ಬೀದರ್‌ | ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿದ್ದು‌ ಬಸವ ಧರ್ಮ : ದಿನೇಶ್‌ ಅಮೀನ್‌ ಮಟ್ಟು

Date:

ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡಿದ್ದು‌ ಬಸವ ಧರ್ಮ. ಮನುವಾದವೇ ಹಿಂದೂ ಧರ್ಮವಾದರೆ ಅದಕ್ಕೆ ವಿರುದ್ಧವಾದದ್ದು ಬಸವತತ್ವ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಬಸವಕಲ್ಯಾಣ ನಗರದ ಹರಳಯ್ಯ ಗವಿಯಲ್ಲಿ ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಲ್ಲಿ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆಯ ಏಳನೇ ದಿನದಂದು ನಡೆದ ʼಬಸವ ಚಳುವಳಿ ಅಂದು, ಇಂದು, ಮುಂದುʼ ವಿಷಯ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ʼಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿದ್ದರಿಂದ ಸರ್ಕಾರ ತನ್ನ ಗೌರವ ಹೆಚ್ಚಿಸಿಕೊಂಡಿದೆ. ಸಾಂಸ್ಕೃತಿಕ ನಾಯಕ ಘೋಷಣೆ ಎಂಬುದು ರಾಜಕೀಯ ತಂತ್ರಗಾರಿಕೆ ಎನ್ನಬಹುದು. ಆದರೆ ಬಸವತತ್ವ ವಿನಾಶಕ್ಕಾಗಿ ರೂಪಿಸುವ ರಾಜಕೀಯ ತಂತ್ರಗಾರಿಕೆಗಿಂತ ಬಸವತತ್ವ ಉಳಿವಿಗಾಗಿ ಮಾಡುವ ರಾಜಕೀಯ ತಂತ್ರಗಾರಿಕೆ ಈ ಸಮಾಜಕ್ಕೆ ಬೇಕಾಗಿದೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಬಸವಣ್ಣ ನೇತ್ರತ್ವದ ಶರಣ ಚಳವಳಿ ಮಹಿಳಾ, ದಲಿತ, ಭಾಷಾ, ಕಾರ್ಮಿಕ, ಸಾಹಿತ್ಯ ಸೇರಿದಂತೆ ಎಲ್ಲ ಚಳವಳಿಗಳನ್ನು ತನ್ನೊಳಗೆ ಇಟ್ಟುಕೊಂಡು ಮುನ್ನಡೆದ ಸಾಮಾಜಿಕ ಚಳವಳಿಯಾಗಿದೆ. ಬಸವಣ್ಣನವರು ಕೇವಲ ಧರ್ಮದ ಬಗ್ಗೆ ಅಷ್ಟೇ ಮಾತನಾಡಲಿಲ್ಲ. ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ಆಶಯಗಳು ವಚನಗಳಲ್ಲಿ ಅಡಗಿವೆ.
ಪ್ರಜಾಪ್ರಭುತ್ವ ಪರಿಕಲ್ಪನೆ ಶರಣರ ಅನುಭವ ಮಂಟಪದಲ್ಲಿದೆ. ಎಲ್ಲ ಚಳವಳಿಗೂ ಬಸವ ಚಳವಳಿ ಮಾದರಿಯಾಗಿದೆʼ ಎಂದರು.

ʼಬಸವವಾದ ಮತ್ತು ಮನುವಾದಕ್ಕೆ ವ್ಯತ್ಯಾಸ ಇದೆ. ಯಾರು ಮನುವಾದ ಒಪ್ಪಿಕೊಳ್ಳುತಾರೋ ಅವರಿಗೆ ಬಸವಣ್ಣನವರ ಹೆಸರು ಹೇಳಲು ಯೋಗ್ಯತೆ ಇಲ್ಲ. ಮಹಾಪುರುಷರ ಕೇವಲ ಆರಾಧನೆಗೆ ಸೀಮಿತಿಗೊಳಿಸದೆ ಅವರ ಆದರ್ಶ ತತ್ವಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಬೇಕು. ಬುದ್ಧ, ಬಸವಣ್ಣ, ವಿವೇಕಾನಂದ, ನಾರಾಯಣಗುರು ದೇವರಲ್ಲ, ಅವರೆಲ್ಲರೂ ಮನುಷ್ಯರು. ವೈಚಾರಿಕ ಬದ್ಧತೆ ಮೈಗೂಡಿಸಿಕೊಂಡರೆ ನಾವೆಲ್ಲರೂ ಬಸವಣ್ಣ ಆಗಬಹುದು. ಇದು ಬಹಳ ಸುಲಭ, ಅಷ್ಟೇ ಕಠಿಣ ಕೂಡ ಹೌದುʼ ಎಂದು ವಿಶ್ಲೇಷಿಸಿದರು.

