಪ, ಎಚ್.ವಿ.ಭಾಸ್ಕರ ಇದ್ದರು.





