ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಭೀಮಾಶಂಕರ ಗುಳೆದ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ರಾಮರಾಜನ್ ಅವರನ್ನು ಹೊಸ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ವರ್ಗಾವಣೆಗೊಂಡಿರುವ ಡಾ. ಭೀಮಾಶಂಕರ ಗುಳೆದ್ ಅವರಿಗೆ ಸಿಐಡಿ ವಿಭಾಗದಲ್ಲಿ ಡಿಐಜಿ (ಉಪ ಮಹಾನಿರ್ದೇಶಕ) ಹುದ್ದೆಗೆ ಬಡ್ತಿ ನೀಡಿ ನಿಯೋಜಿಸಲಾಗಿದೆ. ಅವರ ಸೇವಾವಧಿಯಲ್ಲಿ ಶಿಸ್ತು, ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನಮೆಚ್ಚುಗೆ ಪಡೆದಿದ್ದರು.
ಹೊಸವಾಗಿ ನೇಮಕಗೊಂಡಿರುವ ರಾಮರಾಜನ್ ಅವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಲಪಡಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.





