ಬಂಗಾರಪೇಟೆ | ಸಂಸದ ಮುನಿಸ್ವಾಮಿ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ ಇಲ್ಲ: ಶಾಸಕ ನಾರಾಯಣಸ್ವಾಮಿ

Date:

  • ʼಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ನನ್ನ ಪಕ್ಕಾ ಶಿಷ್ಯʼ
  • ʼನಾಲ್ಕು ವರ್ಷಗಳಲ್ಲಿ ಮುನಿಸ್ವಾಮಿ ಅಭಿವೃದ್ಧಿ ಶೂನ್ಯವೇ ಹೊರತು ಬೇರೇನಿಲ್ಲʼ

ಡಿಕೆ ರವಿಗೂ ನನಗೂ ಏನ್ರೀ ಸಂಬಂಧ. ಸಂಸದ ಮುನಿಸ್ವಾಮಿ ಅವರ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ ಇಲ್ಲ ಎಂದು ಸಂಸದ ಮುನಿಸ್ವಾಮಿ ವಿರುದ್ಧ ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಡಿ.ಕೆ ರವಿಯನ್ನು ಕೊಲೆ ಮಾಡಿದ್ದು ಶಾಸಕ ಎಸ್.ಎನ್ ನಾರಾಯಣಸ್ವಾಮಿ’ ಎಂದು ಸಂಸದ ಮುನಿಸ್ವಾಮಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಾಯರಾಯಣಸ್ವಾಮಿ, “ಬಿಜೆಪಿ ಸಂಸದ ಮುನಿಸ್ವಾಮಿ ಅವರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್‌ ಇಲ್ಲ” ಎಂದು ಕಿಡಿಕಾರಿದ್ದಾರೆ.

“ಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ನನ್ನ ಪಕ್ಕಾ ಶಿಷ್ಯ. ನಾನು ಪ್ರೀತಿಯಿಂದ ಇಲ್ಲಿಗೆ ಹಾಕಿಸ್ಕೊಂಡು ಬಂದೋನು. ಅವನನ್ನು ಯಾರು ಹತ್ಯೆ ಮಾಡಿದ್ರು ಅಂತಾ ನಿನಗೆ ಗೊತ್ತು. ಅವನು ಜೈಲಿಗೆ ಹೋಗಿದ್ದೂ ನಿನಗೆ ಗೊತ್ತುʼʼ  ಎಂದು ಮುನಿಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮುನಿಸ್ವಾಮಿ ನೀನು ನಿಮ್ಮಪ್ಪನಿಗೆ ಹುಟ್ಟಿದ್ದರೆ ನಾನೇ ಕೊಲೆ ಮಾಡಿದೀನಿ ಅಂತ ಸಾಬೀತು ಮಾಡು. ಆಗ ಸಾರ್ವಜನಿಕವಾಗಿ ಬಜಾರಿನಲ್ಲಿ ನೇಣು ಬಿಗಿದುಕೊಳ್ಳುತ್ತೇನೆ. ನೀನು ಸಂಸದನಾಗಿದ್ದೀಯ, ಇಂಥ ಮಾತೆಲ್ಲ ಆಡಬಾರದು. ಏನು ಮಾತಾಡಬೇಕು ಅಂತ ಅರಿತುಕೊಂಡು ಮಾತಾಡು. ನೀನು ಗಾಳಿಯಲ್ಲಿ ತೂರಿಕೊಂಡು ಬಂದವನು. ನೀನೊಬ್ಬ ರೌಡಿಶೀಟರ್‌, ಬ್ಲಾಕ್ ಮೇಲರ್‌, ನಾಲ್ಕು ವರ್ಷಗಳಲ್ಲಿ ನಿನ್ನ ಅಭಿವೃದ್ಧಿ ಶೂನ್ಯವೇ ಹೊರತು ಬೇರೇನಿಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಾಲೂರು | ಬಿಜೆಪಿ ಅಭ್ಯರ್ಥಿ ಪರ ಮುನಿಸ್ವಾಮಿ ಮತಯಾಚನೆ; ‌ಸ್ಥಳೀಯರಿಂದ ತರಾಟೆ

