ಬೆಳಗಾವಿ ಜಿಲ್ಲೆಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಶಾಸಕ ರಾಜು ಕಾಗೆ ಅವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇವಲ ಮುದ್ರಣ ಮಿಸ್ಟೇಕ್ ಆಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಎಐಸಿಸಿ ಪ್ರಕಟಿಸಿದ ನಿಗಮ–ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಅರುಣ್ ಪಾಟೀಲ್ ಅವರ ಹೆಸರನ್ನು ಉಲ್ಲೇಖಿಸಿರುವುದು ಗೊಂದಲಕ್ಕೆ ಕಾರಣವಾಯಿತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ರಾಜು ಕಾಗೆ ಅವರನ್ನು ಭೇಟಿ ಮಾಡಿ, “ಇದು ಕೇವಲ ಮುದ್ರಣದ ತಪ್ಪು. ನಿಮ್ಮನ್ನೇ ನಿಗಮ ಅಧ್ಯಕ್ಷರಾಗಿ ಮುಂದುವರಿಸಲಾಗುತ್ತಿದೆ” ಎಂದು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಇದಾದರೂ ರಾಜಕೀಯ ವಲಯದಲ್ಲಿ ಊಹಾಪೋಹಗಳು ಕಡಿಮೆಯಾಗಿಲ್ಲ. ಕಳೆದ ಕೆಲವು ತಿಂಗಳಲ್ಲಿ ರಾಜು ಕಾಗೆ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದು, ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಅವರ ನೇಮಕವೂ ಪಕ್ಷಪಾತದ ಫಲ ಎಂದು ವಾದಿಸಲಾಗಿತ್ತು. ಇದೀಗ ಮತ್ತೆ ಗೊಂದಲ ತಲೆದೋರಿದ ಹಿನ್ನೆಲೆಯಲ್ಲಿ, ಒಳರಾಜಕೀಯದ ಲೆಕ್ಕಾಚಾರಗಳೇ ನಿರ್ಧಾರದಲ್ಲಿ ತೂಕ ಹಿಡಿಯುತ್ತಿವೆ ಎನ್ನಲಾಗಿದೆ.
ರಾಜು ಕಾಗೆ ತಮ್ಮ ಪ್ರತಿಕ್ರಿಯೆಯಲ್ಲಿ, “ಸಿಎಂ ಅವರು ಖುದ್ದಾಗಿ ನನ್ನ ಸ್ಥಾನ ಮುಂದುವರಿಯುತ್ತದೆ ಎಂದಿದ್ದಾರೆ. ಪಟ್ಟಿಯಲ್ಲಿ ಮುದ್ರಣದ ತಪ್ಪಾಗಿದೆ” ಎಂದು ತಿಳಿಸಿದ್ದಾರೆ.





