ಎನ್‌ಸಿಪಿಇಡಿಪಿಯಿಂದ ಬೆಂಗಳೂರು- ಕಲಬುರಗಿ ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿ ಕುರಿತ ಅಧ್ಯಯನ ವರದಿ ಬಿಡುಗಡೆ

Date:

ಕರ್ನಾಟಕದಲ್ಲಿನ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಗಳ ವಿಶೇಷ ಚೇತನರ ಅನುಭವಗಳ ತುಲನಾತ್ಮಕ ಅಧ್ಯಯನ ವರದಿಯನ್ನು ನವದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಎಂಪ್ಲಾಯ್ಮೆಂಟ್ ಫಾರ್ ಡಿಸೆಬಲ್ಡ್ ಪೀಪಲ್(NCPEDP) ನಗರದ ಕನ್ನಿಂಗ್‌ಹ್ಯಾಮ್‌ನಲ್ಲಿರುವ ಸಿಟ್ರಸ್ ಹೋಟೆಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು.

ಡಿಸೆಬಿಲಿಟಿ ರೈಟ್ಸ್ ಇಂಡಿಯಾ ಫೌಂಡೇಶನ್‌ನ ಹಿರಿಯ ಸಲಹೆಗಾರರಾದ ಸ್ಮಿತಾ ಸದಾಶಿವನ್, ಎನ್‌ಸಿಪಿಇಡಿಪಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಸುಮಿತ್ ಪರೀಕ್ಷಿತ್, ಅಧ್ಯಯನದ ಸಂಯೋಜಕರಾದ ಆಕಾಶ್ ಶೇಕಾಪೂರೆ ಹಾಗೂ ಅತಿಥಿಗಳು ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿದರು‌.

ಈ ಸಂದರ್ಭದಲ್ಲಿ ಮಾತಾಡಿದ, ಕರ್ನಾಟಕ ವಿಕಲಾಂಗ ವ್ಯಕ್ತಿಗಳ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿಯವರು, “ವಿಶೇಷಚೇತನರಿಗೆ ಬೇಕಾದ ಸೇವೆಗಳನ್ನು ಪೂರೈಸುವ ವಿಷಯದಲ್ಲಿ ಆಸ್ಪತ್ರೆಗಳು ಕರುಣಾಜನಕ ಸ್ಥಿತಿಯಲ್ಲಿರುವುದನ್ನು ನಾನು ಕಂಡಿದ್ದೇನೆ. ಅದರಲ್ಲಿಯೂ ಮಲ್ಟಿಪಲ್ ಸ್ಕ್ಲೆರೋಸಿಸ್‌ನ ಸಂದರ್ಭದಲ್ಲಿ ಜೀವನ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ ಹಾಗೂ ಸೇವೆಗಳು ಸರಿಯಾಗಿ ಲಭಿಸುವುದಿಲ್ಲ. ವಿಶೇಷಚೇತನರ ಆರೋಗ್ಯ ಸೇವೆಗಳನ್ನು  ಉತ್ತಮಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ನಾವೂ ಸೇರಿಕೊಂಡು ಇಂತಹ ಆಳವಾದ ಅಧ್ಯಯನಗಳನ್ನು ಉತ್ತೇಜಿಸಬೇಕಿದೆ. ಈ ವರದಿಯನ್ನು ಪರಿಶೀಲಿಸಿ ಆರೋಗ್ಯ ಇಲಾಖೆಯೊಂದಿಗೆ ಸೇರಿಕೊಂಡು ಇದರ ಶಿಫಾರಸುಗಳನ್ನು ಅಳವಡಿಸಲು ಮುಂದಡಿ ಇರಿಸಲಾಗುವುದು. ಅಲ್ಲದೇ, ಎಲ್ಲ ಸಚಿವಾಲಯಗಳಿಂದ 5% ಬಜೆಟ್‌ ಅನ್ನು ವಿಶೇಷಚೇತನರಿಗಾಗಿ ಮೀಸಲಿಡುವಂತೆ ಒತ್ತಾಯಿಸುವುದು ನನ್ನ ಸದ್ಯದ ಗುರಿಯಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಕಲಾಂಗರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ನಟರಾಜ್ ಎನ್ ಮಾತನಾಡಿ, ಎನ್‌ಸಿಪಿಇಡಿಪಿ ಮತ್ತು ಎಎನ್‌ಝಡ್‌ನಂತಹ ಸಂಸ್ಥೆಗಳು ಅಧ್ಯಯನ ನಡೆಸಿ ಶಿಫಾರಸುಗಳನ್ನು ಸಲ್ಲಿಸಿರುವುದು ಸ್ವಾಗತಾರ್ಹ. ನಾವು ಈಗಾಗಲೇ ಅತ್ಯುತ್ತಮ ಪುನರ್ವಸತಿ ಯೋಜನೆಗಳನ್ನು ನಡೆಸುತ್ತಿದ್ದೇವೆ ಮತ್ತು ಈ ವರದಿಯಲ್ಲಿರುವ ಶಿಫಾರಸುಗಳನ್ನು ಸೇವೆಗಳ ಸುಧಾರಣೆಗೆ  ಅಳವಡಿಸುತ್ತೇವೆ” ಎಂದರು.

