ತೀರ್ಥಹಳ್ಳಿ ತಾಲ್ಲೂಕಿನ ರಜಂದಕಟ್ಟೆ ಸಮೀಪದ ಭೀಮನಕಟ್ಟೆ ತೂಗು ಸೇತುವೆ ಈಗ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯಲಾರಂಭಿಸಿದೆ. ಸೇತುವೆ 2007ರಲ್ಲಿ ಮಾಲತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಆಲಗೇರಿ, ಸೌಳಿ, ಬಾಳೇ ಕೋಡ್ಲೂ, ಹೊಳೆಮದ್ದು, ಬಿಕ್ಕಳ್ಳಿ, ಬೇಗಾರುಕೊಪ್ಪ ಊರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದ್ವಿಚಕ್ರ ವಾಹನ ಸವಾರರು ಸೇರಿದಂತ ಮಹಿಳೆಯರು, ಮಕ್ಕಳು ಈ ತೂಗು ಸೇತುವೆಯನ್ನು ಅವಲಂಬಿಸಿದ್ದಾರೆ. 1981ರಲ್ಲಿ ಅಂದಿನ ಶಾಸಕ ಡಿ.ಬಿ ಚಂದ್ರೇಗೌಡರು ಈ ಸೇತುವೆ ನೀಲಿ ನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಪ್ರಸ್ತಾವನೆ ಹಾಗೇ ಮೂಲೆ ಸೇರಿತು. ನಂತರ ಪ್ರತೀ ಚುನಾವಣೆ ಸಂದರ್ಭದಲ್ಲಿಯೂ ಸೇತುವೆ ಪ್ರಮುಖ ಪಾತ್ರ ವಹಿಸುತ್ತಾ ಬರುತ್ತಿತ್ತು.
2007ರಲ್ಲಿ ಅಂದಿನ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್ 25 ಲಕ್ಷ ರೂಪಾಯಿ ವೆಚ್ಚದ ಅನುದಾನ ನೀಡಿ ತೂಗು ಸೇತುವೆ ನಿರ್ಮಿಸಲು ಕ್ರಮ ಕೈಗೊಂಡರು. ಅನುದಾನ ನೀಡಿ 16 ವರ್ಷ ಕಳೆದಿದೆ. ಈಗ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಮಳೆಗಾಲ ಪ್ರಾರಂಭ ವಾಗಿದ್ದು ನೇತುವೆಯು ಕಬ್ಬಿಣ ತುಕ್ಕು ಹಿಡಿಯಲಾರಂಭಿಸಿದೆ. ಕೆಲವು ಕಡೆ ಸರಳುಗಳು ತುಕ್ಕು ಹಿಡಿದು ಬೀಳುವ ಹಂತ ತಲುಪಿದೆ. ಮೇಲ್ಭಾಗ ಹಾಸಿದ ಸಿಮೆಂಟ್ ಹಲಗೆ ಕಿತ್ತು ಬಂದಿರುವುದು, ಕಬ್ಬಿಣ ತುಕ್ಕು ಹಿಡಿದ ಬೇರ್ಪಟ್ಟಿರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಥಳೀಯ ಗ್ರಾಮಸ್ಥರನ್ನು ಈ ದಿನ.ಕಾಮ್ ಮಾತನಾಡಿಸಿದಾಗ 2007ಕ್ಕಿಂತಲೂ ಮೊದಲು ದೋಣಿಯಲ್ಲಿ ದಾಟುತ್ತಿದ್ದೆವು. 2007ರಲ್ಲಿ ತೂಗು ಸೇತುವೆ ನಿರ್ಮಾಣವಾಯಿತು. ಹನ್ನೊಂದು ವರ್ಷ ಕಳೆದರೂ ಒಂದು ಬಾರೊ ಪೈಂಟ್ ಮಾಡಿದ್ದಾರೆ. ಈಗ ಪೈಂಟೂ ಇಲ್ಲ ಪೂರ್ತಿ ಡ್ಯಾಮೇಜ್ ಆಗಿ ಹೋಗಿದೆ. ಕಬ್ಬಿಣದ ಅಂಶ ಎಲ್ಲವೂ ತುಕ್ಕು ಹಿಡಿದು ಒಟ್ಟೆ ಆಗಿ ಹೋಗಿದೆ ಈ ತೂಗು ಸೇತುವೆ ತೆಗೆದು ನಾಲ್ಕು ಅಡಿ ಕಾಲ ಸೇತುವೆ ಮಾಡಿಕೊಟ್ಟರೆ ತುಂಬಾನೆ ಉಪಕಾರ ಆಗಬಹುದು ಎಂದು ಹೇಳಿದ್ದಾರೆ.
“ಈಗ ಇವರು ತೂಗು ಸೇತುವೆಯಲ್ಲಿ ದಾಟಿ ಹೋಗಲು ಭಯ ಆಗುತ್ತಿದೆ. ಇಲ್ಲಿ ನೂರಾರು ಹಳ್ಳಿ ಇದೆ. ಆ ಹಳ್ಳಿಗಳಿಗೆ ಎಲ್ಲ ಇರುವ ಸಂಪರ್ಕ ಸೇತುವೆ ಇದುವೇ ಆಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಓಡಾಡುವುದು ಬಡವರು ಮತ್ತು ರೈತರು ಸಂಭಂದ ಪಟ್ಟವರು ಬೇಕಾದರೆ ಇಲ್ಲಿ ಬಂದು ಸಮೀಕ್ಷೆ ಮಾಡಿ ನೋಡಲಿ” ಎಂದು ಹರೀಶ್ ಎಂಬುವವರು ಮನವಿ ಮಾಡಿಕೊಂಡಿದ್ದಾರೆ.
“ಅದೇ ಗ್ರಾಮದ ವಿದ್ಯಾರ್ಥಿನಿ ಸೌಮ್ಯ ಈದಿನ.ಕಾಮ್ ಜೊತೆ ಮಾತನಾಡಿ ವಿದ್ಯಾರ್ಥಿಗಳಿಗೆ ಓಡಾಡುವ ತುಂಬಾನೇ ಅನುಕೂಲ ಆಗಿದೆ ಈ ಸೇತುವೆ ಇಲ್ಲದಿದ್ದರೆ ಸುಮಾರು 20 ಕಿ ಲೋ ಮೀಟರ್ ಗಳಷ್ಟು ದೂರ ಸುತ್ತಾಡಿ ಬರಬೇಕು ದಯವಿಟ್ಟು ಎಲ್ಲರಿಗೂ ಉಪಕಾರ ಹಾಗುವ ಹಾಗೆ ಈ ಸೇತುವೆಯನ್ನು ಸರಿಮಾಡಿಸಿಕೊಡಿ” ಎಂದು ಹೇಳಿದರು.
ಒಟ್ಟಿನಲ್ಲಿ ಹೆಗ್ಗೋಡು ಮತ್ತು ಮುಳುಬಾಗಿಲು ಗ್ರಾಮ ಪಂಚಾಯತಿಯ ನಿರ್ಲಕ್ಷದಿಂದಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಿದೆ.




