ಬೆಳಗಾವಿ ಜಿಲ್ಲೆಯ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಲಕ್ಷ್ಮಣ ಸವದಿ ಅವರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಸಿಕ್ಕರೂ ಬಿಡುವುದಿಲ್ಲ. ಅವರು ಅದಕ್ಕೂ ಸಿದ್ಧರಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಅವರು ಮುಂದುವರಿದು, “ಲಕ್ಷ್ಮಣ ಸವದಿ ಡಿ.ಕೆ. ಶಿವಕುಮಾರರ ಮುಂದೆ ಹೋಗಿ ‘ನಾನೇ ಅಧ್ಯಕ್ಷನಾಗುತ್ತೇನೆ’ ಎಂದು ಹೇಳಿದ್ದಾರೆ. ಆದರೆ ನನಗೆ ಅಧಿಕಾರದ ಭ್ರಮೆ ಇಲ್ಲ ಎನ್ನುತ್ತಾರೆ ಅವರು ಪಂಚಾಯತಿ ಅಧ್ಯಕ್ಷ ಸ್ಥಾನ ಸಿಕ್ಕರೂ ಬೀಡುವದಿಲ್ಲ,” ಎಂದು ಹೇಳಿದರು.
ಜಾರಕಿಹೊಳಿ ಅವರು ಸವದಿಯವರ ನಡವಳಿಕೆಯಿಂದ ಅನೇಕರು ಹುದ್ದೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. “ರಮೇಶ ಕತ್ತಿ ಅವರು ಸವದಿಯವರ ಮಾತು ಕೇಳಿ ಡಿಸಿಸಿ ಬ್ಯಾಂಕ್ ಹುದ್ದೆ ಕಳೆದುಕೊಂಡರು. ಅಣ್ಣಾಸಾಹೇಬ ಜೊಲ್ಲೆ ಅವರು ಕೂಡ ಸವದಿಯವರ ಮಾತು ಕೇಳಿ ಸಂಸದ ಸ್ಥಾನ ಕಳೆದುಕೊಂಡರು,” ಎಂದು ಹೇಳಿದರು.
ಈ ಹೇಳಿಕೆಯಿಂದ ಬೆಳಗಾವಿ ರಾಜಕೀಯದಲ್ಲಿ ಮತ್ತೆ ಚರ್ಚೆ ತೀವ್ರಗೊಂಡಿದೆ.





