ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜೀವನವನ್ನೇ ಸಮರ್ಪಿಸಿದ ದೇಶದ ಖ್ಯಾತ ಪರಿಸರ ವಿಜ್ಞಾನಿ, ಶ್ರೇಷ್ಠ ದಾರ್ಶನಿಕ ಪ್ರೊ. ಮಾಧವ ಗಾಡ್ಗೀಳ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪರಿಸರವಾದಿಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂದು ಸಂಜೆ 5.45ಕ್ಕೆ ಸಾರ್ವಜನಿಕ ಸಂತಾಪ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಗಾಡ್ಗೀಳ್ ಸಮಿತಿಯ ಮುಖ್ಯಸ್ಥರಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಹಾಗೂ ಜನಪರ ಸಂಶೋಧನೆ ನಡೆಸಿದ ಅವರು, ಪರಿಸರ ಸಂರಕ್ಷಣೆಗೆ ದಿಟ್ಟ ದೃಷ್ಟಿಕೋನ ನೀಡಿದ ಮಹಾನ್ ಚಿಂತಕರಾಗಿದ್ದರು. ಪರಿಸರ ಮತ್ತು ಮಾನವ ಬದುಕಿನ ನಡುವೆ ಸಮತೋಲನ ಅಗತ್ಯವೆಂಬ ತತ್ವವನ್ನು ಅವರು ದೇಶಾದ್ಯಂತ ಪಸರಿಸಿದ್ದರು.
83 ವರ್ಷದ ಪ್ರೊ. ಮಾಧವ ಗಾಡ್ಗೀಳ್ ಅವರು ಜನವರಿ 7ರಂದು ಪುಣೆಯಲ್ಲಿ ನಿಧನರಾಗಿದ್ದು, ಅವರ ಅಗಲಿಕೆ ಪರಿಸರ ಚಳವಳಿಗೆ ತುಂಬಲಾರದ ನಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ತಿಲಕವಾಡಿಯ ಎರಡನೇ ರೈಲ್ವೆ ಗೇಟ್ ಸಮೀಪದ ವಾರೆಕಲ್ ಹಾಲ್ನಲ್ಲಿ ಸಾರ್ವಜನಿಕ ಇಂದು ಸಂಜೆ 5.45ಕ್ಕೆ ಸಂತಾಪ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಪರ್ಯಾಯವರ್ಣಿ ಪರಿವರ್ತನ್ ಜೀವನ್ ವಿವೇಕ್ ಪ್ರತಿಷ್ಠಾನ, ಗ್ರೀನ್ ಸೇವಿಯರ್ಸ್ ಪರ್ಯಾಯವರ್ಣಿ ಫೌಂಡೇಶನ್, ತಿವೋಲಿ ಜಾಗೃತಿ ಮಹಿಳಾ ವೊಕ್ಕುಟ, ಮಂಗ್ಯಾಂಕೋಪ್ ಲೆಫ್ಟಿನೆಂಟ್ ಜನರಲ್ ಸರ್ದೇಶಪಾಂಡೆ ಸ್ಮಾರಕ ಸಹ್ಯಾದ್ರಿ ಸಂರಕ್ಷಣಾ ವ್ಯಾಖ್ಯಾನ ಕೇಂದ್ರ ಸೇರಿದಂತೆ ಅನೇಕ ಪರಿಸರ ಹೋರಾಟಗಾರರು, ಚಿಂತಕರು ಹಾಗೂ ನಾಗರಿಕರು ಭಾಗವಹಿಸಿ ಗಾಡ್ಗೀಳ್ ಅವರ ಪರಿಸರ ಹೋರಾಟವನ್ನು ಸ್ಮರಿಸಲಿದ್ದಾರೆ.




