ಬೆಳಗಾವಿ | ಎಸ್ ಐ ಆರ್ ಪ್ರಕ್ರಿಯೆ : ಮೋದಿ ಸರ್ಕಾರದ ಬಡವರ ಮೇಲಿನ ಯುದ್ದ

Date:

ಭಾರತೀಯ ಚುನಾವಣಾ ಆಯೋಗದ ವ್ಯವಸ್ಥಿತ ಪರಿಷ್ಕರಣೆ (SIR) ಮೋದಿ ಸರ್ಕಾರ ಬಡವರ ಮೇಲೆ ನಡೆಸುತ್ತಿರುವ ಯುದ್ಧವಾಗಿದೆ ಎಂದು ಬರಹಗಾರ ಶಿವ ಸುಂದ‌ರ್ ಅವರು ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮೇ. ಸಾಹಿತ್ಯ ಮೇಳ ಬೆಳಗಾವಿ ಬಳಗ, ಮಾನವ ಬಂಧತ್ವು ವೇದಿಕೆ, ಡಿ.ಎಸ್‌.ಎಸ್, ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಎಸ್.ಐ. ಆ‌ರ್. ಪೌರತ್ವದ ಪ್ರಶ್ನೆ, ಮತ್ತು ಪ್ರಭುತ್ವದ ಹುನ್ನಾರಗಳು ಎಂಬ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಭಾರತದ ಕಾನೂನುಬದ್ಧ ನಾಗರಿಕರ ಮೇಲೆ ಎಸ್‌ಐಆ‌ರ್ ಅನ್ನು ಒತ್ತಾಯಿಸಲು ಇಸಿಐ ಅನ್ನು ಬಳಸುತ್ತಿದೆ, ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಮಾಡುತ್ತಿರುವ ಕುತಂತ್ರವಾಗಿದೆ. ಇದು ಸಣ್ಣ ಸಣ್ಣ ಮತ್ತು ಮೌನ ಹೆಜ್ಜೆಗಳ ಮೂಲಕ ನಮ್ಮ ಪೌರತ್ವವನ್ನು ಕಸಿದುಕೊಳ್ಳುತ್ತಿದೆ. ಆದರೆ ಈ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ಬಡವರು ಸುಲಭವಾಗಿ ಪಡೆದುಕೊಳ್ಳಲಾಗದಂತ ದಾಖಲೆ ದಸ್ತಾವೇಜುಗಳನ್ನು ಸರ್ಕಾರ ಕೋರುತ್ತಿದೆ. ಇದರಿಂದಾಗಿ ಇದರ ಬಲಿಪಶುಗಳಾದ ಬಡ ಜನಸಾಮಾನ್ಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ರೀತಿಯಲ್ಲಿ ಎಸ್‌ಐಆ‌ರ್ ಎನ್ನುವುದು 140 ಕೋಟಿ ಭಾರತೀಯರ ಮೇಲೆ ಎಫ್‌ಐಆ‌ರ್ ಆಗಿ ಮಾರ್ಪಟ್ಟಿದೆ, ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂದಿಗೂ, ಹೆಚ್ಚು ಜನರು SIR ನ ಅಪಾಯಗಳನ್ನು ಅರಿತುಕೊಂಡಂತೆ ಕಾಣುತ್ತಿಲ್ಲ. SIR ಎಂಬುದು ಸತ್ತ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಹೊಸ ಮತದಾರರನ್ನು ಸೇರಿಸುವಂತಹ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸುವ ಒಂದು ಸಾಮಾನ್ಯ ಕೆಲಸ ಎಂದೇ ಅನೇಕ ಜನರು ನಂಬುತ್ತಾರೆ. ತನ್ನ ಪವಿತ್ರ ಕರ್ತವ್ಯ ವಾದ ಎಲ್ಲಾ ಮತದಾರರನ್ನು ಒಳಗೊಳ್ಳುವ ಕೆಲಸವನ್ನು ಬಿಟ್ಟು, ಅರ್ಹ ಮತದಾರ ರನ್ನು ಹೊರಗಿಡುವ ಕೆಲಸ ವನ್ನು ಮಾಡುತ್ತಿದೆ. ಆದಾಗ್ಯೂ, ಕಾಂಗ್ರೆಸ್‌ನಂತಹ ಪ್ರಮುಖ ವಿರೋಧ ಪಕ್ಷಗಳು ಇದರ ಬಗ್ಗೆ ಚಿಂತಿಸುತ್ತಿಲ್ಲ ಎಂಬುದು ದುಃಖಕರವಾಗಿದೆ ಎಂದರು.