WhatsApp Image 2024 04 13 at 10.19.15 PM

ಬಾಂಬೆ ಐಐಟಿ ಕಾಲೇಜಿನ ಪ್ರೊ. ಅಝೀಝುದ್ದೀನ್‌ ಅವರು ಮಾತನಾಡುತ್ತಾ, “ಸರ್ಕಾರ, ಸಾಮಾಜಿಕ ಸಂಸ್ಥೆಗಳು ಮತ್ತು ಸಮುದಾಯಗಳು ಒಟ್ಟು ಸೇರಿ ವಿಶೇಷಚೇತನರ ಏಳಿಗೆಗಾಗಿ ಪರಿಶ್ರಮಿಸಿದರೆ ಖಂಡಿತವಾಗಿಯೂ ನಾವು ವಿಶೇಷಚೇತನರಿಗೆ ಬೇಕಾಗುವ ಆತ್ಮೀಯ ಭಾರತವನ್ನು ಕಟ್ಟಲು ಸಾಧ್ಯವಿದೆ. ಜಗತ್ತಿನಲ್ಲಿ ಇದುವರೆಗೂ ವಿಶೇಷಚೇತನರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇಲ್ಲ. ವಿಶೇಷ ಚೇತನರ ಹಕ್ಕುಗಳ ಬಗ್ಗೆ ಮಾತಾಡುವಾಗಲೂ ಒಂದು ನಿರ್ದಿಷ್ಟ ಗುರಿ ಇಲ್ಲ. ಅವರ ಆರೋಗ್ಯದ ಬಗ್ಗೆ, ಶಿಕ್ಷಣದ ಬಗ್ಗೆಯಾಗಲಿ, ಲಿಂಗ ಸಮಾನತೆಯ ಬಗ್ಗೆಯಾಗಲಿ, ಅಭಿವೃದ್ಧಿಯ ಬಗ್ಗೆಯಾಗಲಿ ಒಂದು ನಿರ್ದಿಷ್ಟ ನಿಲುವುಗಳಿಲ್ಲ. ಸಾಮಾನ್ಯ ಜನರ ಜೀವನದ ರೀತಿಯಲ್ಲಿಯೇ ವಿಶೇಷಚೇತರ ಜೀವನ ವಿವಿಧ ರಂಗಗಳ ಅಧ್ಯಯನದ ಬಗ್ಗೆ ಸರ್ಕಾರ ಸೇರಿದಂತೆ ಸಂಸ್ಥೆಗಳ ಹಿತಾಸಕ್ತಿ ಕಡಿಮೆಯಾಗುತ್ತಿದೆ‌. ವಿಶೇಷಚೇತನರ ಕೆಲವೊಂದು ಬೇಡಿಕೆಗಳಲ್ಲಿ ಹೆಚ್ಚಿನ ತಾಂತ್ರಿಕ ನೆರವು ಬೇಕಿರುವುದು ಕಂಡುಬರುತ್ತದೆ. ಆದರೆ, ಸರಿಯಾದ ಉಪಕ್ರಮಗಳು ಅಗತ್ಯತೆ ಇರುವ ವಿಶೇಷಚೇತನರಿಗೆ ತಲುಪುವಲ್ಲಿ ವಿಫಲವಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನೆರೆದ ಸಭಿಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಡೈವರ್ಸಿಟಿ & ಇಕ್ವಲ್ ಅಪಾರ್ಚುನಿಟಿಯ ರಾಮಾಚಾರಿ, ಎಪಿಡಿ ಪಾಲಿಸಿ ಅಡ್ವೋಕೆಸಿ ವಿಭಾಗದ ನಿರ್ದೇಶಕರಾದ ಶಿವ. ಸಿ ಹಿರೇಮಠ್, ಆಸ್ಥಾ ಸಂಸ್ಥೆಯ ಸುನೀಲ್‌ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

37 ಸಾವಿರ ಕೋಟಿ ಗುತ್ತಿಗೆ ಹಣ ಬಾಕಿ; ತಕ್ಷಣ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ ಸರಕಾರ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಮೊತ್ತ 37,370...

ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ ಕುರಿತ ಒಂದು ದಿನದ ವಿಚಾರ ಸಂಕಿರಣ: ಒಮ್ಮತದ ನಿರ್ಣಯ

ಒಂದು ಸಮಗ್ರ ನೀತಿಯು ಅಸ್ತಿತ್ವದಲ್ಲಿಲ್ಲದಿದ್ದಾಗ ನೀತಿ, ಕಾರ್ಯಕ್ರಮ, ತೀರ್ಮಾನಗಳು ಸಂವಿಧಾನ ಹಾಗೂ...

ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಿ : ಮಠಾಧಿಪತಿಗಳ ಒಕ್ಕೂಟದಿಂದ ಸಿಎಂಗೆ ಮನವಿ

ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬೀದರ್ ಜಿಲ್ಲೆಯ ಬಸವಕಲ್ಯಾಣ ನೆಲದಲ್ಲಿ ಸಾರ್ವಜನಿಕ...