ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಮದುರ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಸುರೇಶ್ ಈ. ಗುಂಜೇರಿ, ಗೌರವಾಧ್ಯಕ್ಷರಾಗಿ ಮಹಾದೇವ ತ್ಯಾವಟಗಿ, ಕಾರ್ಯಾಧ್ಯಕ್ಷರಾಗಿ ಭೀಮತಿ ಕಡ್ಲೆನ್ನವರ, ಉಪಾಧ್ಯಕ್ಷರಾಗಿ ಮಂಜುನಾಥ ದೇಸಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ರಾಜನಾಳ, ಸಹ ಕಾರ್ಯದರ್ಶಿಯಾಗಿ ನಾಗಪ್ಪ ಮಾಯನ್ನವರ, ಸಂಚಾಲಕರಾಗಿ ನಿಂಗಪ್ಪ ಜೋಗಿ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಯಾದವಾಡ, ಖಜಾಂಚಿಯಾಗಿ ದ್ಯಾಮಣ್ಣ ಮೋತೆನ್ನವರ, ಸಹ ಖಜಾಂಚಿಯಾಗಿ ಕರೆಪ್ಪ ಬಸವರಗಿ ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಇನ್ನೂ ಅನೇಕರನ್ನು ತಾಲೂಕು ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ನೂತನ ಪದಾಧಿಕಾರಿಗಳು ರೈತರ ಹಿತಾಸಕ್ತಿಯನ್ನು ಕಾಪಾಡುವ ಜತೆಗೆ ನೀರಾವರಿ, ಬೆಳೆ ಸಾಲ ಮನ್ನಾ, ಭೂಸ್ವಾಧೀನ ಪರಿಹಾರ ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ರಾಮದುರ್ಗ ಹಾಗೂ ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ದೊಡಮನಿ, ರೈತರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ ಹೋರಾಟದ ಮೂಲಕ ಪರಿಹಾರ ಪಡೆಯುವಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು.
ಹಿಂದಿನ ಲೆಕ್ಕಪತ್ರ ವರದಿ ಕುರಿತು ಚರ್ಚಿಸಿ, ಉಳಿಕೆ ಇರುವ 51 ಸಾವಿರ ರೂ. ಮೊತ್ತವನ್ನು ಸಂಘದ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ತಾಲೂಕಿನ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು, ವಿದ್ಯುತ್ ಸಮಸ್ಯೆ, ಬೆಳೆ ಪರಿಹಾರ ವಿತರಣೆಯಲ್ಲಿನ ತಾರತಮ್ಯ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಖಂಡರಾದ ಈರಯ್ಯ ಹಿರೇಮಠ, ಕೇಶವ ಮಳಲಿ, ಬೀರವ ಮಾಯನ್ನವರ, ಯಂಕಣ್ಣ ಕೆಂಚರಡ್ಡಿ, ಮುದಕಪ್ಪ ಇಂಗಳಗಿ, ಬಸವರಾಜ ನಂದೇಪ್ಪನವರ, ಮಾರುತಿ ಮಾದರ, ರಾಜು ಮಂಡಿ, ರಾಯಿ ಕರಿಕಟ್ಟಿ, ಯಲ್ಲಪ್ಪ ಕಲ್ಲನಗೌಡ್ರ, ಮಲ್ಲಪ್ಪ ಮಜ್ಜಗಿ, ಶ್ರೀನಿವಾಸ ಸಂಹಿ, ನಿಂಗಪ್ಪ ಮಾಯನ್ನವರ, ಭೀಮಪ್ಪ ಮಾಯನ್ನವರ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.





