ಬೆಂಗಳೂರು | ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ; ನ.23, 24ರಂದು 29ನೇ ವಾರ್ಷಿಕ ಸಾಮಾನ್ಯ ಸಭೆ

Date:

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ 29ನೇ ವಾರ್ಷಿಕ ಸಾಮಾನ್ಯ ಸಭೆ ಹಮ್ಮಿಕೊಂಡಿದ್ದು, ಬೆಂಗಳೂರು ನಗರದ ದಾರುಲ್ ಉಲೂಮ್ ಸಬೀಲ್ ಉರ್ ರಶಾದ್ ಕ್ಯಾಂಪಸ್‌ನಲ್ಲಿ ನವೆಂಬರ್‌ 23, 24ರಂದು ಕಾರ್ಯಕ್ರಮ ನಡೆಯಲಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಎಲ್ಲ ಮುಸ್ಲಿಂ ಪಂಗಡ, ಚಿಂತನ ಶ್ರೇಣಿಗಳು ಮತ್ತು ಸಮುದಾಯದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಪ್ರತಿಷ್ಠಿತ ಐಕ್ಯ ಮತ್ತು ಸಾಮಾನ್ಯ ವೇದಿಕೆಯಾಗಿದೆ. ಇದು ದೇಶದಲ್ಲಿ ಷರಿಯತ್ ಇಸ್ಲಾಂ ಮತ್ತು ಇಸ್ಲಾಮಿಕ್ ಆಚರಣೆಗಳ ರಕ್ಷಣೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಕಳೆದ 52 ವರ್ಷಗಳಿಂದ, ಷರಿಯಾ ವಿಷಯಗಳಲ್ಲಿ ಮುಸ್ಲಿಮರ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ. ದೇಶದಲ್ಲಿ ಇಸ್ಲಾಮಿಕ್ ಷರಿಯಾ ಮತ್ತು ಇಸ್ಲಾಮಿಕ್ ಆಚರಣೆಗಳ ರಕ್ಷಣೆಯ ಜವಾಬ್ದಾರಿಯನ್ನು ಮಂಡಳಿಯು ಹೊಂದಿದೆ. ಮುಸ್ಲಿಮರಲ್ಲಿ ಇಸ್ಲಾಮಿಕ್ ಷರಿಯಾದ ಆಚರಣೆಯ ಸರಪಳಿಯ ಒಂದು ಚಳುವಳಿಯನ್ನು ನಡೆಸುತ್ತದೆ. ಇದರಿಂದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಭಾರತದಲ್ಲಿ ಇಸ್ಲಾಮಿಕ್ ಷರಿಯಾ ಮತ್ತು ಇಸ್ಲಾಮಿಕ್ ಆಚರಣೆಗಳ ಮೇಲಿನ ದಾಳಿಯನ್ನು ಸದೆಬಡಿಯಲು ಅಧಿಕೃತ, ನ್ಯಾಯಾಂಗ ಮತ್ತು ಸಾರ್ವಜನಿಕ ಮಟ್ಟದಲ್ಲಿ ಹೋರಾಡುತ್ತದೆ. ಸಮಾಜವನ್ನು ಸುಧಾರಿಸುವ ಶೀರ್ಷಿಕೆಯಡಿಯಲ್ಲಿ, ಮುಸ್ಲಿಮರಲ್ಲಿ ಇಸ್ಲಾಮಿಕ್ ಷರಿಯಾದ ರಕ್ಷಣೆ ಮತ್ತು ಅದರ ಅನುಸರಣೆಯನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು 1973ರಲ್ಲಿ ಭಾರತದಲ್ಲಿ ಮುಸ್ಲಿಮರಲ್ಲಿ ಷರಿಯಾ ಕಾನೂನಿನ ಅನ್ವಯವನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮುಸ್ಲಿಂ ಮಹಿಳೆಯರ(ವಿಚ್ಚೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, ಷಾ ಬಾನೊ ಮೊಕದ್ದಮೆ, ಏಕರೂಪ ನಾಗರಿಕ ಸಂಹಿತೆ ಪ್ರಕರಣ, ಬಾಬರಿ ಮಸೀದಿ ಪ್ರಕರಣಗಳು ಸೇರಿದಂತೆ ದೇಶದ ವಿವಿಧ ಪ್ರಮುಖ ಸಮಸ್ಯೆಗಳು, ವಕ್ಫ್‌(ತಿದ್ದುಪಡಿ) ಮಸೂದೆ 2014 ಮತ್ತು ತ್ರಿವಳಿ ತಲಾಖ್ ಸಮಸ್ಯೆ ಇತ್ಯಾದಿ ಚರ್ಚೆಗಳಲ್ಲಿ ಪಾಲ್ಗೊಂಡಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ರಕ್ಷಣೆಯನ್ನು ಪ್ರತಿಪಾದಿಸುವಲ್ಲಿ ಮತ್ತು ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸುವ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಮಂಡಳಿಯು ಸಕ್ರಿಯವಾಗಿ ಪಾತ್ರ ವಹಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಷರಿಯಾ ದೃಷ್ಠಿಕೋನದಿಂದ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ಮತ್ತು ಕ್ರಿಯಾ ಯೋಜನೆಯನ್ನು ರೂಪಿಸಲು ದೇಶದ ವಿವಿಧ ಸ್ಥಳಗಳಲ್ಲಿ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತದೆ. ಈ ಹಿಂದೆ 1975 ಮತ್ತು 2000ನೇ ಇಸವಿಯಲ್ಲಿ ಬೆಂಗಳೂರು ನಗರದಲ್ಲಿ ಮಂಡಳಿಯ ಎರಡು ಸಾಮಾನ್ಯ ಸಭೆಗಳು ನಡೆದಿವೆ. ಇದೀಗ 2024ರ ನವೆಂಬರ್ 23, 24ರಂದು, 24 ವರ್ಷಗಳ ನಂತರ, ಉದ್ಯಾನ ನಗರಿ ಬೆಂಗಳೂರು ಮೂರನೇ ಬಾರಿಗೆ ಕಾರ್ಯಕ್ರಮ ಆಯೋಜಿಸುವ ಗೌರವವನ್ನು ಪಡೆಯುತ್ತಿದೆ.

