ಬೆಂಗಳೂರು | ಸೆ.20: ಸ್ಲಂ ನಿವಾಸಿಗಳ ಜೀವನ ಶೈಲಿಯನ್ನು ತಿಳಿಸುವ ‘ಕೇಳ್ರಾ’ ಆಲ್ಬಂ ಹಾಡು ಬಿಡುಗಡೆ

Date:

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಸ್ಲಂ ನಿವಾಸಿಗಳು, ಆ ನಗರಗಳ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವೇನು? ನಗರವನ್ನು ಕಟ್ಟಿದರೂ, ನಗರದ ಕಥಾನಕಗಳಲ್ಲಿ ಕಾಣಿಸದೆ ಉಳಿದಿರುವ ಸ್ಲಂ ಜನರ ಬದುಕು, ಅವರ ಧ್ವನಿಗಳು ಎಲ್ಲಿ? ಈ ಬಗ್ಗೆ ಎಲ್ಲ ವಿವರಗಳುಳ್ಳ ‘ಕೇಳ್ರಾ’ ಆಲ್ಬಂ ಹಾಡು ಸೆ.20ರಂದು ಬಿಡುಗಡೆ ಆಗಲಿದೆ.

ಬೆಂಗಳೂರಿನ ಜ್ಯೋತಿಪುರದಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಆಲ್ಬಂ ಹಾಡು ಬಿಡುಗಡೆ ಆಗಲಿದೆ.

17 ವರ್ಷದ ವಿದ್ಯಾರ್ಥಿ ಕರಾಬ್ ಸೂರ್ಯ ಬೆಂಗಳೂರಿನ ಜ್ಯೋತಿಪುರದ ನಿವಾಸಿ. ರ‌್ಯಾಪ್ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಸೂರ್ಯ, ತಾನಾಗಿಯೇ ಕಲಿತು, ರಚಿಸಿ, ಹಾಡಿ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ‘ಕೇಳ್ರಾ’ ಲ ಈ ಆಲ್ಬಂನ ಮೊದಲ ಪ್ರಸ್ತುತಿಯಾಗಿದೆ‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಡವಿ, AKF ಸ್ಟುಡಿಯೋಗಳ ಹೊಸ ಆಲ್ಬಮ್ ‘ಸ್ಲಮ್‌ಲೋರ್ – ಲೂರುಸ್ ಲೋರ್’ ಆಗಿದ್ದು, ನಗರದ ಕಥೆ ಕಥಾನಕಗಳಲ್ಲಿ ಮೇಲ್ವರ್ಗ ಹಾಗೂ ಮೇಲ್ಜಾತಿಗಳ ದೃಷ್ಟಿಕೋನ ಹಾಗೂ ಅನುಭವಗಳು ಪ್ರಾಬಲ್ಯ ಸಾಧಿಸಿ ಪ್ರಚಲಿತೆಯಲ್ಲಿದೆ. ಆದರೆ, ನಗರದ ಕಥೆಗಳು ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರಿಗೆ ಮಾತ್ರ ಸೀಮಿತವೇ? ನಗರವನ್ನು ಕಟ್ಟಿದರೂ, ನಗರಕಥಾನಕಗಳಲ್ಲಿ ಕಾಣಿಸದೆ ಉಳಿದಿರುವ ಸ್ಲಂ ಜನರ ಜನರ ಬದುಕು, ಅವರ ಧ್ವನಿಗಳು ಎಲ್ಲಿ? ತಳ ಸಮುದಾಯಗಳನ್ನು ಕಾಲಾನುಕಾಲಗಳಿಂದ ಮೂಲೆಗುಂಪು ಮಾಡಿ, ಅವರ ಅಸ್ತಿತ್ವವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬುದನ್ನು ವಿವರಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

1980ರ ದಶಕದಲ್ಲಿ ದಲಿತ ಜನಪದಗಾರ ಮತ್ತು ನಾಟಕಕಾರ ಕೆ.ಎ. ಗುಣಶೇಖರನ್ “SlumLore” ಎಂಬ ಪದವನ್ನು ಪರಿಚಯಿಸಿದ್ದರು. ಸ್ಲಂಗಳಲ್ಲಿನ ಹಬ್ಬ-ಆಚರಣೆಗಳು, ಹೋರಾಟಗಳು, ಬದುಕಿನ ದನಿಗಳನ್ನು ಮುಖ್ಯವಾಹಿನಿಗೆ ತರಲು ಆರಂಭಿಸಿದ್ದರು.

IMG 20250919 WA0469

ಗುಣಶೇಖರನ್ ರವರ ಈ ಪ್ರಯತ್ನದ ಪ್ರೇರಣೆ ಹೊಂದಿರುವ, SlumLore ಆಲ್ಬಮ್ ಬೆಂಗಳೂರಿನ ಸ್ಲಂಗಳ ಕಥೆಗಳನ್ನು ಹಿಡಿದಿಡುತ್ತದೆ. ಇಲ್ಲೇ ಹುಟ್ಟಿ-ಬೆಳೆದ ಯುವಜನರ ಜೀವನಾನುಭವ ಈ ಆಲ್ಬಮ್ಮಿನ ಆಧಾರ. ತಮ್ಮ ಬದುಕನ್ನು ತಮ್ಮದೇ ಶಬ್ದಗಳಲ್ಲಿ, ತಮ್ಮದೇ ಸಂಗೀತದಲ್ಲಿ ಅವರು ಹೇಳುತ್ತಾರೆ. ಸಂಗೀತವಾಗಿ ರೂಪಾಂತರಗೊಂಡಿರುವ ತಳ ಸಮುದಾಯದ ಕಥೆಗಳನ್ನು  ಮುಖ್ಯವಾಹಿನಿಗೆ ತರುವುಲ್ಲಿ Adavi Arts Collective ಮತ್ತು “AKF Studios” ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಸ್ಲಂನಲ್ಲಿ ಬೆಳೆದಿರುವ ವಿದ್ಯಾರ್ಥಿ ಸೂರ್ಯ ಬೆಂಗಳೂರಿನ ಜ್ಯೋತಿಪುರದ ನಿವಾಸಿಯಾಗಿದ್ದು, ತನ್ನ ಹಾಗೂ ತನ್ನ ಸಮುದಾಯದ ಸಿಹಿ-ಕಹಿ, ಬದುಕು-ಬವಣೆ, ಕನಸುಗಳನ್ನು ತನ್ನ ಸಂಗೀತದ ಮೂಲಕ ಹೊರತರಲು ಆಶಿಸಿದ್ದಾನೆ.

ಈ ಆಲ್ಬಂ ಹಾಡು ಬೆಂಗಳೂರಿನಲ್ಲಿರುವ ಜ್ಯೋತಿಪುರದಲ್ಲಿ ಸೆ.20ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...