ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಾದಾಮಿ ಮಾರ್ಗದಲ್ಲಿರುವ ಗುಡ್ಡದ ಮೇಲಿನ ಸೂಕ್ಷ್ಮ ತರಂಗ ಪುನರಾವರ್ತನ ಕೇಂದ್ರ (ಮುದಕವಿ ಕಚೇರಿ) ಎದುರು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹20,000 ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮೌನದಲ್ಲಿ ಬೆಳೆಯುತ್ತಿರುವ ಮಾದಕ ಭೀತಿ – ರಾಮದುರ್ಗ ಸುರಕ್ಷಿತವೋ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ
ದಾಳಿ ವೇಳೆ ಬೈಕ್ನಲ್ಲಿ ಸಾಗಿಸಲಾಗುತ್ತಿದ್ದ 798 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ವಾಹನ ಸಹಿತ ಸೀಜ್ ಮಾಡಲಾಗಿದೆ. ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪತ್ತೆ ಹಚ್ಚುವ ಕಾರ್ಯ ತೀವ್ರಗೊಳಿಸಲಾಗಿದೆ.
ಘಟನೆಯ ಕುರಿತು ರಾಮದುರ್ಗ ಉಪ ವಿಭಾಗದ ಅಬಕಾರಿ ನಿರೀಕ್ಷಕ ಬಸವರಾಜ ಕಿತ್ತೂರ ಅವರು NDPS ಕಾಯಿದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
ಈ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್, ನಿರೀಕ್ಷಕ ಬಸವರಾಜ ಕಿತ್ತೂರ, ಸಿಬ್ಬಂದಿ ಮಂಜುನಾಥ ಶೀಗಿಹಳ್ಳಿ, ಹಾಗೂ ವಾಹನ ಚಾಲಕ ಶಾನೂರ ಜಮಾದಾರ ಭಾಗವಹಿಸಿದ್ದರು.





