ಬಸವಕಲ್ಯಾಣದಲ್ಲಿ ನಡೆಯುವ 46ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-2025ರ ನಿಮಿತ್ಯ
ಹಮ್ಮಿಕೊಂಡಿರುವ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಶಿಬಿರ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ದೈಹಿಕ ಸದೃಢತೆಯನ್ನು ಮೀರಿದ ವ್ಯಾಯಾಮದ ಒಂದು ರೂಪವಾಗಿದೆ. ಇದು ಸಮತೋಲನ ಮತ್ತು ಸಾಮರಸ್ಯವನ್ನು ಬಯಸುವ ವ್ಯಕ್ತಿಗಳಿಗೆ ಒಂದು ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆʼ ಎಂದರು.
ʼಯೋಗ ಅಭ್ಯಾಸವು ಸಮ್ಯತೆಯನ್ನು ಹೆಚ್ಚಿಸಲು, ಏಕಾಗ್ರತೆಯನ್ನು ಸುಧಾರಿಸಲು ಮತ್ತು ಶಾಂತತೆಯ ಭಾವನೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ವಿವಿಧ ಆಸನಗಳು ಮತ್ತು ಭಂಗಿಗಳನ್ನು ಸಂಯೋಜಿಸುತ್ತದೆ. ಯೋಗವು ಧ್ಯಾನ ತಂತ್ರಗಳ ಮೂಲಕ ಹಲವಾರು ಪ್ರಯೋಜಗಳನ್ನು ನೀಡುತ್ತದೆ. ಯೋಗ ಮಾಡುವುದರಿಂದ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಿಸುವುದು, ತೂಕ ನಿರ್ವಹಣೆ ಮತ್ತು ಒತ್ತಡ ಹಾಗೂ ಆತಂಕವನ್ನು ಪರಿಹರಿಸುತ್ತದೆʼ ಎಂದು ಹೇಳಿದರು.

ಯೋಗ ಗುರು ಮಹಾಲಿಂಗ ಮಹಾಲಿಂಗದೇವರು ಮಾತನಾಡಿ, ʼಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಬಯಸುವವರಿಗೆ ಯೋಗವು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಆಳವಾದ ಸಂಪರ್ಕವನ್ನು ಬೆಳೆಸುವ ಒಂದು ಆದರ್ಶ ಪರಿಹಾರವನ್ನು ಒದಗಿಸುತ್ತದೆ. ಯೋಗ ಮಾಡುವುದರಿಂದ ನಾವು ರೋಗ ಮುಕ್ತರಾಗಬಹುದು. ಯೋಗ ಶಿಬಿರದಲ್ಲಿ ಎಲ್ಲರೂ ಹೆಚ್ಚಿನ
ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕುʼ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಬಸವದೇವರು ಸಮ್ಮುಖ ವಹಿಸಿದ್ದರು. ಶಿಬಿರದ ಉದ್ಘಾಟನೆಯನ್ನು ಶರಣ ವಿಜಯಕುಮಾರ ಮಂಠಾಳೆ ಅವರು ನೆರವೇರಿಸಿದರು. ಬಸವಗುರುಪೂಜೆ ಡಾ.ಜಿ.ಎಸ್.ಭೂರಾಳೆ ಅವರು ಮಾಡಿದರು.
ಇದನ್ನೂ ಓದಿ : ಬೀದರ್ | ಬೌದ್ಧ ಸಾಂಸ್ಕೃತಿಕ ಭವನಕ್ಕೆ ₹10 ಕೋಟಿ ಅನುದಾನ : ಸಚಿವ ಈಶ್ವರ ಖಂಡ್ರೆ ಭರವಸೆ
ಮುಖ್ಯ ಅತಿಥಿಗಳಾಗಿ, ಸೂರ್ಯಕಾಂತ ಪಾಟೀಲ, ರಾಜಕುಮಾರ ಬಿರಾದಾರ, ಸಂಜುಕುಮಾರ ನಡುಕರ್, ಸೂರ್ಯಕಾಂತ ಗಾಯಕವಾಡ, ಅಮರೇಶ್ವರ ಸ್ವಾಮಿ ರವೀಂದ್ರ ಕೋಳಕುರ್, ವೀರಭದ್ರಪ್ಪ ಸ್ವಾಗತಿಸಿದರು. ವಿಜಯಕುಮಾರ ಪಟ್ನೆ ಅವರಿಂದ ಶರಣು ಸಮರ್ಪಣೆ ನಡೆಯಿತು. ಶಿವಕುಮಾರ ಓಕುಳಿ ನಿರೂಪಿಸಿದರು.