ʼಎಲ್ಲ ಸರ್ವಾಧಿಕಾರಿಗಳು ಕೂಡ ಸತ್ಯ ಹೇಳುವರನ್ನು, ಜನರಲ್ಲಿ ಜಾಗೃತಿ ಹುಟ್ಟಿಸುವರನ್ನು, ತಾರತಮ್ಯ ವಿರೋಧಿಸುವರನ್ನು, ಮೂಲಭೂತ ಆಧಾರದಲ್ಲಿ ಸಮಾನತೆ ಸಮಾಜ ಕಟ್ಟಲು ಹೋದವರನ್ನು ಬಲಿಪಶು ಮಾಡುತ್ತದೆ. ಬಸವತತ್ವಕ್ಕೆ ವಿರುದ್ಧವಾಗಿರುವ ಮೆರವಣಿಗೆ ನಡೆಸುವುದು ಬಸವತತ್ವದ ನಾಶ, ಅದು ಬಸವಾದು ಶರಣರನ್ನು ನಾಶಪಡಿಸಿದಂತೆ, ಅದು ಆಗಬಾರದುʼ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಿದ್ಧಪ್ಪ ಮೂಲಗೆ ಮಾತನಾಡಿ, ʼಜಗತ್ತಿನಲ್ಲೇ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಉದಾಹರಣೆ ಎಲ್ಲಿಯೂ ಇಲ್ಲ, ಆದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ನಿಲುವಿನ ಬದ್ಧತೆಯಿಂದ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆʼ ಎಂದರು.

ʼ12ನೇ ಶತಮಾನಕ್ಕೂ ಮುನ್ನ ನಾವೆಲ್ಲರೂ ದಲಿತ, ಶೂದ್ರರಾಗಿದ್ದೆವು. ಶರಣ ಚಳವಳಿ ನಡೆದ ನಂತರ ನಾವು ಲಿಂಗಾಯತರಾಗಿದ್ದೇವೆ. ಲಿಂಗಾಯತ ಎಂಬುದು ಒಂದು ಜಾತಿ ಅಲ್ಲ, ಅದೊಂದು ಧರ್ಮ, ಚಳುವಳಿಯಾಗಿದೆ. ಶರಣರನ್ನು ಹತ್ಯೆಗೈದ ಶಕ್ತಿಗಳೇ ಎಂ.ಎಂ.ಕಲಬುರ್ಗಿ ಅವರನ್ನು ಕೊಂದಿದ್ದಾರೆ. ಈಚೆಗೆ ʼಶರಣರ ಶಕ್ತಿʼ ಚಲನಚಿತ್ರ, ʼವಚನ ದರ್ಶನʼ ಪುಸ್ತಕ ಮೂಲಕ ಮತ್ತೆ ಶರಣರ ಚರಿತ್ರೆ ಹರಣಗೊಳಿಸುವ ಹುನ್ನಾರ ನಡೆದಿದೆʼ ಎಂದು ಹೇಳಿದರು.

ನೇತೃತ್ವ ವಹಿಸಿದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ʼಅಂದು ಬಸವಣ್ಣನವರು ಕಲ್ಯಾಣದಲ್ಲಿ ಕ್ರಾಂತಿ ನಡೆಸುವ ಮೂಲಕ ಲಿಂಗಾಯತ ಎಂಬ ಹೊಸ ಧರ್ಮ ಕಟ್ಟಿದ್ದರು. ಶರಣರು ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ದೇವರ ಕಲ್ಪನೆ ಹೀಗೆ ಎಲ್ಲಾ ರಂಗಗಳಲ್ಲಿ ಬದಲಾವಣೆ ತಂದರು. ಜಗತ್ತಿನ ಎಲ್ಲಾ ಕ್ರಾಂತಿಗಳ ತಾಯಿ ಕಲ್ಯಾಣ ಕ್ರಾಂತಿ. ಇಂದು ಸಮಾಜದಲ್ಲಿ ಸಾಮಾಜಿಕ ನ್ಯಾಯದ ಅವಶ್ಯಕತೆ ಇದೆʼ ಎಂದು ನುಡಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು

ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಹಿತಿ ಡಾ.ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ವಿಜಯಸಿಂಗ್, ಬಿಡಿಪಿಸಿ ನಿರ್ದೇಶಕ ಅನಿಲಕುಮಾರ ರಗಟೆ, ಬಸೇಪ್ರ ಕಲಬುರಗಿಯ ರಾಜಶೇಖರ ಯಂಕಂಚಿ, ಕಂಟೆಪ್ಪಾ ದಾನಾ, ಚನ್ನಬಸಪ್ಪಾ ವಡ್ಡನಕೇರೆ, ಲಕ್ಷ್ಮಿಕಾಂತ ಜ್ಯಾಂತೆ, ಮಲ್ಲಿಕಾರ್ಜುನ ಪಾಟೀಲ ಮಂಠಾಳ, ರೋಷನ್ ಶಾಶೆಟ್ಟೆ ಇತರರಿದ್ದರು. ರಾಷ್ಟ್ರೀಯ ಬಸವ ದಳ ತಾಲೂಕಾಧ್ಯಕ್ಷ ರವೀಂದ್ರ ಕೊಳಕೂರ ಸ್ವಾಗತಿಸಿದರೆ, ದತ್ತಾತ್ರೆ ಬಾಂದೆಕರ್ ನಿರೂಪಿಸಿದರು. ನಾಗನ್ನಾಥ ಮುಕ್ತಾ ಭಕ್ತಿ ದಾಸೋಹಗೈದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...