ಮಧ್ಯಪ್ರದೇಶದ ಖಜರಾಹೋ ದೇವಸ್ಥಾನದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಿಜೆಐ ಗವಾಯಿಯವರ ಮೇಲೆ ಶೂ ಎಸೆದು ಅವಮಾನ ಮಾಡಿರುವ ಮನುವಾದಿ ವಕೀಲ ರಾಕೇಶ್ ಕಿಶೋರ್ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ(ಡಿ ಜಿ ಸಾಗರ್ ಬಣದ) ಜಿಲ್ಲಾ ಸಂಚಾಲಕ ಎ ಮಾನಸಯ್ಯ ಅಗ್ರಹಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, “ಆರ್ಎಸ್ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿರಾಕರಿಸಿದ ಗವಾಯಿಯವರ ಮೇಲೆ ದ್ವೇಷದಿಂದ ಈ ರೀತಿಯ ಘಟನೆಗೆ ಕಾರಣವಾಗಿದೆ. ಘಟನೆಗೆ ಕಾರಣವಾದ ಮನುವಾದಿ ರಾಕೇಶ ಕಿಶೋರ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದು ‘ಸನಾತನ ಧರ್ಮಕ್ಕೆ ಅವಮಾನ ಮಾಡಿದರೆ ಸಹಿಸುವುದಿಲ್ಲ’ ಎಂಬ ಉದ್ಧಟತನದ ಹೇಳಿಕೆಯನ್ನು ನೀಡಿದ್ದಾನೆ. ಇಂತ ಹೀನಕೃತ್ಯ ಎಸಗಿದ ದೇಶದ್ರೋಹಿ, ಸಂವಿಧಾನ ದ್ರೋಹಿ ಕಿಶೋರ್ನನ್ನು ಕಠಿಣ ಶಿಕ್ಷೆಗ ಗುರಿಪಡಿಸಿಬೇಕು” ಎಂದರು.
ಜಿಲ್ಲಾ ಅಂಬೇಡ್ಕರ್ ಸಂಘದ ವತಿಯಿದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿ, “ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಕೇವಲ ದಲಿತ ಎಂಬ ಕಾರಣದಿಂದ ಅವರ ಮೇಲೆ ಸನಾತನಿ ವಕೀಲನೊಬ್ಬ ಶೂ ಎಸೆದು ಅವಮಾನ ಎಸಗಿದ್ದಾನೆ. ಬಿ ಆರ್ ಗವಾಯಿ ಏಕಾಂಗಿಯಲ್ಲ ಅವರ ಹಿಂದೆ ದೇಶದ ಜನತೆ ಇದೆ. ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ; ಆಸ್ಪತ್ರೆಗೆ ಭೇಟಿ ನೀಡಿದ ಎ ಎಸ್ ಪೊನ್ನಣ್ಣ
ಪಿ ಎಲ್ ಗಾದಿಲಿಂಗನಗೌಡ, ವಿ ಎಸ್ ಶಿವಶಂಕರ್, ನರಸಪ್ಪ, ರಾಮನಾಯ್ಕ್, ಇಮಾಮ್ ಗೋಡೇಕರ್, ಗೋವಿಂದ ಬಾಬು, ಡಾ. ಟಿ ಎ ದುರುಗಪ್ಪ, ರಾಜೇಶ್ ಹುಲಿಯಪ್ಪ, ಅನಂತಕುಮಾರ್, ರಮೇಶ್, ಡಿಎಸ್ಎಸ್ ಸಾಗರ ಬಣದ ಹಲವರು ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಜನರು ಇದ್ದರು.





