ಬೆಂಗಳೂರು | ಬಂಜಾರ ಸಂಸ್ಕೃತಿ, ಕಲೆಗೆ ರಾಷ್ಟ್ರೀಯ ಮಹತ್ವವಿದೆ: ಡಾ. ಎ ಆರ್ ಗೋವಿಂದಸ್ವಾಮಿ

Date:

ಬಂಜಾರ ಸಂಸ್ಕೃತಿ ಮತ್ತು ಕಲೆಗೆ ರಾಷ್ಟ್ರಮಟ್ಟದಲ್ಲಿ ಮಹತ್ವವಿದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಹೇಳಿದರು.

ʼಪ್ರದರ್ಶನ ಕಲೆಗಳಲ್ಲಿ ಬಂಜಾರ ಸಂಸ್ಕೃತಿʼ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಮಾತನಾಡಿ, “ಬಂಜಾರ ಪರಂಪರೆಯಿಂದ ಬಂದ ಬಂಜಾರ ನೃತ್ಯ ಕಲಾವಿದೆ ಮೈಸೂರು ಸಂಸ್ಥಾನದ ವಿದುಷಿ ಪದ್ಮಭೂಷಣ ಡಾ.ವೆಂಕಟಲಕ್ಷಮ್ಮ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಶಿಷ್ಟ ಮೈಸೂರು ಶೈಲಿಯ ನೃತ್ಯವನ್ನು ಬೆಳೆಸಿದರು. ಇವರ ಬಗ್ಗೆ ವಿಚಾರ ಸಂಕಿರಣ ನಡೆದಿರುವುದು ಹೆಮ್ಮೆಯ ಸಂಗತಿ” ಎಂದು ಸ್ಮರಿಸಿದರು.

“ಬಂಜಾರ ಕಲೆ ದೇಶಕ್ಕೆ ಆತ್ಮವಿದ್ದಂತೆ. ಇವುಗಳಲ್ಲಿ ಚತುರ್ವಿಧ ಅಭಿನಯವಿದೆ. ಭರತನಾಟ್ಯ ಶಾಸ್ತ್ರದಲ್ಲಿ ಹೇಳುವ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಅಭಿನಯವೂ ಒಳಗೊಂಡ ಸಂಪೂರ್ಣ ರಂಗಭೂಮಿಯೇ ಇದೆ. ಇವುಗಳನ್ನು ಸಂಶೋಧಕರು ಪರಿಶೀಲಿಸಿ ಮೂಲಕ್ಕೆ ಧಕ್ಕೆ ಬಾರದಂತೆ ಪರಿಷ್ಕರಣೆ ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಬಂಜಾರ ಸಂಸ್ಕೃತಿ 1

ಹಿ ಚಿ ಬೋರಲಿಂಗಯ್ಯ ಮಾತನಾಡಿ, “ಬಂಜಾರರ ಕೌಶಲ್ಯಗಳ ಅಭಿವೃದ್ಧಿಯಾಗಬೇಕು. ಅವರ ಕಲೆ, ಸಾಹಿತ್ಯ, ಭಾಷೆ ದಾಖಲಾಗಬೇಕು. ಬಂಜಾರ ನೃತ್ಯ, ಹಾಡು ಆಕರ್ಷಣೀಯವಾಗಿದ್ದು, ಎಲ್ಲರಿಗೂ ಕಲಿಸಬೇಕು. ಇವರ ವಸ್ತ್ರ ಕಡಿಮೆ ಬೆಲೆಗೆ ಸಿಗಬೇಕು” ಎಂದರು.

ಡಾ. ಲಲಿತಾ ಶ್ರೀನಿವಾಸ್ ಮಾತನಾಡಿ, “ಡಾ.ವೆಂಕಟಲಕ್ಷ್ಮಮ್ಮ ನನ್ನ ಗುರುಗಳಾಗಿದ್ದುಕೊಂಡು ನೃತ್ಯ ಕಲಿಸಿದವರು. ಇವರು ಕಮಲಾದೇವಿ ಚಟ್ಟೋಪಾಧ್ಯಾಯರ ಆಪ್ತರಾಗಿದ್ದರು. ಬಂಜಾರ ಸಮುದಾಯದ ಸುಂದರ ಹುಡುಗಿ, ಅಂದು ಗುರುಕುಲ ಪದ್ಧತಿಯಲ್ಲಿ ನೃತ್ಯವನ್ನು ಕಲಿತವರು. ಇವರಿಗೆ ಅದ್ಭುತವಾದ ಪ್ರತಿಭೆ, ಪಾಂಡಿತ್ಯವಿತ್ತು. ಕಣ್ಣಿನ ನೋಟ, ದೇಹಸಿರಿ, ಸೌಂದರ್ಯದ ಜೊತೆಗೆ ತೆಲಗು, ಸಂಸ್ಕೃತ ಪಾಂಡಿತ್ಯವಿತ್ತು. ನಮ್ಮ ಅತ್ತೆ ಸಂಪ್ರದಾಯಸ್ತರಾದರೂ ಬಂಜಾರ ಜನಾಂಗದ ಈ ಗುರುಗಳನ್ನು ನನ್ನ ಮನೆಯಲ್ಲಿಟ್ಟು ಉಪಚರಿಸುತ್ತಿದ್ದೆ” ಎಂದರು.

