‘ದ್ವೇಷ ಮತ್ತು ಅಹಂಕಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕು ಎಂದು ಸಾಹಿತಿ ಶರಣಬಸಪ್ಪ ಫುಲೆ ಹೇಳಿದರು.
ಬೀದರ ನಗರದ ನೌಬಾದ್ನ ಶ್ರೀ ರಾಘವೇಂದ್ರ ಕಾಲೋನಿಯ ನಿವೇದಿತಾ ಹೂಗಾರ ಟ್ರೈನರ್ ಅಕಾಡೆಮಿ ಸಭಾಂಗಣದಲ್ಲಿ ಮಹಾತ್ಮ ಜ್ಯೋತಿಭಾ ಫುಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆ ವತಿಯಿಂದ ಆಯೋಜಿಸಿದ ಧ್ಯಾನ ಹಾಗೂ ‘ಬುದ್ಧ ಮತ್ತು ಧಮ್ಮ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ʼಇಂದಿನ ಯುಗದಲ್ಲಿ ಜನರು ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯ ಕಳೆದುಕೊಂಡಿದ್ದಾರೆ. ಧ್ಯಾನ ಮತ್ತು ಧಮ್ಮದ ಮಾರ್ಗದಿಂದ ಇವುಗಳನ್ನು ಮರಳಿ ಪಡೆಯಬಹುದುʼ ಎಂದು ಹೇಳಿದರು.
ಸಾಹಿತಿ ಡಾ.ಕಾಶೀನಾಥ ಚಲ್ವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಬುದ್ಧ ಮತ್ತು ಆತನ ಧಮ್ಮʼ ಗ್ರಂಥದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಮಾಸ್ಟರ್ ಮೈಂಡ್ ಟ್ರೈನರ್ ಶ್ರೀದೇವಿ ಹೂಗಾರ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಂತೆ ಜೀ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಸವಕಲ್ಯಾಣದ ಶಿಕ್ಷಕಿ ಉಷಾ ಯಾದುರಾವ್ ಗಾಯಕವಾಡ್ ಹಾಗೂ ಕಲ್ಲಪ್ಪ ಕೈವಾರೆ ಅವರು ಉಪಸ್ಥಿತರಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಭರತ್ ಕಾಂಬಳೆ, ಧನರಾಜ್ ಮುಸ್ತಪುರೆ, ಶಕ್ತಿಕಾಂತ್ ಭಾವಿದೊಡ್ಡಿ, ನಾಗಪ್ಪ ನಿಣ್ಣೆ, ಪ್ರದೀಪ ನಾಟೇಕರ್, ಪ್ರಕಾಶ್ ರಾವಣ, ಶಂಭುಲಿಂಗ ವಾಲ್ದೊಡ್ಡಿ, ರಾಜಕುಮಾರ ಜಾಂತಿಕರ ಹಾಗೂ ಪ್ರತಿಭಾ ಪುರಸ್ಕಾರವಾಗಿ ಪ್ರಸನ್ನ ಕುಮಾರಿ, ಪ್ರಕೃತಿ, ಅಶ್ವಿನಿ ಮತ್ತಿತರರ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | 151 ಜೋಡಿಗಳ ಸರಳ ಸಾಮೂಹಿಕ ವಿವಾಹ
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಲಾವಿದರಾದ ಪ್ರೇಮಲತಾ ದೊಡ್ಡಿ ಹಾಗೂ ಜಗದೇವಿ ಫುಲೆ ನಡೆಸಿಕೊಟ್ಟರು. ರಾಜಕುಮಾರ ಕರುಣಾಸಾಗರ್ ನಿರೂಪಿಸಿದರು.





