ಬೆಳಗಾವಿ | ಸಾಂಪ್ರದಾಯಿಕವಾಗಿ ಹಿಂದೂ ಮಹಿಳೆಯ ಅಂತ್ಯಕ್ರಿಯೆ: ಸೌಹಾರ್ದತೆ ಮೆರೆದ ಮುಸ್ಲಿಂ, ಕ್ರಿಶ್ಚಿಯನ್ನರು

Date:

ಬೆಳಗಾವಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ಹಿಂದೂ ಮಹಿಳೆಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಕುಟುಂಬದ ಸದಸ್ಯರು ಮತ್ತು ಕ್ರಿಶ್ಚಿಯನ್ ಸಮಾಜ ಸೇವಕರು ನೆರವೇರಿಸಿರುವ ಘಟನೆ ಧರ್ಮಗಳನ್ನು ಮೀರಿದ ಮಾನವೀಯತೆ ಮತ್ತು ಸಾಮರಸ್ಯಕ್ಕೆ ಹೃದಯಸ್ಪರ್ಶಿ ಉದಾಹರಣೆಯಾಗಿದೆ.

ಶಾಂತಾಬಾಯಿ ಕೃಷ್ಣ ಜಗಡೆ(70) ಅವರು ಬೆಳಗಾವಿಯ ಗಾಂಧಿ ನಗರದ ಮೊಹಮ್ಮದ್ ಗಾಡೆ ಅವರ ಮನೆಯಲ್ಲಿ ಬಾಡಿಗೆ ಇದ್ದರು. ಅವರು 20 ವರ್ಷಗಳಿಗೂ ಹೆಚ್ಚು ಕಾಲ ಅಲ್ಲಿ ವಾಸಿಸುತ್ತಿದ್ದರು. ಗಾಡೆ ಕುಟುಂಬವು ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡಿತ್ತು. ಅವರು ಒಂದು ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮನೆ ಮಾಲೀಕರ ಕುಟುಂಬವು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್‌ 25ರ ಗುರುವಾರ ಕೊನೆಯುಸಿರೆಳದಿದ್ದಾರೆ.

ಮೃತರ ದೂರದ ಸಂಬಂಧಿಕರು ಬೇರೆ ಊರಿನಲ್ಲಿ ವಾಸಿಸುತ್ತಿದ್ದ ಕಾರಣ ಅವರಿಗೆ ಮಾಹಿತಿ ನೀಡಲಾಗಿದೆ. ಆದರೆ ಅವರು ಅಂತಿಮ ವಿಧಿವಿಧಾನಗಳಿಗಾಗಿ ಬೆಳಗಾವಿಗೆ ಬರಲು ಸಾಧ್ಯವಾಗದ ಕಾರಣ ಗಾಡೆ ಕುಟುಂಬವು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಜಕಾತಿಯನ್ನು ಸಂಪರ್ಕಿಸಿದೆ. ಅವರು ಪ್ರತಿಯಾಗಿ, ಮೆಥಡಿಸ್ಟ್ ಕ್ರಿಶ್ಚಿಯನ್ ಆಗಿರುವ ಮೇಯರ್ ವಿಜಯ್ ಮೋರೆ ಅವರಿಗೆ ಮಾಹಿತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಳಿಕ ವಿಜಯ್ ಮೋರೆ ಅವರ ಮಗ ಆ್ಯಲನ್ ಮೋರೆ(ಕ್ರಿಶ್ಚಿಯನ್) ಮತ್ತು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಜಕಾತಿಯವರು ಒಟ್ಟಾಗಿ ಮುಂದೆ ಬಂದು ಇಬ್ಬರೂ ಆಸ್ಪತ್ರೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಶವವನ್ನು ಪಡೆದು, ಹಿಂದೂ ಸಂಪ್ರದಾಯದಂತೆ ಸದಾಶಿವ ನಗರದ ಶವಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಬೆಳಗಾವಿಯ ಘಟನೆಯಂತೆಯೇ ಭಾರತದಲ್ಲಿ ಧರ್ಮಗಳನ್ನು ಮೀರಿದ ಮಾನವೀಯತೆಯ ಮೆರೆದ ಹಲವು ಹೃದಯಸ್ಪರ್ಶಿ ಉದಾಹರಣೆಗಳು ಇಲ್ಲಿವೆ:

ಕೇರಳದಲ್ಲಿ ಮುಸ್ಲಿಂ ವಾರ್ಡ್ ಸದಸ್ಯರ ಕಾರ್ಯ(2025): ತಿರುವನಂತಪುರದಲ್ಲಿ ಮುಸ್ಲಿಂ ವಾರ್ಡ್ ಸದಸ್ಯ ಟಿ. ಸಫೀರ್ ಅವರು ಒಬ್ಬ ಹಿಂದೂ ಮಹಿಳೆ ರಾಖಿಯವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದರು. ಕುಟುಂಬ ಸದಸ್ಯರು ಇಲ್ಲದಿದ್ದರೂ ಅವರು ಮುಂದೆ ಬಂದು ಧಾರ್ಮಿಕ ಸಾಮರಸ್ಯದ ಸಂದೇಶ ನೀಡಿದ್ದರು.