ಚಿತ್ತಯ್ಯ ಪೂಜಾರ್ ಮಾತನಾಡಿ, “ಬಹು ಸಂಸ್ಕೃತಿಯಲ್ಲಿ ಏಕಮುಖ ಸಂಸ್ಕೃತಿ ಆಲೋಚನೆಯಲ್ಲಿ ಬಂಜಾರ ಬುಡಕಟ್ಟು ವಿಶಿಷ್ಟ ಎನಿಸಿದೆ. ಇವರ ಸಂಸ್ಕೃತಿಯ ಮೂಲದ ಭಾವ, ನೋವು ಅರಿಯಬೇಕು” ಎಂದರು.

ಸಿ.ಬಸವಲಿಂಗಯ್ಯ ಮಾತನಾಡಿ, “ಡಾ ವೆಂಕಟಲಕ್ಷ್ಮಮ್ಮ ಅವರ ಗುರು ಜಟ್ಟಿ ತಾಯಮ್ಮ, ಗಂಗೂಬಾಯಿ ಮೂಲತಃ ದೇವದಾಸಿ ಪದ್ದತಿಯಿಂದ ಬಂದ ಪ್ರತಿಭೆಗಳು. ಬಂಜಾರರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಸಂಸ್ಕೃತಿ, ಭಾಷೆ ಆಚಾರವುಳ್ಳವರು. ಇವರ ಮೂಲ ಪುರುಷ ದಾದಾಮೋಲ ಹಾಗೂ ಕೃಷ್ಣನಿಗೆ ಸಂಬಂಧವಿದೆ. ಕೃಷ್ಣ ಕೊಳಲು ಪಡೆದದ್ದು, ಬಂಜಾರ ದಾದಾಮೋಲ ಅವರ ಪ್ರದರ್ಶನ ಕಲೆ ಸಮಾಜಮುಖಿ ದೃಷ್ಟಿ ಹೊಂದಿದೆ. ಇಂದು ಎಲ್ಲ ಜಾತಿಗಳು ಜ್ಯೋತಿಗಳಾಗಿ ಸ್ವಸ್ಥ ಸಮಾಜ ನಿರ್ಮಿಸಬೇಕಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪತ್ರಿಕಾ ವಿತರಕರ ಸಂಘಟನೆಯ ಹೋರಾಟಕ್ಕೆ ಸರ್ಕಾರ ಸ್ಪಂದನೆ: ರಾಜ್ಯಾಧ್ಯಕ್ಷ ಶಂಭುಲಿಂಗ

ಸಮಾರಂಭದಲ್ಲಿ ಶಿವಮೊಗ್ಗದ ಬಂಜಾರ ಕಲಾವಿದರ ನೃತ್ಯ ಆಕರ್ಷಿಸಿತು. ಸಂಪನ್ಮೂಲ ವ್ಯಕ್ತಿಗಳಾಗಿ ಜಾನಪದ ತಜ್ಞ ಹಿ ಚಿ ಬೋರಲಿಂಗಯ್ಯ, ರಂಗ ನಿರ್ದೇಶಕ ಸಿ ಬಸವಲಿಂಗಯ್ಯ, ಪ್ರೊ. ಚಿತ್ತಯ್ಯ ಪೂಜಾರ್, ಮುಖ್ಯಸ್ಥ ಡಾ. ರಾಮಕೃಷ್ಣಯ್ಯ, ಡಾ. ಲಲಿತಾ ಶ್ರೀನಿವಾಸನ್, ಬಂಜಾರ ಕಲಾವಿದರಾದ ಶಶಿಕಲಾಬಾಯಿ ಹಾಗೂ ಅಕಾಡೆಮಿ ಸದಸ್ಯರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...