ಬೀದರ್‌ | ಅಲ್ಲಮಪ್ರಭು ದಾರ್ಶನಿಕ ಪರಂಪರೆಯ ಬಹುದೊಡ್ಡ ತತ್ವಜ್ಞಾನಿ : ಶ್ರೀಕಾಂತ ಚೌಹಾಣ್

Date:

ಅಲ್ಲಮಪ್ರಭು ಮತ್ತು ಬಸವಣ್ಣನವರು ಭಾರತೀಯ ದಾರ್ಶನಿಕ ಪರಂಪರೆಯ ಬಹುದೊಡ್ಡ ತತ್ವಜ್ಞಾನಿಗಳು. ಆಧುನಿಕ ಕಾಲಘಟ್ಟದಲ್ಲಿ ಎದುರಾಗುತ್ತಿರುವ ಹಲವು ಬಿಕ್ಕಟ್ಟುಗಳನ್ನು ವಚನಗಳ ಸರಿಯಾದ ಅಧ್ಯಯನದಿಂದ ದಾಟಬಹುದು ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಕಾಂತ ಚೌಹಾಣ್ ಹೇಳಿದರು.

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಸಹಯೋಗದಲ್ಲಿ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲ್ಲಮನ ವಚನಗಳ ವಿವಿಧ ಆಯಾಮಗಳು ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ʼಸಾಮಾಜಿಕ ಪರಿವರ್ತನೆಯ ಅಂಶಗಳು ಒಳಗೊಂಡ ವಚನ ಸಾಹಿತ್ಯ ಮಾನವೀಯತೆ ಮತ್ತು ಸಮಾನತೆಯ ಆಶಯದಿಂದಾಗಿ ಸಾವಿರಾರು ವರ್ಷಗಳ ಕಾಲ ಮತ್ತೇ ಮತ್ತೇ ಅನುಸಂಧಾನಕ್ಕೆ ಒಳಪಡುತ್ತದೆʼ ಎಂದರು.

ʼಮೌಢ್ಯ, ಕಂದಾಚಾರ ವಿರೋಧಿಸುವ ನಿಲುವು ವಚನಕಾರರದು. ಮಾರ್ಕ್ಸ್ ಹೇಳುವ ಮೊದಲೇ ಸಮತಾವಾದವನ್ನೂ ಶರಣರು ಪ್ರತಿಪಾದಿಸಿದ್ದರು. ಧರ್ಮಾತೀತ ಮತ್ತು ಜಾತ್ಯತೀತ ಆಲೋಚನೆ ವಚನಗಳ ತಾತ್ವಿಕತೆಯಾಗಿವೆ. ಬೌದ್ಧ ತಾತ್ವಿಕತೆ ಮತ್ತು ಅಲ್ಲಮನ ತಾತ್ವಿಕತೆಗಳಲ್ಲಿ ಹೆಚ್ಚು ಸಾಮ್ಯತೆಗಳಿವೆ. ನಮ್ಮ ಅಧ್ಯಯನದ ಕೊರತೆಗಳಿಂದಾಗಿ ಮಹಾನ್ ದಾರ್ಶನಿಕರನ್ನು ಧಾರ್ಮಿಕ, ಜಾತಿಯ ಆವರಣದಲ್ಲಿ ಇಡುತ್ತಿದ್ದೇವೆ. ಜಗತ್ತಿನ ಎಲ್ಲ ಮಹಾನ್ ವ್ಯಕ್ತಿಗಳು ಧಾರ್ಮಿಕ ಮತ್ತು ಜಾತಿಯ ಹಂಗುಗಳನ್ನು ಹರಿದುಕೊಂಡಿದ್ದಾರೆʼ ಎಂದು ವಿಶ್ಲೇಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಲ್ಲಮನ ವಚನಗಳ ತಾತ್ವಿಕ ಆಯಾಮ ಕುರಿತು ಶ್ರೀ ಬಸವೇಶ್ವರ ಕಾಲೇಜು ಅಧ್ಯಾಪಕ ಡಾ.ಭೀಮಾಶಂಕರ ಬಿರಾದಾರ ಅವರು ಮಾತನಾಡಿ, ʼಅಲ್ಲಮ ಕನ್ನಡ ಸಾಂಸ್ಕೃತಿಕ ಜಗತ್ತಿನ ಬಹುದೊಡ್ಡ ದಾರ್ಶನಿಕ ಪ್ರತಿಭೆ. ಕವಿತ್ವ ಹಾಗೂ ದಾರ್ಶನಿಕತೆ ಮೇಳೈಸಿಕೊಂಡ ಮಹಾಪ್ರತಿಭೆ. ಹಲವು ರೂಪಕ ಹಾಗೂ ಪ್ರತಿಮೆಗಳಿಂದಲೇ ಲೋಕದ ಅರಿವನ್ನು ವಿಸ್ತರಿಸಿದ್ದಾನೆ. ಅವನ ಭಾಷಿಕ ಶಕ್ತಿ ಅಗಾಧʼ ಎಂದರು.

