ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ತೆಲಸಂಗ ವಸತಿ ತೋಟದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕನೋರ್ವ ಹೃದಯಾಘಾತದಿಂದ ಪಾಠ ಮಾಡುತ್ತಿರುವಾಗ ಮೃತಪಟ್ಟಿರುವ ಘಟನೆ ನಡೆದಿದೆ. ಐಗಳಿ ಗ್ರಾಮದ ತೆಲಸಂಗ ತೋಟದ ಶಾಲೆಯಲ್ಲಿ ಶಿಕ್ಷಕರಾದ ಭೈರಪ್ಪ ಆರ್ ಸಾತಗೊಂಡನವರ (55) ಮೃತಪಟ್ಟಿದ್ದಾರೆ, ಶಿಕ್ಷಕರು ಇಬ್ಬರು ಪುತ್ರಿಯರು ಸೆರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ





