ಡಿಸಿಸಿ ಬ್ಯಾಂಕ್ ಚುನಾವಣೆಯ ಕಣದಿಂದ ಶಾಸಕ ಅಶೋಕ ಪಟ್ಟಣ ಹಿಂತೆಗೆದುಕೊಳ್ಳುವ ಕುರಿತು ಮೊದಲೆ ನಿರ್ಧಾರವಾಗಿತ್ತೆ ಎಂಬು ಅನುಮಾನಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಡಿಸಿಸಿ ಬ್ಯಾಂಕ್ ಚುನಾವಣೆಯ ಕಣದಿಂದ ಶಾಸಕ ಅಶೋಕ ಪಟ್ಟಣ ಹಿಂತೆಗೆದುಕೊಳ್ಳುವ ನಿರ್ಧಾರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನದಂದು ಅಶೋಕ ಪಟ್ಟಣ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದು, ಈ ನಿರ್ಧಾರ ಮೊದಲೆ ತೆಗೆದುಕೊಳ್ಳಲಾದಿತ್ತೆ ಎಂಬ ಅನುಮಾನಗಳು ನಾಯಕರಲ್ಲಿ ಕೇಳಿ ಬರುತ್ತಿವೆ.
ಅಶೋಕ ಪಟ್ಟಣರ ಹಿಂಪಡೆಯುವಿಕೆಯಿಂದ ರಾಮದುರ್ಗ ತಾಲೂಕಿನ ಸ್ಪರ್ಧೆಯಲ್ಲಿ ಹೊಸ ಸಮೀಕರಣಗಳು ರೂಪಗೊಳ್ಳಲಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷದ ಉನ್ನತ ನಾಯಕರ ಸಲಹೆ ಅಥವಾ ಸ್ಥಳೀಯ ರಾಜಕೀಯ ಒತ್ತಡದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಶಾಸಕ ಅಶೋಕ ಪಟ್ಟಣ ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಈ ಸಂದರ್ಭದಲ್ಲಿ ಶಾಸಕ ಅಶೋಕ ಪಟ್ಟಣ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು.
“ನಾಮಪತ್ರ ಹಿಂದಕ್ಕೆ ಪಡೆಯಲು ಯಾವುದೇ ವಿಶೇಷ ಕಾರಣವಿಲ್ಲ. ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದರು.
ಉಸ್ತುವಾರಿ ಸಚಿವರನ್ನು ಈ ವಿಚಾರಕ್ಕಾಗಿ ಭೇಟಿಯಾಗಿಲ್ಲವೆಂಬುದನ್ನೂ ಅವರು ಹೇಳಿದರು. “ನಮಗೆ ಸೋಲಿನ ಭೀತಿ ಇಲ್ಲ. ರಾಜಕೀಯದಲ್ಲಿ ಹಲವು ಕಾರಣಗಳಿರುತ್ತವೆ,” ಎಂದ ಅವರು, ಹೊಂದಾಣಿಕೆಯ ವಿಚಾರ ಕೇಳಿದಾಗ “ಹಾಗೇ ತಿಳಿದುಕೊಳ್ಳಿ,” ಎಂದು ಕುತೂಹಲ ಹುಟ್ಟಿಸುವ ಉತ್ತರ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅಶೋಕ ಪಟ್ಟಣ, “ಮೊದಲು ಸಚಿವ ಸ್ಥಾನ ಸಿಕ್ಕ ಬಳಿಕ ಖಾತೆಯ ಬಗ್ಗೆ ವಿಚಾರ ಮಾಡೋಣ. ಈ ಬಾರಿ ಶೇಕಡಾ 99ರಷ್ಟು ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಇದೆ,” ಎಂದರು.
“ನನ್ನದು ಯಾವುದೇ ಪ್ಯಾನೆಲ್ ಅಲ್ಲ, ನಮ್ಮದು ಸಿದ್ಧರಾಮಯ್ಯ ಟೀಮ್,” ಎಂದು ಅವರು ಸ್ಪಷ್ಟಪಡಿಸಿದರು.





