ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಕ್ಕೆ ದ್ವಿಚಕ್ರ ವಾಹನ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ನಬಾಪೂರ ಗ್ರಾಮದ ವ್ಯಾಪ್ತಿಯ ಶಿಲ್ತಿಭಾಂವಿ ಕ್ರಾಸ್–ಖನಗಾಂವ ರಸ್ತೆಯಲ್ಲಿ ನಡೆದಿದೆ.
ನಬಾಪೂರ ಗ್ರಾಮದ ಶಿವನಗೌಡ ಶಂಕರಗೌಡ ಪಾಟೀಲ (40) ಮೃತರು.
ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಟರ್ ಚಾಲಕ ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಘನಸಾವಂಗಿ ತಾಲ್ಲೂಕಿನ ಅಂತರವಳಿ ಗ್ರಾಮದ ತಾಪೇಶ್ವರ ರತನ ಗಿರಿ ವಿರುದ್ಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.




