ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ದತ್ತಾತ್ರಿ ಮಡಿವಾಳ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ಕರ್ನಾಟಕ ವಿವಿಯ ಸಂಶೋಧನಾ ವಿದ್ಯಾರ್ಥಿ ದತ್ತಾತ್ರಿ ಹಣಮಂತ ಮಡಿವಾಳ ಅವರು ಮಂಡಿಸಿದ ‘ಗ್ರೊಥ್ ಆಫ್ ಹೈಯರ್ ಎಜುಕೇಶನ್ ಇನ್ ಹೈದ್ರಾಬಾದ್ ರಿಜನ್ ಆಫ್ ಕರ್ನಾಟಕ’ ಎಂಬ ಅರ್ಥಶಾಸ್ತ್ರ ವಿಷಯದ ಮಹಾಪ್ರಬಂಧಕ್ಕೆ ವಿ.ವಿ. ಡಾಕ್ಟರೇಟ್ ಪದವಿ ನೀಡಿದೆ.
ಈ ಸಂಶೋಧನೆಗೆ ಧಾರವಾಡದ ನಿವೃತ್ತ ಪ್ರಾಧ್ಯಾಪಕರಾದ ಡಾ.ವ್ವಿ.ಬಿ.ಅಣ್ಣಿಗೇರಿ ಅವರ ಮಾರ್ಗದರ್ಶನ ದೊರೆದಿದೆ.
ದತ್ತಾತ್ರಿ ಹಣಮಂತ ಮಡಿವಾಳ ಅವರು ಸದ್ಯ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಠಾಣಾಕುಶನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಸಾಧನೆಗೆ ಅಧ್ಯಾಪಕರು, ಗ್ರಾಮಸ್ಥರು ಹಾಗೂ ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.