ʼಮಹಾ ಸಂದೇಹಿಯಾದ ಅಲ್ಲಮನಲ್ಲಿ ಎಲ್ಲವೂ ಒರೆಗೆ ಹಚ್ಚುವ ಗುಣವಿತ್ತು. ನಿತ್ಯ ಸಂಚಾರಿ ಅಲ್ಲಮ ಭಾರತೀಯ ಪಂಥಗಳಾದ ಬೌದ್ಧ, ನಾಥ, ಶೈವ, ಸೂಫಿ ಈ ಎಲ್ಲ ಜ್ಞಾನ ಪರಂಪರೆ ಅರಿತರೂ ಯಾವೊಂದು ಚೌಕಟ್ಟಿಗೂ ಸಿಗದೇ ನಿತ್ಯ ಬಯಲಿನ ಜಾಯಮಾನ ಅವನಲ್ಲಿತ್ತುʼ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ. ಹುಡೇದ ಮಾತನಾಡಿ, ʼಅಲ್ಲಮನ ವಚನಗಳು ಜೀವನದ ಬೆರಗು ಬಯಲುಗೊಳಿಸುತ್ತವೆ. ಅವರು ಜ್ಞಾನ ಹಾಗೂ ಅರಿವಿನ ಕಾರಣದಿಂದ ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಎಲ್ಲ ಶರಣರ ವಿಚಾರಗಳನ್ನು ಪರೀಕ್ಷಿಸುವ ಮತ್ತು ವಿಮರ್ಶಿಸುವ ಸಾಮರ್ಥ್ಯ ಹೊಂದಿದ್ದರುʼ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ʼನಾಡಿನ ಶ್ರೇಷ್ಠ ದಾರ್ಶನಿಕ ಅಲ್ಲಮ ಇಡೀ ವಿಶ್ವದ ಎಲ್ಲ ತತ್ವಜ್ಞಾನಿಗಳ ಸಾಲಿನಲ್ಲಿ ನಿಲ್ಲುತ್ತಾನೆ. ಶರಣ ಚಳುವಳಿಯ ನೇತಾರ ಬಸವಣ್ಣನವರಾದರೆ ಅದನ್ನು ತಾತ್ವಿಕ ಗಟ್ಟಿಗೊಳಿಸಿದ್ದು ಅಲ್ಲಮ. ವಚನಕಾರರ ಸೈದ್ಧಾಂತಿಕ ಬದ್ಧತೆಗೆ ಅಲ್ಲಮ ಇಂಬು ಕೊಟ್ಟಿದ್ದರುʼ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ತಂಗಿಯನ್ನು ಪ್ರೀತಿಸಿದಕ್ಕೆ ಯುವಕನನ್ನು ಕೊಲೆಗೈದ ಸಹೋದರರು

ಹುಲಸೂರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸೂರ್ಯಕಾಂತ ಪಾಟೀಲ, ದೇವೇಂದ್ರ ಬರಗಾಲೆ, ಲಕ್ಷ್ಮೀಬಾಯಿ ಪಾಟೀಲ, ನಾಗಪ್ಪ ನಿಣ್ಣೆ, ರೇವಣಸಿದ್ದಪ್ಪ ಡೋಂಗರೆ, ಬಸವಣ್ಣೆಪ್ಪ ನೆಲೋಗಿ, ಅಂಬಾರಾಯ ಸೈದಾಪುರೆ, ಕುಪೇಂದ್ರ ಬಿರಾದಾರ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಶಾಲಿವಾನ ಕಾಕನಾಳೆ ಸ್ವಾಗತಿಸಿದರು, ರಾಜಶೇಖರ ಬಿರಾದಾರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...