ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿ.6ರಂದು ಆಯೋಜಿಸಲಾಗಿರುವ ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.
ಸಮಾವೇಶ ಸಮಿತಿಯ ಪದಾಧಿಕಾರಿಗಳು
ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಸಮಿತಿಯ ಪ್ರಮುಖರು ಮಾತನಾಡಿ, ‘ಡಿಸೆಂಬರ್ 6ರಂದು ನಡೆಯಲಿರುವ ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶವು ಸಂವಿಧಾನಾತ್ಮಕ ಮೌಲ್ಯಗಳು, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಅರಿವು ಮೂಡಿಸುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ರಮೇಶ ಡಾಕುಳಗಿ, ಕಾರ್ಯಾಧ್ಯಕ್ಷ ಮಹೇಶ ಗೋರನಾಳಕರ್, ಗೌರವಾಧ್ಯಕ್ಷ ಪ್ರಕಾಶ ಮಾಳಗೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಿಲಿಕಟ್ಟಿ, ಕಾರ್ಯದರ್ಶಿ ಅರುಣ ಪಟೇಲ್ ಹಾಗೂ ಸಲಹೆಗಾರರಾದ ಅನೀಲಕುಮಾರ ಬೆಲ್ದಾರ, ಡಾ.ಕಾಶಿನಾಥ ಚೆಲ್ವಾ, ಬಾಬುರಾವ ಪಾಸ್ವಾನ, ಕಲ್ಯಾಣರಾವ ಭೋಸ್ಲೆ, ಶ್ರೀಪತಿರಾವ ದಿನೆ, ದಶರಥ ಗುರು, ಬಕ್ಕಪ್ಪಾ ದಂಡಿನ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೃತದೇಹದೊಂದಿಗೇ ಯುವತಿ ಮದುವೆ; ಮರ್ಯಾದೆಗೇಡು ಹತ್ಯೆಗಳಿಗೆ ಕೊನೆ ಎಂದು?
ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಂಜಿತಾ ಜೈನೊರ್, ಸುಧಾಮಣಿ ಗುಪ್ತಾ, ಲುಂಬಿಣಿ ಪರಾಂಜಪೆ, ಸಂಗೀತಾ ಕಾಂಬಳೆ, ರಾಜಕುಮಾರ ಬನ್ನೆರ್, ಶಾಲಿವಾನ ಬಡಿಗೆರ್, ಬಾಬುರಾವ ಮಿಠಾರೆ, ಸುನೀಲ್ ಸಂಗಮ್, ಸಂಜುಕುಮಾರ ಮೇತ್ರೆ, ನರಸಿಂಗ ಸಾಮ್ರಾಟ, ಸಂದೀಪ ಕಾಂಟೆ, ಗೌತಮ ಭೋಸ್ಲೆ, ಗೌತಮ ಪ್ರಸಾದ, ಪ್ರಕಾಶ ರಾವಣ, ಪುಟುರಾಜ ದೀನೆ, ಸತೀಶ್ ಲಕ್ಕಿ, ತುಕಾರಾಮ ಲಾಡಕರ್, ಸುರೇಶ ಜೊಜನಾಕರ್, ಅಂಬೇಡ್ಕರ್ ಸಾಗರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.





