ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ ‘ಕಿಕ್ ಬಾಕ್ಸರ್’ ಆದ ಮೈಸೂರಿನ ಬೀಬಿ ಫಾತಿಮಾ

Date:

ಹುಟ್ಟಿದ್ದೆಲ್ಲಾ ಹೆಣ್ಣಾಯಿತೆಂದು ಪತ್ನಿ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಬಿಟ್ಟುಹೋದ ಗಂಡನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಕ್ಕೆ ಆಸರೆಯಾದ ಮಂಗಳಮುಖಿ ಅಕ್ರಮ್ ಪಾಷಾ ಮತ್ತು ಆ ಕುಟುಂಬದಲ್ಲಿ ಬೆಳೆದ ಹಿರಿಯ ಹೆಣ್ಮಗಳು ಬೀಬಿ ಫಾತಿಮಾಳ ಸಾಧನೆಯ ಕಲ್ಲು ಮುಳ್ಳಿನ ಹಾದಿ ರೋಚಕ.

ಮೈಸೂರಿನ ಉದಯಗಿರಿ ಮಸ್ಜಿದೇ ತೌಹೀದ್ ಬಳಿಯಿರುವ ಗಲ್ಲಿಯಲ್ಲಿ ಸಿಮೆಂಟ್ ಶೀಟಿನ ಬಾಡಿಗೆ ಕೊಠಡಿಯಲ್ಲಿರುವ ಈ ಕುಟುಂಬವನ್ನು ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರಾದ ರಶೀದ್ ವಿಟ್ಲ ಮತ್ತವರ ತಂಡ ಭೇಟಿಯಾಗಿ ಸಹಾಯಧನ ನೀಡಿ ಸನ್ಮಾನಿಸಿತು. ಅಬೂಬಕರ್ ಪುತ್ತು ಉಪ್ಪಿನಂಗಡಿ, ಮಹಮ್ಮದ್ ಟಿ.ಕೆ. ಹಾಗೂ ಉಬೈದ್ ವಿಟ್ಲ ಬಝಾರ್ ತಂಡದಲ್ಲಿದ್ದರು.

ರಶೀದ್ 1

ಬೀಬಿ ಫಾತಿಮಾ ತಾಯಿಗೆ ನಾಲ್ಕು ಹೆಣ್ಮಕ್ಕಳು. ಗಂಡು ಸಂತಾನವಿಲ್ಲ ಎಂಬ ಕಾರಣಕ್ಕೆ ಗಂಡನಾದವನು 19 ವರ್ಷದ ಹಿಂದೆ ಬಿಟ್ಟು ಹೋಗಿದ್ದ. ಇದರಿಂದ ನೊಂದ ಕುಟುಂಬ ಆ ಸಂದರ್ಭವೇ ಊರು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿತ್ತು. ಆವಾಗ ಅವರ ನೆರವಿಗೆ ಬಂದವರು ಮಂಗಳಮುಖಿ ಬಿಕ್ಷುಕ ಅಕ್ರಮ್ ಪಾಷಾ. ಇವರು ಈ ಐದೂ ಮಂದಿಯನ್ನು ಮೈಸೂರಿಗೆ ಕರಕೊಂಡು ಬಂದು ಬಾಡಿಗೆ ಮನೆಯಲ್ಲಿಟ್ಟರು. ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಬೀಬಿ ಫಾತಿಮಾಳನ್ನು ದತ್ತು ತೆಗೆದುಕೊಂಡ ಮಂಗಳಮುಖಿ ಅಕ್ರಮ್ ಪಾಷಾ ಆಕೆಯ ಜೀವನ ಮತ್ತು ಸಾಧನೆಗೆ ಆಸರೆಯಾದರು. ಬಿಕ್ಷೆ ಬೇಡಿ ಸಾಕಿ ಸಲಹಿದ ಹುಡುಗಿ ಇದೀಗ ರಾಷ್ಟ್ರವೇ ಗುರುತಿಸುವ ‘ಕಿಕ್ ಬಾಕ್ಸರ್’ ಆಗಿ ಹೊರಹೊಮ್ಮಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಂದೆಯ ತಿರಸ್ಕಾರ ಕಿಕ್ ಬಾಕ್ಸರ್ ಬೀಬಿ ಫಾತಿಮಾಳ ಈ ಹಠ ಮತ್ತು ಛಲಕ್ಕೆ ಕಾರಣ. ಗಂಡು ಮಕ್ಕಳಿಲ್ಲವೆಂದು ಬಿಟ್ಟು ಹೋದವನ ಮುಂದೆ ಗಂಡೆದೆಯಿಂದ ಬೀಗಬೇಕೆಂಬ ಕನಸು ನನಸಾಗುತ್ತಿರುವ ಸಂಭ್ರಮ ಬೀಬಿ ಫಾತಿಮಾಳದ್ದು. ಮಂಗಳಮುಖಿ ಮತ್ತು ಈ ಸಾಧಕಿ ಇಬ್ಬರೇ ಬಾಡಿಗೆ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾತಿಮಾ 10ನೇ ತರಗತಿಗೆ ಓದುತ್ತಿದ್ದಾಳೆ. ಫಾತಿಮಾ ತಾಯಿ ಮತ್ತು ಇತರ ಮೂವರು ಹೆಣ್ಮಕ್ಕಳಿಗೆ ಅಕ್ರಮ್ ಪಾಷಾ ಬೇರೆಯೇ ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ. ಎರಡೂ ಮನೆಯ ಬಾಡಿಗೆಯನ್ನು 65ರ ಹರೆಯದ ಅಕ್ರಮ್ ಪಾಷಾ ಅವರೇ ಬಿಕ್ಷೆ ಬೇಡಿ ಕಟ್ಟುತ್ತಿದ್ದಾರೆ.