SIR ಗೆ ಸಂವಿಧಾನ ಅಥವಾ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಯಾವುದೇ ಕಾನೂನು ಬೆಂಬಲವಿಲ್ಲ. ಇದನ್ನು ಬಲವಾಗಿ ವಿರೋಧಿಸಬೇಕಾಗಿದೆ. ಆದರೆ, ಸಾಮಾನ್ಯ ಜನರು ಈ ಹೋರಾಟ ಕೈಗೆತ್ತಿಕೊಳ್ಳಲು ಯಾವುದೇ ವಿರೋಧ ಪಕ್ಷವನ್ನು ಅವಲಂಬಿಸಲು ಸಾಧ್ಯವಿಲ್ಲ. ನಾವು ಬೀದಿಗಿಳಿದು ಸಾಮೂಹಿಕ ಚಳುವಳಿ ಮುನ್ನಡೆಸಬೇಕೆಂದು ಅವರು ಕರೆ ನೀಡಿದರು.

ಬೇರೆ ಬೇರೆ ರಾಜ್ಯಗಳಲ್ಲಿ ECI ವಿಭಿನ್ನ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಬಿಹಾರದಲ್ಲಿ, ಆಧಾ‌ರ್ ಅನ್ನು ಪೌರತ್ವದ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಇಸಿಐ ಅಧಿಕಾರಿಗಳು ಹೇಳಿದ್ದಾರೆ, ಆದರೆ ಕರ್ನಾಟಕದ ಇಸಿಐ ಅಧಿಕಾರಿ ಆಧಾ‌ರ್ ಅನ್ನು ಪೌರತ್ವವಲ್ಲ, ಗುರುತಿನ ಸಾಧನವೆಂದು ಮಾತ್ರ ಪರಿಗಣಿಸುವುದಾಗಿ ಹೇಳಿದ್ದಾರೆ. ಅಂತಹ ಬದಲಾವಣೆಗಳಿಗೆ ಯಾವುದೇ ವಿವರಣೆ ಗಳನ್ನು ಕೊಡುವಿದಿಲ್ಲ ಎಂದು ಅವರು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ತಂದ ಪೌರತ್ವ ಕಾಯ್ದೆಗೆ ತಂದ ಕೆಲ ನಿಯಮಗಳು ಪೌರತ್ವದ ಹಕ್ಕುಗಳನ್ನು ಕಿತ್ತುಕೊಂಡವು. ಈಗಂತೂ ಹೆಚ್ಚಿನ ಭಾರತೀಯ ನಾಗರಿಕರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ರೀತಿಯಲ್ಲಿ ಎಸ್‌ಐಆ‌ರ್ ಅನ್ನು ಪರಿಚಯಿಸಲಾಗುತ್ತಿದೆ. ಎಸ್‌ಐಆ‌ರ್ ಕಾನೂನುಗಳು ಭಾರತವನ್ನು ಮಧ್ಯಕಾಲೀನ ಯುಗದ ದೇಶವಾಗಿ ಬದಲಾ ಯಿಸುತ್ತಿವೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕೊಟ್ಟ ಸಂವಿಧಾನದ ಮೌಲ್ಯ ಕ್ಕೆ ವಿರುದ್ಧವಾಗಿ, ಕೇವಲ ಆಸ್ತಿ ಅಥವಾ ಶಿಕ್ಷಣ ಹೊಂದಿರುವವರಿಗೆ ಮಾತ್ರ ಮತದಾನದ ಹಕ್ಕುಗಳನ್ನು ನೀಡುತ್ತದೆ. ಈ ಬದಲಾವಣೆಗಳು ನಾಗರಿಕರನ್ನು ಹಕ್ಕುಗಳಿಲ್ಲದ ಸಾಮಾನ್ಯ ಜನರನ್ನಾಗಿ ಬದಲಾಯಿ ಸುತ್ತಿವೆ, ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ ರೂ. 6,000 ಕೋಟಿ ಮೀಸಲಿಟ್ಟಿದೆ. ಇದರ ಅರ್ಥ ಏನು ಎಂದರೆ, ಎಸ್‌ಐಆರ್ ಯ ನಂತರ ಎನ್‌ಪಿಆರ್ ಆ ನಂತರ ಎನ್ ಸಿ ಆರ್. ಕೆಲವು ವರ್ಷ ಗಳ ಹಿಂದೆ ಬಿಜೆಪಿ ಸರಕಾರ ಎನ್ ಪಿ ಆರ್ ಹಾಗೂ ಎನ್ ಆರ್ ಸಿ ಗಳನ್ನು ಜಾರಿ ಮಾಡುವ ತಯಾರಿ ನಡೆಸಿತ್ತು. ಆದರೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಂತರ ಸರ್ಕಾರ NRC ಮತ್ತು CAA ಯಿಂದ ದೂರ ಸರಿದಿತ್ತು. ಆದರೆ ಈಗ ಅದು SIR ಮೂಲಕ ಅಂತಹ ವಿನಾಶಕಾರಿ ಕಾರ್ಯ ಗಳನ್ನು ಪರಿಚಯಿಸಲು ಈ ಅವಕಾಶವನ್ನು ಬಳಸುತ್ತಿದೆ, ಎಂದು ಅವರು ಹೇಳಿದರು.

