ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿ ಮೊಹಮ್ಮದ್ ಮಿಕ್ದಾದ್ ಎಂ ಎಚ್ ಅವರನ್ನು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಗರದ ಎಸ್ಐಒಯಿಂದ ಅಭಿನಂದಿಸಲಾಯಿತು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ಐಒ) ಪಾಣೆಮಂಗಳೂರು ಘಟಕವು ದಕ್ಷಿಣ ಕನ್ನಡ ಜಿಲ್ಲಾ 2025-2026ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 14 ವರ್ಷದ ಒಳಗಿನ ಬಾಲಕರಿಗಾಗಿ ಆಯೋಜಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಅಮ್ಟೂರು ಕರಿಂಗಾಣದಲ್ಲಿರುವ ದೇವಮಾತ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಎಂ ಎಚ್ ಮೊಹಮ್ಮದ್ ಮಿಕ್ದಾದ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಗೂ ಮೊಹಮ್ಮದ್ ಮಿಕ್ದಾದ್ ಆಯ್ಕೆಯಾಗಿದ್ದಾರೆ. ಇವರು ನಮ್ಮ ಐಸಿಸಿ(ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್) ವಿದ್ಯಾರ್ಥಿಯಾಗಿದ್ದಾರೆ. ಎಸ್ಐಒ ತಂಡವು ಭೇಟಿ ನೀಡಿ ಅವರ ಸಾಧನೆಯನ್ನು ಮೆಚ್ಚಿ ಸ್ಮರಣಿಕೆ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು. ಇವರು ಬೋಳಂಗಡಿ ನಿವಾಸಿ ಎಂ ಎಚ್ ಮುಸ್ತಫಾ ಮತ್ತು ಫಾಮಿದ ದಂಪತಿಯ ಪುತ್ರ.
ಈ ಸುದ್ದಿ ಓದಿದ್ದೀರಾ? ಕೋಲಾರ | ಗುರುಭವನ ನಿರ್ಮಾಣಕ್ಕೆ 2.50 ಕೋಟಿ ಅನುದಾನ; 2027ಕ್ಕೆ ಕಟ್ಟಡ ಪೂರ್ಣಗೊಳಿಸುವ ನಿರ್ಧಾರ
ಈ ಸಂದರ್ಭದಲ್ಲಿ ಪಾಣೆಮಂಗಳೂರು ಎಸ್ಐಒ ಕಾರ್ಯದರ್ಶಿ ಬ್ರ. ಅಬ್ದುಲ್ ರಹ್ಮಾನ್, ಬ್ರ. ಮಾಹಿರ್, ಬ್ರ. ಮಶ್ಕೂರ್, ಬ್ರ. ಸಲಾಹುದ್ದೀನ್, ಬ್ರ.ಮಿಶಾಬ್ , ಬ್ರ.ನಾಫೀ, ಬ್ರ.ಹಾಬಿಲ್, ಬ್ರ. ಅರ್ಮಾನ್, ಬ್ರ.ಯಾಸೀನ್ ಇದ್ದರು.