ದೇಶದ ಇಂದಿನ ಪರಿಸ್ಥಿತಿ ಮತ್ತು ಷರಿಯಾ ಹಾಗೂ ಇಸ್ಲಾಮಿಕ್ ಆಚರಣೆಗಳ ಕಾನೂನುಗಳಿಗೆ ಒಡ್ಡಿದ ಬೆದರಿಕೆಗಳು ಇದಕ್ಕಿಂತ ಇದು ಹಿಂದೆಂದೂ ಹೆಚ್ಚು ತೀವ್ರವಾಗಿರಲಿಲ್ಲ. ಆದ್ದರಿಂದ ಬೆಂಗಳೂರಿನ ಈ ಸಭೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಎಲ್ಲ ರಾಜ್ಯಗಳ ಧಾರ್ಮಿಕ ಗುರುಗಳು, ವಿದ್ಯಾಂಸರು ಮತ್ತು ಬುದ್ಧಿಜೀವಿಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಭೆಯ ವ್ಯವಸ್ಥೆಗಾಗಿ ಮತ್ತು ಗಣ್ಯರ ಆತಿಥ್ಯಕ್ಕಾಗಿ, ಅಮೀರ್ ಶರೀಯತ್ ಕರ್ನಾಟಕ ಹಜರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ಸಾಹಿಬ್ ರಶಾದಿ, ಮೊಹತಮಿಮ್ ಮತ್ತು ಶೇಖ್ ಉಲ್ ಹದೀಸ್ ದಾರುಲ್ ಉಲೂಮ್ ಸಬೀಲ್ ಅಲ್ ರಶಾದ್, ಬೆಂಗಳೂರು ಇವರ ನೇತೃತ್ವದಲ್ಲಿ “ಸ್ವಾಗತ ಮಂಡಳಿ”ಯನ್ನು ರಚಿಸಲಾಗಿದೆ. ಉಪಸಮಿತಿಗಳನ್ನೂ ಕೂಡ ರಚಿಸಲಾಗಿದೆ. ಈ ಎಲ್ಲ ಸಮಿತಿಗಳು ಸಭೆಯನ್ನು ಯಶಸ್ವಿಗೊಳಿಸಲು ತಮ್ಮ ನಿಯೋಜಿತ ಜವಾಬ್ದಾರಿಗಳ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿವೆ.

