ಸ್ಪಂದನ ಕ್ಲಿನಿಕ್ ಬೋಳಂತೂರು ಮತ್ತು ಚೆಂಡಾಡಿ ಮೆಡಿಕಲ್ಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಶಾಲೆ ಸೇರಿ ವಿವಿಧ ಶಾಲೆಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಕಿಟ್ ಅನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಸಮುದಾಯದ ಆರೋಗ್ಯ ಕಾಳಜಿ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಶಾಲೆಗಳಿಗೆ ಈ ರೀತಿಯಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಅನ್ನು ನೀಡುತ್ತಿದ್ದೇವೆ ಎಂದು ಇಮ್ರಾನ್ ಪಾಣೆಮಂಗಳೂರು ತಿಳಿಸಿದರು.
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೋಳಂತೂರು, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನಾರ್ಶ ಮೈದಾನ, ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನ, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಸುರಿಬೈಲ್ ಹಾಗೂ ಸುರಿಬೈಲಿನ ದಾರುಲ್ ಅಶ್-ಅರಿಯ್ಯ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಪಂದನ ಕ್ಲಿನಿಕ್ ಪರವಾಗಿ ಇಮ್ರಾನ್, ಹಾಗೂ ಚೆಂಡಾಡಿ ಮೆಡಿಕಲ್ಸ್ ಪರವಾಗಿ ಅಫ್ಸಾನ್ ಮತ್ತು ಫೈರೋಝ್ ಉಪಸ್ಥಿತರಿದ್ದರು.





