ಬೆಳಗಾವಿ | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ʼಪರಿಚಯ ಶಿಬಿರʼ

Date:

ಬೆಳಗಾವಿ ತಾಲೂಕಿನ ಗೋರಮಟ್ಟಿ, ಗೋಡಿಹಳ್ಳ, ನಿಂಗೇನಟ್ಟಿ ಹಳ್ಳಿಯ ಮಕ್ಕಳಿಗಾಗಿ ಅಗಸ್ತ್ಯ ಫೌಂಡೇಷನ್ ಮತ್ತು ಕಾಲ್ಮರಿ ಸ್ಟುಡಿಯೋದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ 14, 15, 16ರಂದು ಮೂರು ದಿನಗಳ ಕಾಲ ಸಂಯೋಜಿಸಿದ ʼಪರಿಚಯ ಶಿಬಿರʼದಲ್ಲಿ ಹತ್ತಾರು ವಿಶೇಷತೆಗಳು ಕಂಡುಬಂದವು.

ಶಾಲಾ ಸಮವಸ್ತ್ರದಲ್ಲಿದ್ದ 100ಕ್ಕೂ ಹೆಚ್ಚು ಮಕ್ಕಳು ಅಂಗಳದ ಕಲ್ಲು, ಮಣ್ಣು, ಹುಲ್ಲು, ಎಲೆ, ಕಸಗಳನ್ನು ಆಯ್ದುಕೊಂಡು ಪೇಪರ್ ಮೇಲೆ ಅದ್ಭುತವಾದ ಚಿತ್ತಾರಗಳನ್ನು ಬಿಡಿಸಿದರು. ದುರ್ಬೀನು ಹಾಕಿಕೊಂಡು ಹಕ್ಕಿಗಳನ್ನು ಪರಿಚಯಿಸಿಕೊಂಡರು. ಟೆಲಿಸ್ಕೋಪಿನಿಂದ ನಕ್ಷತ್ರಗಳನ್ನು ನೋಡಿದರು. ಶನಿಗ್ರಹದ ಉಂಗುರ ಕಂಡು ನಲಿದರು. ʼಹಳ್ಳಿಗೋಗುವ ನಾವು ಹಳ್ಳಿಗೋಗುವಾʼ ಎನ್ನುತ್ತ, ಹಾಡುತ್ತ ಹಳ್ಳಿ ಬದುಕಿನ ಸತ್ವವನ್ನು ಸಂಭ್ರಮಿಸಿದರು.

ಕಲಾವಿದರಾದ ವಿಜು, ಸ್ಮೃದುಲ್ ಅವರಿಂದ ಮಣ್ಣಿನ ವಿವಿಧ ಕಲಾಕೃತಿಗಳ ತಯಾರಿ ಹಾಗೂ ಬಣ್ಣಗಳಿಂದ ಪರಿಸರದ ಅಂಶಗಳ ಚಿತ್ತಾರ, ಹೇಮಂತ್, ಸುಧಾಂಶು ಅವರ ಮಾರ್ಗದರ್ಶನದ ಪರಿಸರ ವೀಕ್ಷಣೆಯಿಂದ ಹಕ್ಕಿ, ಕೀಟ, ಹಾವುಗಳ ಪರಿಚಯ ಹಾಗೂ  ಜಾಗೃತಿ, ಸಂಜೆ ಆಕಾಶ ಕಾಯಗಳ ವೀಕ್ಷಣೆ ಮತ್ತು ಛಾಯಾಚಿತ್ರದ ಮೂಲಕ ಪರಿಚಯಮಾಡಿಕೊಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಮಕ್ಕಳ ಪರಿಚಯ ಶಿಬಿರ 1 1

ಬಿಂದು ರಕ್ಷಿದಿ, ಸುಜಿತ್ ಕಾರ್ಕಳ, ನಾದ, ಶಶಿ ಸಾತ್’ಘಟ್ಟ ಅವರಿಂದ ರಂಗಭೂಮಿ ಚಟುವಟಿಕೆಗಳಿಂದ ಹಾಡು, ನಾಟಕ, ಆಟಗಳು, ಮುಖಕ್ಕೆ ವಿವಿಧ ಬಣ್ಣಗಾರಿಕೆ ಮೂಲಕ ಮಕ್ಕಳ ಸರ್ವತೋಮುಖ ವಿಕಸನದ ಚಟುವಟಿಕೆಗಳು ನಡೆದವು. ಕಲಾವಿದ ಶಿವರಂಜನ್ ಹಾಗೂ ಸಂಸ್ಥೆಯ ನಿರ್ದೇಶಕಿ ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ದೇಶದ ವಿವಿಧ ಕಡೆಯ ಸಂಪನ್ಮೂಲ ವ್ಯಕ್ತಿಗಳ ಒಗ್ಗೂಡುವಿಕೆಯಲ್ಲಿ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ : ರೈಲು ಯೋಜನೆಗಳ ಪರಿಶೀಲನೆ: ಸಂಸದ ಶೆಟ್ಟರ್ ಅಧಿಕಾರಿಗಳೊಂದಿಗೆ ಚರ್ಚೆ

ಆದಿತ್ಯ ಬಿರ್ಲಾ, ಸ್ನೇಹಾಲಯ್ ಅಹಮದಾನಗರ್, ಅಟ್ವಾಸ್ ಫೌಂಡೇಶನ್, ಪಾಲಿ ಹೈಡ್ರೋನ್ ಫೌಂಡೇಶನ್, ಎಕೆಪಿ ಫೌಂಡ್ರಿಸ್ ಮತ್ತು ಸಮುದಾಯದ ಸಹಭಾಗಿತ್ವದೊಂದಿಗೆ ಶಿಬಿರ ಆಯೋಜನೆಗೊಂಡಿತ್ತು.

ಮಕ್ಕಳ ಪರಿಚಯ ಶಿಬಿರ 2
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...