ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಜನವರಿ 18ರಂದು ನಡೆದ ಅಖಂಡ ಹಿಂದೂ ಸಮ್ಮೇಳನದ ವೇಳೆ ಪ್ರಚೋದನಕಾರಿ ಭಾಷಣ ಹಾಗೂ ವರ್ತನೆ ನಡೆದ ಆರೋಪದ ಹಿನ್ನೆಲೆಯಲ್ಲಿ ಹರ್ಷಿತಾ ಠಾಕೂರ್ ಸೇರಿದಂತೆ ಏಳು ಜನರ ವಿರುದ್ಧ ಮಚ್ಚೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಚ್ಚೆ ನಿವಾಸಿ ಆಬ್ದುಲ್ ಖಾದರ್ ಮುಜಾವರ ನೀಡಿದ ದೂರಿನ ಮೇರೆಗೆ ತನಿಖೆ ಆರಂಭವಾಗಿದೆ. ಸಮ್ಮೇಳನದ ವೇದಿಕೆಯಲ್ಲಿ ಆರೋಪಿಗಳು ಇನ್ನೊಂದು ಸಮುದಾಯದ ವಿರುದ್ಧ ದ್ವೇಷ ಭರಿತ ಹಾಗೂ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿ, ಅವಾಚ್ಯ ಪದಗಳ ಬಳಕೆ ಮತ್ತು ಪ್ರಚೋದನಕಾರಿ ಕೈಸನ್ನೆಗಳ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳಾಗಿ ಹರ್ಷಿತಾ ಠಾಕೂರ್, ಸುಪ್ರಿತ ಸಿಂಪಿ, ಶ್ರೀಕಾಂತ ಕಾಂಬ್ಳೆ, ಬಿಟ್ಟಪ್ಪಾ ತಾರಿಹಾಳ, ಶಿವಾಜಿ ಷಾಪುರಕರ, ಗಂಗಾರಾಮ ತಾರಿಹಾಳ ಹಾಗೂ ಮಲ್ಲಪ್ಪ ಹೆಸರುಗಳು ದಾಖಲಾಗಿವೆ.
ಭಾಷಣ ಮಾಡಿ, ಅವಾಚ್ಯ ಪದಗಳ ಬಳಕೆ ಮತ್ತು ಪ್ರಚೋದನಕಾರಿ ಕೈಸನ್ನೆಗಳ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳಾಗಿ ಹರ್ಷಿತಾ ಠಾಕೂರ್, ಸುಪ್ರಿತ ಸಿಂಪಿ, ಶ್ರೀಕಾಂತ ಕಾಂಬ್ಳೆ, ಬಿಟ್ಟಪ್ಪಾ ತಾರಿಹಾಳ, ಶಿವಾಜಿ ಷಾಪುರಕರ, ಗಂಗಾರಾಮ ತಾರಿಹಾಳ ಹಾಗೂ ಮಲ್ಲಪ್ಪ ಹೆಸರುಗಳು ದಾಖಲಾಗಿವೆ.
ಇದಕ್ಕೂ ಮುನ್ನ ಪಿರನಾವಾಡಿಯ ಅನ್ಸಾರಿ ದರ್ಗಾ ಸಮೀಪ ಧಾರ್ಮಿಕವಾಗಿ ಸಂವೇದನಾಶೀಲ ಪ್ರದೇಶದಲ್ಲಿ ಅನುಮತಿ ಇಲ್ಲದೆ ಶೋಭಾಯಾತ್ರೆಯ ಬ್ಯಾನರ್ಗಳನ್ನು ಹಾಕಲಾಗಿತ್ತು ಎಂಬ ಆರೋಪವೂ ಇದೆ. ಇದು ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 173 ಸೇರಿದಂತೆ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡು, ವಿಡಿಯೋ ದೃಶ್ಯಗಳು, ಬ್ಯಾನರ್ ಸ್ಥಾಪನೆಯ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮಚ್ಚೆ-ಪಿರನಾವಾಡಿ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.