11 ರಾಜ್ಯಗಳಲ್ಲಿ ನಡೆಯುತ್ತಿರುವ SIR ನ ಮೊದಲ ಸುತ್ತಿನ ಮತದಾರರ ಪಟ್ಟಿಯಿಂದ ಸುಮಾರು ಏಳು ಕೋಟಿ ಮತದಾರರ ಹೆಸರುಗಳು ಹೊರಗುಳಿದಿವೆ. SIR ಮುಗಿಯುವ ಹೊತ್ತಿಗೆ ಸುಮಾರು 20-25 ಕೋಟಿ ಮತದಾರರನ್ನು ತೆಗೆದುಹಾಕಲಾಗುತ್ತದೆ ಎಂದು ಸುಲಭವಾಗಿ ಅಂದಾಜಿಸಲಾಗಿದೆ. ಕುತೂಹಲಕಾರಿಯಾಗಿ, ಬಲಿಪಶುಗಳು ಕೇವಲ ಮುಸ್ಲಿಮರಾಗಿರುವುದಿಲ್ಲ. ಇತರ ರಾಜ್ಯಗಳಲ್ಲಿ ಅಳಿಸಲಾದ ಮತದಾರರ ಪಟ್ಟಿಯನ್ನು ನೋಡಿದರೆ, ಬಲಿಪಶುಗಳಲ್ಲಿ ಹೆಚ್ಚಿನವರು ಮಹಿಳೆಯರು, SC/STಗಳು, OBCಗಳು, ಕಾರ್ಮಿಕ ವರ್ಗಗಳು, ವಲಸೆ ಕಾರ್ಮಿಕರು ಮತ್ತು ನಿರ್ಗತಿಕರು. SIR ಕೇವಲ ಹಿಂದೂ ಮತಗಳನ್ನು ಒಂದುಗೂಡಿಸಿ ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಮಾಡುತ್ತಿರುವ ಚುನಾವಣಾ ತಂತ್ರವಲ್ಲ. ಇದು ಸಾವರ್ಕವರ್ಾದಿ, ಬ್ರಾಹ್ಮಣ ಮತ್ತು ಕಾರ್ಪೊರೇಟ್ ಸಿದ್ಧಾಂತದಿಂದ ದೇಶವನ್ನು ಆಳುವ ಹುನ್ನಾರ. ನಾಗರಿಕರ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿ, ಆ ನಂತರ ಈ ಸರ್ಕಾರವು ಜನರಿಗೆ ಆಹಾರ, ಬಟ್ಟೆ ಮತ್ತು ಇತರ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ ಎಂದು ಅವರು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಡಿ ಬಿ ಗವಾನಿ ವಿಷಯ ಮಂಡಿಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಉದಾರ, ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳನ್ನು ಆಧರಿಸಿದ ಸಂವಿಧಾನವು ಸಾಧಿಸಿದ ಎಲ್ಲಾ ಪ್ರಗತಿಯನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಹೇಳಿದರು. ಭಾರತೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಲ್ಲಿ ಒಂದು ಒಬ್ಬ ವ್ಯಕ್ತಿ, ಒಂದು ಮತ. ಇದನ್ನು ಡಾ ಬಿ ಆರ್ ಅಂಬೇಡ್ಕ‌ರ್ ಖಾತರಿಪಡಿಸಿದ್ದಾರೆ. ಆದರೆ ಎಸ್‌ಐಆ‌ರ್ ಈ ತತ್ವವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ ಎಂದು ಡಾ ಗವಾನಿ ಹೇಳಿದರು.

ಈ ಸುದ್ದಿ ಓದಿದ್ದಿರಾ ? ವಂಟಮೂರಿ ತೀರ್ಪೊಂದು ಸಾಕೇ? ತೆರೆಮರೆಗೆ ಸರಿದ ಪ್ರಕರಣಗಳಿಗೆ ನ್ಯಾಯ ಯಾವಾಗ?

ಸರಳಾ ಸಾತ್ಪೂತೆ,ಮೆಹಬೂಬ್ ಸುಭಾನಿ ಮತ್ತು ಇತರರು ಪ್ರತಿಕ್ರಿಯಿಸಿದರು. ಲೇಖಕ ಎಸ್ ಜಿ ಚಿಕ್ಕನರಗುಂದ ಮಾತನಾಡಿದರು. ಕಾರ್ಯಕರ್ತರಾದ ಲಡಾಯಿ ಬಸು, ಮಂಜುಳಾ ಕಾಂಬ್ಳೆ ಮಾರುತಿ ಧಗೆನ್ನವ‌ರ್, ಇಂದಿರಾ ಹೋಲ್ಕ‌ರ್, ಜಯಾನಂದ್ ಮದಾ‌ರ್ ಮತ್ತು ಇತರರು ಉಪಸ್ಥಿತರಿದ್ದರು.

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮದುವೆ ನಿರಾಕರಿಸಿದ ಯುವತಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಯುವಕ

ಮದುವೆ ಪ್ರಸ್ತಾವನೆ ನಿರಾಕರಿಸಿದ ವಿಚಾರವಾಗಿ ಯುವಕನೊಬ್ಬ ಯುವತಿ ಹಾಗೂ ಅವರ ಕುಟುಂಬ...

ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ₹11.06 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ...

ಬೆಳಗಾವಿ | ಆಲಿಕಲ್ಲು ಮಳೆ ಅಟ್ಟಹಾಸ: 39 ಕುರಿಗಳ ಸಾವು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ...

ಬೆಳಗಾವಿ | 15 ದಿನಗಳ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವು: ತಂದೆಯ ಮೇಲೆ ವಿಷಪ್ರಾಶನ ಆರೋಪ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ...