ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಸಂವಿಧಾನ ವೃತ್ತದಲ್ಲಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಭೀಮ ಕೊರೆಗಾಂವ್ ವಿಜಯೋತ್ಸವದಲ್ಲಿ ದಸಂಸ ಹಿರಿಯ ಮುಖಂಡರಾದ ಹರಿಹರ ಆನಂದಸ್ವಾಮಿ ಮಾತನಾಡಿ,’ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ನಡೆಸಿದ ಹೋರಾಟವೇ ಭೀಮ ಕೋರೆಗಾಂವ್ ಕದನ’ ಎಂದರು.
“ಮೂವತ್ತು ಸಾವಿರ ಸೈನಿಕರನ್ನು ಕೇವಲ ಐದುನೂರು ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ಸೆಟೆದು ನಿಂತ ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ ಯುದ್ಧ ಘೋಷಿಸಿ ಐತಿಹಾಸಿಕ ಗೆಲುವು ಪಡೆದುಕೊಂಡರು. ಇಂತಹ ಹೋರಾಟವನ್ನು ಇತಿಹಾಸದಲ್ಲಿ ಅಳಿಸಲು ಸಾಧ್ಯವಿಲ್ಲ. ಶೋಷಣೆ ವಿರುದ್ಧ ನಡೆದ ಕೊರೆಗಾಂವ್ ಕದನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು. ಶೋಷಣೆ ಮಾಡುತ್ತಿದ್ದ ಪೇಶ್ವೇ ಗಳ ವಿರುದ್ಧ ಅಭೂತ ಪೂರ್ವವಾಗಿ ಗೆದ್ದ ನಂತರ ಮಹಾರಾಷ್ಟ್ರದಲ್ಲಿ ಪೆಶ್ವೇಗಳ ಆಡಳಿತ ಕೊನೆಗೊಂಡು, ಅಸ್ಪೃಶ್ಯರ ದಯಾನೀಯ ಬದಲಾವಣೆಗೆ ಕಾರಣವಾಯಿತು” ಎಂದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಘನತೆಯ ಬದುಕಿಗಾಗಿ, ಸ್ವಾವಲಂಬಿ ಬೇಸಾಯದತ್ತ ಮುಖ ಮಾಡೋಣ
ಕಾರ್ಯಕ್ರಮದಲ್ಲಿ ಮುಖಂಡರಾದ ವರದರಾಜು, ಜೆ. ಮಹದೇವು, ವಕೀಲ ಪುಟ್ಟರಾಜು, ದಸಂಸ ತಾಲೋಕ್ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಸಿಪಿಐ(ಎಂ) ಮುಖಂಡ ವಿ. ಬಸವರಾಜು ಕಲ್ಕುಣಿಕೆ, ದಸಂಸ ನಗರ ಸಂಚಾಲಕ ರಾಜು ಚಿಕ್ಕಹುಣಸೂರು, ಚಿಕ್ಕಸ್ವಾಮಿ, ಮುತ್ತುರಾಯನ ಹೊಸಳ್ಳಿ ಶಿವರಾಜು, ಜಿಲ್ಲಾ ಸಂಯೋಜಕ ಪ್ರಕಾಶ್, ಕಟ್ಟೆ ಮಳಲವಾಡಿ ಮಹದೇವಮ್ಮ ಖಜಾಂಚಿ ಸಿದ್ದೇಶ್ ಅತ್ತಿಕುಪ್ಪೆ, ದಸಂಸ ತಾಲ್ಲೂಕು ಮಹಿಳಾ ಸಂಚಾಲಕಿ ರುಕ್ಮಿಣಿ, ಹಳೇಪುರ ಕೃಷ್ಣ, ಚಲುವರಾಜು, ಅಕ್ರಮ ಸಕ್ರಮ ಸದ್ಯಸ್ಯ ಮಂಟಿಕೊಪ್ಪಲು ಕುಮಾರ, ಪರಮೇಶ್, ತರಿಕಲ್ಲು ಕಿಟ್ಟಪ್ಪ, ಗಿರೀಶ್ ಬಿಳಿಕೆರೆ, ನಾರಾಯಣ, ಕೊಪ್ಪಲು ಕಾಂತರಾಜು, ಬೀರನಹಳ್ಳಿ ಪುಟ್ಟರಾಜು ಸೇರಿದಂತೆ ಹಲವರು ಇದ್ದರು.