ಎಸ್.ಎನ್.ಲೇಔಟ್‌ ಬಗೆಗಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್.ಎನ್.‌ ನಾರಾಯಣಸ್ವಾಮಿ, “ನಾನೇನಾದ್ರು ಕೆರೆಗಳು ಮುಚ್ಚಿ ಲೇಔಟ್ ಮಾಡಿದ್ದೀನಾ? ಒಂದು ವೇಳೆ ನೀವು ಹೇಳಿದ ಪ್ರಕಾರ ನಾನು ಕೆರೆಗಳ ಒಂದಿಂಚು ಜಾಗ ತೆಗೆದುಕೊಂಡು ಲೇಔಟ್‌ ಮಾಡಿದ್ದನ್ನು ಎಮ್. ನಾರಾಯಣಸ್ವಾಮಿ ಆಗಲಿ ಮುನಿಸ್ವಾಮಿಯಾಗಲಿ ಯಾರಾದರೂ ರುಜುವಾತು ಮಾಡಿದ್ರೆ ಎಂಎಲ್ಎ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಾನು ಈ ಕ್ಷಣದಿಂದಲೇ ರಾಜಕೀಯ ನಿವೃತ್ತಿ ಪಡೆದು ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇನೆ. ನಾನು ಸಾಯುವ ತನಕ ಅವರ ಮನೆಯಲ್ಲಿ ಜೀತದಾಳಾಗಿ ಇರುತ್ತೇನೆ” ಎಂದು ನೇರ ಸವಾಲು ಹಾಕಿದರು.

“ಎಮ್ ನಾರಾಯಣಸ್ವಾಮಿ  ಮತ್ತು ಮುನಿಸ್ವಾಮಿ ತರ ಕಾಂಗ್ರೆಸ್‌ ಪಕ್ಷದಿಂದ ಗೆದ್ದು 35 ಕೋಟಿ ತೆಗೆದುಕೊಂಡು ಪಕ್ಷಾಂತರ ಮಾಡಿಲ್ಲ. ಪಕ್ಷಾಂತರ ಹಣದಿಂದ ದಾವಣಗೆರೆಯಲ್ಲಿ, ಯಲ್ಲಹಂಕದಲ್ಲಿ ಆಸ್ತಿಗಳನ್ನು ಮಾಡಿ ಕೋಳಿಫಾರ್ಮ್ ಮಾಡಿ ಹಣ ಮಾಡಿರೋನು ನೀನು. ಆದರೆ ನಾರಾಯಣಸ್ವಾಮಿಗೆ ರಾಜಕೀಯಕ್ಕೆ ಬರೋದಕ್ಕಿಂತ ಮುಂಚೆಯೇ ರೆಸಾರ್ಟ್‌ ಇತ್ತು. ಬೆಂಗಳೂರು, ಹೊಸಕೋಟೆ, ಮಾಲೂರುಗಳಲ್ಲಿ ಆಸ್ತಿ ಇತ್ತು. ಗಾಲ್ಫ್, ಕ್ರೂಜರ್‌, ಆಸ್ಪತ್ರೆ ಎಲ್ಲವೂ ಇದ್ದವು. ಇವೆಲ್ಲವನ್ನೂ ಮಾರಿಕೊಂಡು ರಾಜಕೀಯಕ್ಕೆ ಬಂದವನು ನಾನು. ಈ ನಾರಾಯಣಸ್ವಾಮಿ ನಿನ್ನಂತೆ ರೌಡಿಸಂ ಮಾಡಿಕೊಂಡು ರಾಜಕೀಯಕ್ಕೆ ಬಂದವನಲ್ಲ” ಎಂದು ತಿರುಗೇಟು ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...