ಮಮಮ 1

ಬೀಬಿ ಫಾತಿಮಾಳಿಗೆ ಈಗ 20ರ ಹರೆಯ. ಕೆಲ ವರ್ಷ ಕಾರಣಾಂತರದಿಂದಾಗಿ ಶಾಲೆ ಬಿಟ್ಟಿದ್ದಳು. ಕಳೆದ 12 ವರ್ಷದಿಂದ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ತನಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸ್ಪರ್ಧೆ ಮಟ್ಟದಲ್ಲಿ 29 ಗೋಲ್ಡ್ ಮೆಡಲ್ ಪಡೆದಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕೈ ನೋವಿದ್ದರೂ ಎರಡು ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಮುಂದಕ್ಕೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಬೇಕೆಂಬ ಹೆಬ್ಬಯಕೆ ಆಕೆಯದ್ದು. ಜೊತೆಗೆ ತನ್ನ ಕುಟುಂಬವನ್ನು ಮತ್ತು ಸಾಕಿದ ವಯಸ್ಕರಾದ ಮಂಗಳಮುಖಿಯ ಜವಾಬ್ದಾರಿ ಬೀಬಿ ಫಾತಿಮಾ ಮೇಲಿದೆ. ಅದಕ್ಕಾಗಿ ಬಾಡಿಗೆ ಮನೆಯ ಮೇಲಿನ ಮಹಡಿಯಲ್ಲಿ ಶೀಟ್ ಹಾಕಿ ಕಿಕ್ ಬಾಕ್ಸಿಂಗ್ ಕೋಚಿಂಗ್ ಸೆಂಟರ್ ತೆರೆದು ದುಡಿಯಬೇಕೆಂಬ ಹಂಬಲ ಫಾತಿಮಾಳದ್ದು. ಆದರೆ ಇದಾವುದಕ್ಕೂ ಅವರಲ್ಲಿ ದುಡ್ಡಿಲ್ಲ. ಅದ್ಭುತ ಸಾಧಕಿಯ ಕನಸು ಕಮರದಂತೆ ನೋಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಸ್ವಂತ ಕಾಲಲ್ಲಿ ನಿಂತು ದುಡಿದು ಒಲಂಪಿಕ್ ತನಕ ತಲುಪಬೇಕೆಂಬ ಬೀಬಿ ಫಾತಿಮಾಳ ಕನಸು ನನಸು ಮಾಡಲು ನಾವೆಲ್ಲಾ ಸೇರಿ ಪ್ರಯತ್ನಿಸಬೇಕಿದೆ.

ಬರಹ: ರಶೀದ್ ವಿಟ್ಲ, ಮಂಗಳೂರು

WhatsApp Image 2025 03 13 at 7.24.26 AM 1
WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...