ನವೆಂಬರ್ 23ರಂದು ಬೆಳಿಗ್ಗೆಯಿಂದ ನವಂಬರ್ 24ರ ಮಧ್ಯಾಹ್ನದವರೆಗೆ, ಮಂಡಳಿಯ ಸಭೆಗಳು ದಾರುಲ್ ಉಲೂಮ್ ಸಬೀಲ್ ಅಲ್-ರಶಾದ್ ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಇದರಲ್ಲಿ ಮಂಡಳಿಯ ಸದಸ್ಯರು ಮತ್ತು ವಿಶೇಷ ಅತಿಥಿಗಳು ಭಾಗವಹಿಸಿ ವಿವಿಧ ಸಮಸ್ಯೆಗಳು ಮತ್ತು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಎರಡು ದಿನಗಳ ಈ ಸಭೆಯ ಕೊನೆಯಲ್ಲಿ ಅಂದರೆ ನವೆಂಬರ್ 24ರಂದು ಅಸರ್ ನಮಾಝಿನ ನಂತರ ಮಿಲ್ಲರ್ಸ್ ರಸ್ತೆಯ ಖುದ್ರೂಸ್ ಸಾಹಿಬ್ ಈದ್ಯಾದಲ್ಲಿ “ಷರಿಯಾ ರಕ್ಷಣೆ ಮತ್ತು ಔಕಾಫ್ ರಕ್ಷಣೆ” ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಗಣ್ಯರು ರಾಷ್ಟ್ರಾದ್ಯಂತ ವಿದ್ವಾಂಸರು ಮತ್ತು ಬುದ್ಧಿಜೀವಿಗಳ ಭಾಷಣಗಳು ನಡೆಯುತ್ತವೆ. ಈ ಸಭೆಯಲ್ಲಿ ನಗರ ಮತ್ತು ರಾಜ್ಯದ ಸಾವಿರಾರು ಜನರು ಭಾಗವಹಿಸುತ್ತಾರೆ. ಈ ಸಭೆಯ ಕೊನೆಯಲ್ಲಿ ಬೆಂಗಳೂರು ಘೋಷಣೆಯನ್ನೂ ಹೊರಡಿಸಲಾಗುವುದು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಮುಡಾ ಪ್ರಕರಣ; ನ.6ರಂದು ಅರೆಬೆತ್ತಲೆ ಮೆರವಣಿಗೆಗೆ ದಸಂಸ ಕರೆ

ದೇಶದಲ್ಲಿ ಅವ್ಯಾಫ್ ರಕ್ಷಣೆಗಾಗಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಅವ್ಯಾಫ್ ಮತ್ತು ವಕ್ಫ್ ಕಾನೂನಿನ ರಕ್ಷಣೆಗಾಗಿ ಹೋರಾಟವನ್ನು ನಡೆಸುತ್ತಿದೆ. ಮಂಡಳಿಯ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಸ್ತುತ ಸರ್ಕಾರವು ತಂದಿರುವ ವಕ್ಫ್ ಕುರಿತ ಹೊಸ ಕರಡು ಕಾನೂನನ್ನು ವಿರೋಧಿಸುವ ಐತಿಹಾಸಿಕ ದಾಖಲೆಯನ್ನು ಸಾಮಾನ್ಯ ಮುಸ್ಲಿಮರು ಸ್ಥಾಪಿಸಿದ್ದಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ನಡೆಯಲಿರುವ ಸಭೆ ಐತಿಹಾಸಿಕವಾಗುವುದಲ್ಲದೆ ಇತಿಹಾಸ ನಿರ್ಮಿಸುವ ನಿರೀಕ್ಷೆಯೂ ಇದೆಯೆಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...