ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಮೂವರು ಕಂಡಕ್ಟರ್ಗಳು ಯುಪಿಐ ಸ್ಕ್ಯಾನರ್ ಟಿಕೆಟ್ ಹಣವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಕರ್ತವ್ಯದಿಂದ ಅಮಾನತುಗೊಳಸಲಾಗಿದೆ.
ಬೆಂಗಳೂರಿನ ಬಹುತೇಕ ಜನರು ತಮ್ಮ ದಿನನಿತ್ಯದ ಸಂಚಾರಕ್ಕಾಗಿ ಅವಲಂಬಿಸಿರುವ ಬಿಎಂಟಿಸಿ ಬಸ್ಗಳಲ್ಲಿ ಸಾರ್ವಜನಿಕರು ಪಾವತಿಸುವ ಹಣವನ್ನು ವೈಯಕ್ತಿಕ ಯುಪಿಐ ಐಡಿಗಳನ್ನು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದ್ದು ಸುರೇಶ್, ಮಂಚೇಗೌಡ ಮತ್ತು ಅಶ್ಫಕ್ ಖಾನ್ ಎಂಬುವವರು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025 ಡಿಸೆಂಬರ್ನಲ್ಲಿ ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯ ಬಳಕೆಯಲ್ಲಿ ಗಂಭೀರ ಅಕ್ರಮಗಳು ಕಂಡುಬಂದಿದೆ. ಅದರ ಆಧಾರದ ಮೇಲೆ ತನಿಖೆ ನಡೆಸಿದಾಗ ಕಂಡಕ್ಟರ್ಗಳು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ಗಳನ್ನು ಬಳಸುತ್ತಿರುವುದು ಕಂಡು ಬಂದಿದ್ದು, ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಪಾವತಿಯನ್ನು ಸಂಗ್ರಹಿಸಿರುವುದು ತಿಳಿದಿದೆ.
ಬಿಎಂಟಿಸಿ ಅಧಿಕಾರಿಗಳ ಪ್ರಕಾರ, “ಕಂಡಕ್ಟರ್ಗಳು ಯುಪಿಐ ಮೂಲಕ ಹಣ ಸಂಗ್ರಹಿಸುವಾಗ ಚಾಲಕರಿಗೆ ಟಿಕೆಟ್ ನೀಡುವುದನ್ನು ನಿರಾಕರಿಸಿದ್ದಾರೆ. ಇದರಲ್ಲಿ 3 ಸಾವಿರದಿಂದ 54 ಸಾವಿರದ ತನಕ ಹಣವನ್ನು ಕಂಡಕ್ಟರ್ಗಳು ತಮ್ಮ ಖಾತೆಗಳಿಗೆ ಪಡೆದಿದ್ದಾರೆ” ಎಂದು ಗುರುತಿಸಲಾಗಿದೆ
ವಿಚಾರಣೆಯ ಸಂದರ್ಭದಲ್ಲಿ ಮೂರು ಕಂಡಕ್ಟರ್ಗಳು ನಿಯಮಗಳ ವಿರುದ್ಧವಾಗಿ ಹಣದು ತೆಗೆದುಕೊಂಡಿರುವುದು ತಿಳಿದಿದೆ. ಮುಂದಿನ ತನಿಖೆಯವರೆಗೆ ಮೂರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಮೂರು ಸಿಬ್ಬಂದಿಗಳಲ್ಲಿ ಇಬ್ಬರು ಕಂಡಕ್ಟರ್ಗಳು ಹಾಗೂ ಮತ್ತೊಬ್ಬರು ಚಾಲಕ-ಕಂಡಕ್ಟರ್ ಆಗಿದ್ದಾರೆ.
“ಮೂರು ಸಿಬ್ಬಂದಿಗಳು ಟಿಕೆಟ್ಗಳನ್ನು ನೀಡದೆ ವೈಯಕ್ತಿಕ ಯುಪಿಐ ಖಾತೆಗಳ ಮೂಲಕ ಪ್ರಯಾಣದ ಮೊತ್ತವನ್ನು ಸಂಗ್ರಹಿಸಿರಬಹುದು. ಹಣ ಪಾವತಿಸಿದ ನಂತರ ಟಿಕೆಟ್ ನೀಡುವುದು ಕಡ್ಡಾಯವೆಂದು ಪ್ರಯಾಣಿಕರಿಗೆ ತಿಳಿದಿರದ ಕಾರಣವೇ, ಈ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿರಬಹುದು” ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ವ್ಯವಸ್ಥೆ
“ಬಿಎಂಟಿಸಿಯು ಡೈನಾಮಿಕ್ QR ಆಧಾರಿತ UPI ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೊಸ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ, ಭದ್ರತೆಯನ್ನು ಕಾಯ್ದುಕೊಳ್ಳುವ ಮತ್ತು ಶುಲ್ಕ ಸಂಗ್ರಹಣೆಗಾಗಿ ಫೂಲ್ಪ್ರೂಫ್ (foolproof mechanism) ಕಾರ್ಯವಿಧಾನವನ್ನು ರಚಿಸಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬಿಎಂಟಿಸಿ ಅಧಿಕಾರಿಗಳ ಇಂತಹ ದುರ್ನಡತೆಯನ್ನು ಸಹಿಸಲಾರದು. ಸಾರ್ವಜನಿಕ ಹೊಣೆಗಾರಿಗೆ, ಕೆಲಸದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ಆದಾಯವನ್ನು ಕಾಪಾಡುವ ಬಗ್ಗೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬಿಎಂಟಿಸಿ ನಿಗಮ ಮಂಡಳಿಯ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ ʼಈದಿನʼ ಜೊತೆ ಮಾತನಾಡಿ “ಬಿಎಂಟಿಸಿ ಕಂಡಕ್ಟರ್ಗಳ ವಿರುದ್ಧ ಈಗಾಗಲೇ ಶಿಸ್ತಿನ ಕ್ರಮಕೈಗೊಳ್ಳಲಾಗಿದೆ. ನಮ್ಮಲ್ಲಿ ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ಇಲಾಖೆ ಇದೆ. ಈ ತಪ್ಪನ್ನು ಮುಂದೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಹೊಸ ವ್ಯವಸ್ಥೆ ಜಾರಿಯ ಬಗ್ಗೆ ಚಿಂತಿಸಲಾಗಿದೆ” ಎಂದರು.





