ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI) ತನ್ನ ಯೂತ್ ವಿಂಗ್ ವಿಭಾಗಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬಿ.ಸಿ.ಸಿ.ಐ. ಸ್ಥಾಪಕಾಧ್ಯಕ್ಷರಾದ, ಡಾ. ಎಸ್. ಎಂ. ರಶೀದ್ ಹಾಜಿಯವರು ಯೂತ್ ವಿಂಗ್ ಘಟಕವನ್ನು ಉದ್ಘಾಟಿಸಿದರು.
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, BCCI ತನ್ನ ಆರಂಭಿಕ ದಿನಗಳಿಂದಲೂ ಸಮುದಾಯದ ಯುವಕರಿಗೆ ಉದ್ಯಮ ರಂಗದಲ್ಲಿ ಮುನ್ನಡೆಯಲು ಪ್ರೇರಣೆ ನೀಡುತ್ತಾ ಬಂದಿದೆ. ಸಣ್ಣ ಪುಟ್ಟ ವ್ಯಾಪಾರ ವಹಿವಾಟುಗಳ ಮೂಲಕ ಸ್ವ-ಉದ್ಯೋಗವನ್ನು ಕಂಡುಕೊಳ್ಳಲು ಪ್ರಯತ್ನಿಸುವ ಯುವಕರಿಗೆ ಸದಾ ಪ್ರೋತ್ಸಾಹವನ್ನು ನೀಡಿದೆ. ಇದೀಗ ಉದ್ಯಮ ರಂಗಕ್ಕೆ ಯುವ ಜನತೆಯನ್ನು ಇನ್ನಷ್ಟೂ ಆಕರ್ಷಿಸುವ ಸಲುವಾಗಿ ಅವರಿಗಾಗಿ ಪ್ರತ್ಯೇಕ ವಿಭಾಗವನ್ನು ರೂಪಿಸುವ ಮೂಲಕ ನಾವು ಈ ಕ್ಷೇತ್ರದಲ್ಲಿ ಸಮುದಾಯದ ಹೊಸ ತಲೆಮಾರಿನ ಯುವ ಪ್ರತಿಭೆಗಳನ್ನು ವೃದ್ಧಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಸಿ.ಐ. ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಯುವಕರು ಉದ್ಯೋಗಕ್ಕಾಗಿ ಕಾಯುವವರಾಗದೆ ತಾವೇ ಸ್ವತಃ ಇತರರಿಗೆ ಉದ್ಯೋಗ ನೀಡುವವರಾಗಿ ಬದಲಾಗಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ
ಯಝ್ದಾನಿ ಫಿರೋಝ್, “ವ್ಯಾಪಾರ ಪರಂಪರೆ, ಜಾಗತಿಕ ಅವಕಾಶಗಳು ಹಾಗೂ ಯುವಕರ ಸಾಮರ್ಥ್ಯ” ಎಂಬ ವಿಷಯದಲ್ಲಿ ಅಧ್ಯಯನಾತ್ಮಕವಾದ ಉಪನ್ಯಾಸವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಹೊಸತಾಗಿ ರೂಪಿಸಿದ ಯುವ ವಿಭಾಗದ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸಲು ಸರ್ವಶ್ರೀ ಝೀಶಾನ್ ರಮ್ಲಾನ್, ರಿಫಾತ್ ಅಹಮದ್, ಅಝರ್ ರಝಾಕ್, ಅಯಾನ್ ಹಾರಿಸ್, ಅನಸ್ ಇಮ್ರಾಝ್, ಮುಹಮ್ಮದ್ ಶಹಬಾಝ್ ಹೀಗೆ ಒಟ್ಟು ಆರು ಯುವ ಉದ್ಯಮಿಗಳನ್ನು ಇದರ ಸಂಯೋಜಕರನ್ನಾಗಿ ನೇಮಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಎಂ. ಎ. ಗಫೂರ್ ಹಾಗೂ ಕರ್ನಾಟಕ ಕನಿಷ್ಠ ವೇತನ ಮಂಡಳಿ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣ್ಯರು, ಇಂದಿನ ಯುವಕರು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ, ಬಿಸಿಸಿಐ ಇದರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಸೇರಿದಂತೆ ಗಣ್ಯರಾದ ಮುಹಮ್ಮದ್ ಹಾರಿಸ್, ಶೌಕತ್ ಶೌರಿ, ಆಸೀಫ್ ಹೋಮ್ ಪ್ಲಸ್, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ರಝಾಕ್ ಗೋಳ್ತಮಜಲು, ಅಬ್ದುಲ್ಲಾ ಮೋನು ದೋಹಾ ಕತಾರ್, ಮುಹಮ್ಮದ್ ಖಾಸಿಮ್ ಅಹಮದ್, ಬದ್ರುದ್ದೀನ್ ಡೆಲ್ಟಾ, ಮುಹಮ್ಮದ್ ಅಲಿ ಉಚ್ಚಿಲ, ಬಿ. ಎಸ್. ಬಶೀರ್, ಇಮ್ತಿಯಾಝ್ ಅಹಮದ್, ಅಲ್ತಾಫ್ ಖತೀಬ್, ಬಂಡಾಡಿ ಇಬ್ರಾಹಿಂ, ಎ. ಕೆ. ಜಮಾಲ್, ಎ. ಕೆ. ಸಿದ್ದೀಕ್ ಸ್ನ್ಯಾಕೀಸ್, ಕೆ. ಎಮ್. ಅಬ್ದುಲ್ಲ, ಸಾಲಿ ಕೋಯ ಅಲ್ಲದೆ ಹಲವಾರು ಉದ್ಯಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿರೂಪಿಸಿದ ಬಿಸಿಸಿಐ ಕಾರ್ಯದರ್ಶಿ ನಿಸಾರ್ ಫಕೀರ್ ಸ್ವಾಗತಿಸಿದರು. ಬಿಸಿಸಿಐ ಕೋಶಾಧಿಕಾರಿ ಮನ್ಸೂರ್ ಅಹಮದ್ ಧನ್ಯವಾದವಿತ್ತರು.







