ಬೆಳಗಾವಿ : ನಾಳೆ ಸಾಲಾಪೂರ ಗ್ರಾಮದಲ್ಲಿ “ಕೊಡಲ್ಲ ಅಂದ್ರ್ ಕೊಡಲ್ಲ” ನಾಟಕ ಪ್ರದರ್ಶನ

Date:

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ನಾಟ್ಯ ಯೋಗ ರಂಗ ಸಂಸ್ಥೆಯ ವತಿಯಿಂದ ನಿರ್ದೇಶಕ ಶಕೀಲ್ ಅಹ್ಮದ್ ಅವರ ನಿರ್ದೇಶನದಲ್ಲಿ ‘ಕೊಡಲ್ಲ ಅಂದ್ರ್ ಕೊಡಲ್ಲ’ ನಾಟಕವನ್ನು ನಾಳೆ ಸಂಜೆ 6 ಗಂಟೆಗೆ ಸಾಲಾಪೂರ ಗ್ರಾಮದ ರಂಗಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಮೈಸೂರಿನ ನಿರ್ದಿಗಂತ ತಂಡ ಪ್ರಸ್ತುತಪಡಿಸುತ್ತಿರುವ ಈ ನಾಟಕ, ಪ್ರಸಿದ್ಧ ನಾಟಕಕಾರ ದಾರಿಯೋ ಫೋ ಅವರ ‘ಕ್ಯಾಂಟ್ ಪೇ, ವೋಂಟ್ ಪೇ’ ನಾಟಕದ ಕನ್ನಡ ರೂಪಾಂತರವಾಗಿದ್ದು, ಬೆಲೆ ಏರಿಕೆ ಮತ್ತು ಆರ್ಥಿಕ ಒತ್ತಡದ ನಡುವಿನ ಸಾಮಾನ್ಯ ಜನರ ಹೋರಾಟವನ್ನು ಪ್ರಹಸನ ಶೈಲಿಯಲ್ಲಿ ಚಿತ್ರಿಸುತ್ತದೆ.

ಬೆಲೆ ಏರಿಕೆಯ ವಿರುದ್ಧ ಹಾಸ್ಯಭರಿತ ರಾಜಕೀಯ ಪ್ರಹಸನ

ಆಹಾರದ ಬೆಲೆ ಏರಿಕೆಯಿಂದ ಕೋಪಗೊಂಡ ಮಹಿಳೆಯರ ಗುಂಪೊಂದು ಸೂಪರ್ ಮಾರ್ಕೆಟ್‌ಗೆ ದಾಳಿ ಮಾಡಿ ಹಣ ನೀಡದೆ ದಿನಸಿಗಳನ್ನು ತೆಗೆದುಕೊಂಡು ಹೋಗುವುದರಿಂದ ಕಥೆ ಆರಂಭವಾಗುತ್ತದೆ. ಗಂಡಂದಿರ ಭೀತಿಯಿಂದ ಸಾಮಾನುಗಳನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಗರ್ಭಿಣಿಯರಂತೆ ನಟಿಸುವ ಮಹಿಳೆಯರ ಹಾಸ್ಯಾಸ್ಪದ ಘಟನೆಗಳು ರಂಗದಲ್ಲಿ ನಗುವಿನ ಜಲಪಾತ ಹರಿಸುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊದಲಿಗೆ ವಿರೋಧಿಸಿದ್ದ ಗಂಡಂದಿರು ಬಳಿಕ ಶ್ರೀಮಂತರ ಪರ ನಿಂತಿರುವ ವ್ಯವಸ್ಥೆಯ ಅನ್ಯಾಯವನ್ನು ಅರಿತು ತಮ್ಮ ಹೆಂಡತಿಯರ ಪಕ್ಕ ನಿಲ್ಲುವ ಮೂಲಕ ಕಥೆಯ ರಾಜಕೀಯ ತಿರುಳು ಮೂಡುತ್ತದೆ. ಅಧಿಕಾರದ ಮದದಲ್ಲಿರುವ ಪೊಲೀಸ್ ವ್ಯವಸ್ಥೆಯು ಜನರ ಒಗ್ಗಟ್ಟಿನ ಮುಂದೆ ನಿಷ್ಪ್ರಭವಾಗುವ ಚಿತ್ರಣವೂ ನಾಟಕದ ಕೇಂದ್ರಬಿಂದುವಾಗಿದೆ.

ವೇದಿಕೆಯ ಮೇಲಿರುವ ಕಲಾವಿದರು

ಸಲ್ಮಾ ದಂಡಿನ್, ದಿನೇಶ್ ನಾಯ್, ಚರಿತ್ ಸುವರ್ಣ, ಚರಿತಾ ಶಾರದಾ ಹಾಗೂ ಮಂಜುನಾಥ ಮಂಡಲಗೇರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಂತ್ರಿಕ ತಂಡ

ರಂಗಸಜ್ಜಿಕೆ & ವೇಷಭೂಷಣ: ಶ್ವೇತಾರಾಣಿ ಎಚ್.ಕೆ

ಸಂಗೀತ: ಅನುಷ್ ಶೆಟ್ಟಿ

ಬೆಳಕಿನ ವಿನ್ಯಾಸ: ಮಂಜುನಾಥ ಹಿರೇಮಠ

ಪರಿಕರ: ವಿನೀತ್ ಕುಮಾರ್, ಚಿಕ್ಕಮಗಳೂರು

ತಂಡ ನಿರ್ವಹಣೆ: ಕಲ್ಲಪ್ಪ ಪೂಜೇರ್

ಬೆಳಕಿನ ನಿರ್ವಹಣೆ: ಆಸಿಫ್ ಹೂವಿನಹಡಗಲಿ

ನಿರ್ದಿಗಂತ – ಸಮಕಾಲೀನ ರಂಗಪ್ರಯೋಗಗಳ ಕೇಂದ್ರ

ಕಲಾವಿದ ಪ್ರಕಾಶ್ ರಾಜ್ ಅವರ ಸೃಜನಾತ್ಮಕ ಹಂಬಲದಿಂದ ಉದ್ಭವಿಸಿದ ನಿರ್ದಿಗಂತ, ಸಮಾನ ಮನಸ್ಕ ಕಲಾವಿದರ ಸಮೂಹವಾಗಿ ನವೀನ ರಂಗಭಾಷೆಯನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿದೆ. ಸಾರ್ವಜನಿಕ ಪ್ರದರ್ಶನಗಳು, ಕಾಲೇಜು ರಂಗ, ಶಾಲಾ ರಂಗವಿಕಾಸ, ಯುವ ನಿರ್ದೇಶಕರಿಗೆ ಬೆಂಬಲ ನೀಡುವ ಮೂಲಕ ರಂಗಭೂಮಿಯ ಮಟ್ಟದಲ್ಲಿ ದೊಡ್ಡ ಮಧ್ಯಪ್ರವೇಶಿಕೆ ಮಾಡುತ್ತಿದೆ. ದೇಶ–ವಿದೇಶಗಳ ರಂಗಕಲಾವಿದರು ಇಲ್ಲಿ ತರಬೇತಿ ನೀಡಿ ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...