ಬೆಳಗಾವಿ ಜಿಲ್ಲೆ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸಿದ್ಧತೆ ತೀವ್ರಗೊಂಡಿದ್ದು, ಸವದತ್ತಿ ತಾಲೂಕಿನ ಅಭ್ಯರ್ಥಿಯಾಗಿ ವಿರೂಪಾಕ್ಷ ಮಾಮನಿ ಅವರನ್ನು ಅಂತಿಮಗೊಳಿಸಲಾಗಿದೆ.
ಸವದತ್ತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿರೂಪಾಕ್ಷ ಮಾಮನಿ ಹೆಸರು ಘೋಷಣೆ ಮಾಡಿದರು. ಈ ಮೊದಲು ರತ್ನಾ ಮಾಮಾನಿ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸ್ಥಾನದಲ್ಲಿದ್ದರು. ಇದೀಗ ಅವರ ಬದಲಿಗೆ ವಿರೂಪಾಕ್ಷ ಮಾಮನಿ ಅವರು ಸ್ಪರ್ಧಿಸಲಿದ್ದಾರೆ.
ಬೆಳಗಾವಿ ರಾಜಕಾರಣದಲ್ಲಿ ಪ್ರತಿಷ್ಠೆಯ ಸ್ಥಾನಮಾನ ಪಡೆದಿರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸವದತ್ತಿ ಅಭ್ಯರ್ಥಿಯ ಅಂತಿಮ ಘೋಷಣೆಯೊಂದಿಗೆ ಸ್ಥಳೀಯ ರಾಜಕೀಯ ಸಮೀಕರಣಗಳು ಹೊಸ ತಿರುವು ಪಡೆಯಲಿವೆ.