ಉಡುಪಿಯಲ್ಲಿ ಮುಸ್ಲಿಂ ಕುಟುಂಬದ ಸಹಾಯ(2025): ಉಡುಪಿ ಜಿಲ್ಲೆಯ ಕಾಪು ಬಳಿ ಮಳ್ಳಾರ್ ಗ್ರಾಮದಲ್ಲಿ 90 ವರ್ಷದ ಹಿಂದೂ ಮಹಿಳೆ ಜಾನಕಿ ಪೂಜಾರಿ ನಿಧನರಾದಾಗ, ಮುಸ್ಲಿಂ ಕುಟುಂಬ(ರಫೀಕ್ ಅವರದು) ಅವರ ಮಗನನ್ನು ಮುಂಬೈನಿಂದ ಕರೆಸಿ, ಮೃತರ ಅಂತ್ಯಕ್ರಿಯೆಯನ್ನು ಹಿಂದೂ ವಿಧಿವಿಧಾನಗಳಂತೆ ನೆರವೇರಿಸಿತ್ತು.

ಕೇರಳದ ಚರ್ಚ್‌ನಲ್ಲಿ ಹಿಂದೂ ಸಿಬ್ಬಂದಿಗೆ ಪ್ರಾರ್ಥನೆ(2025): ಕೋಝೆಂಚೇರಿಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ 23 ವರ್ಷಗಳಿಂದ ಸೆಕ್ಯುರಿಟಿ ಸಿಬ್ಬಂದಿಯಾಗಿದ್ದ ಹಿಂದೂ ಅಜಿಕುಮಾರ್ ಕುರುಪ್ ನಿಧನರಾದಾಗ, 400 ವರ್ಷಗಳ ಸಂಪ್ರದಾಯವನ್ನು ಮೀರಿ ಚರ್ಚ್‌ನಲ್ಲಿ ಅವರಿಗೆ ಪ್ರಾರ್ಥನೆ ನಡೆಸಲಾಯಿತು. ನಂತರ ಹಿಂದೂ ವಿಧಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದರ ಎಲ್ಲ ವೆಚ್ಚವನ್ನೂ ಚರ್ಚ್ ಸಮುದಾಯ ಭರಿಸಿತ್ತು.

ಲಕ್ನೋದಲ್ಲಿ ರಂಜಾನ್‌ ವೇಳೆ ಮುಸ್ಲಿಂ ಯುವಕರ ಸಹಾಯ(2021): ಕೋವಿಡ್ ವೇಳೆ ಲಕ್ನೋದಲ್ಲಿ ಇಮ್ದಾದ್ ಇಮಾಮ್ ಮತ್ತು ಅವರ 22 ಸದಸ್ಯರ ತಂಡ ರಂಜಾನ್ ಉಪವಾಸದ ನಡುವೆಯೂ ಹಿಂದೂ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿತ್ತು.

ಈ ಸುದ್ದಿ ಓದಿದ್ದೀರಾ? ಹುಣಸೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಮನುಸ್ಮೃತಿ ಪ್ರತಿ ದಹನ

ಹಿಮಾಚಲ ಪ್ರದೇಶದಲ್ಲಿ ಮುಸ್ಲಿಂ-ಹಿಂದೂ ಸಹಕಾರ(2024): ಹಮೀರ್‌ಪುರದ ಬಾಂಹ್ ಗ್ರಾಮದಲ್ಲಿ(ಪ್ರಧಾನವಾಗಿ ಮುಸ್ಲಿಂ ನಿವಾಸಿಗಳು) ನೇಪಾಳ ಮೂಲದ ಹಿಂದೂ ಅಶೋಕ್ ಕುಮಾರ್ ನಿಧನರಾದಾಗ, ಮುಸ್ಲಿಂ ಮತ್ತು ಹಿಂದೂ ನಿವಾಸಿಗಳು ಒಟ್ಟಾಗಿ ಹಿಂದೂ ವಿಧಿಯಂತೆ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದೀಗ ಬೆಳಗಾವಿಯಲ್ಲಿಯೂ ಅಂಥದ್ದೇ ಸಾಮರಸ್ಯದ ಘಟನೆ ನಡೆದಿರುವುದು ಭಾರತದ ಭ್ರಾತೃತ್ವ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...