ರಾಜ ಮನೆತನಗಳ ಕೊಡುಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಭದ್ರ ಬುನಾದಿಯನ್ನು ಹಾಕಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಎ.ದೇವಋಷಿ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಹಾಗೂ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯಕ್ಕೆ ರಾಜ ಮನೆತನಗಳ ಕೊಡುಗೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼರಾಜ ಮನೆತನಗಳ ಕೊಡುಗೆ ಇಲ್ಲದೆ ಹೋಗಿದ್ದರೆ ಕನ್ನಡ ಸಾಹಿತ್ಯ ಇಷ್ಟೊಂದು ಬೃಹತ್ತ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ. ಕನ್ನಡ ಸಾಹಿತ್ಯಕ್ಕೆ ರಾಜ ಮನೆತನಗಳ ಕೊಡುಗೆ ಅನನ್ಯ, ಅನುಪಮವಾಗಿದೆʼ ಎಂದು ತಿಳಿಸಿದರು.
ಚಾರಿಟೇಬಲ್ ಟ್ರಸ್ಟ್ ಆಧ್ಯಕ್ಷೆ ಡಾ.ಮಕ್ತುಂಬಿ ಎಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಳಗನ್ನಡ ಸಾಹಿತ್ಯಕ್ಕೆ ರಾಜ ಮನೆತನಗಳು ನೀಡಿದ ಸೇವೆಯನ್ನು ಶ್ಲಾಘಿಸಿದರು.
ಇದನ್ನೂ ಓದಿ : ಬೀದರ್ | ವಚನ ಸಾಹಿತ್ಯದಿಂದ ಸಾಂಸ್ಕೃತಿಕ ಶಕ್ತಿ ಹೆಚ್ಚಳ : ದೀಪ್ತಾ ಭಾಸ್ತಿ
ಪ್ರಾಚಾರ್ಯ ಡಾ.ಸಂತೋಷಕುಮಾರ ಎಸ್.ತೀರ್ಥೆ ಅಧ್ಯಕ್ಷತೆ ವಹಿಸಿದ್ದರು. ಮೇಘಾ ಅನಿಲಕುಮಾರ ಮಾತನಾಡಿದರು. ಗ್ರಂಥಾಲಯ ಅಧಿಕಾರಿ ನಿಂಗಣ್ಣ ಗಚ್ಚಿನಮನಿ, ವಿಠ್ಠಲರಾವ ಪಾಟೀಲ್ ಸೇರಿದಂತೆ ಹಲವರು ಇದ್ದರು. ಕು.ಅಶ್ವಮೇರಿ ವಚನ ಗಾಯನ ನಡೆಸಿಕೊಟ್ಟರು. ಸುಂದರರಾಜ ನಾಡಗೀತೆಯನ್ನು ಹಾಡಿದರು. ಡಾ. ಶ್ರೀನಿವಾಸ ಬೇಂದ್ರೆ ನಿರೂಪಿಸಿ, ವಂದಿಸಿದರು.





