ಬೊಲೆರೋ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರ-ಗರಜೂರ ರಸ್ತೆಯಲ್ಲಿ ನಡೆದಿದೆ.
ಗಾಯಾಳುಗಳನ್ನು ಚಿವುಟಗುಂಡಿ ಗ್ರಾಮದ ರಮೇಶ ದುಂಡಪ್ಪ ಹರಿಜನ, ಫಕೀರಪ್ಪ ಹರಿಜನ, ಚಾಲಕ ಬಸವರಾಜ ಈರಪ್ಪ ಕೌಜಲಗಿ, ಮುದುಕಪ್ಪ ಹರಿಜನ, ಶಿವಪ್ಪ ಹುಣಶೀಕಟ್ಟಿ ಹಾಗೂ ಬೊಲೆರೋ ಚಾಲಕ ಅರ್ಜುನ ಬಾಗೇವಾಡಿ ಎಂದು ಗುರುತಿಸಲಾಗಿದೆ.
ಸಂಗೊಳ್ಳಿಯಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದ ಬೊಲೆರೋ ವಾಹನ ಮತ್ತು ಬೈಲಹೊಂಗಲದಿಂದ ಗುಡದೂರ ಕಡೆಗೆ ತೆರಳುತ್ತಿದ್ದ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಆಂಬುಲೆನ್ಸ್ ಮೂಲಕ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಯುವಕರ ಖಾತೆಗಳಲ್ಲಿ ಕೋಟಿ ಹಣ ವರ್ಗಾವಣೆ: ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು
ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.




