ಬೀದರ್‌ | ನಿಸರ್ಗವೇ ನಿಜವಾದ ದೇವರು : ಅದ್ವೈತಾನಂದ ಸ್ವಾಮೀಜಿ

Date:

ನಿಸರ್ಗವೇ ನಿಜವಾದ ದೇವರು. ಹಲವು ಜೀವ ಜಂತುಗಳು ಭೂಮಿ, ಗಾಳಿ, ನೀರು ಸೇರಿ ಇಡೀ ಪಂಚಭೂತಗಳಲ್ಲಿ ಉಳಿದಿವೆ. ಪಂಚಭೂತಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲರದ್ದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅದ್ವೈತಾನಂದ ಮಹಾಸ್ವಾಮಿಗಳು ಹೇಳಿದರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಜೀವ ವಿಜ್ಞಾನ ವಿಭಾಗದಿಂದ ಸಸ್ಯ ಮತ್ತು ಸೂಕ್ಷ್ಮ ಜೀವಿಗಳ ಅಧ್ಯಯನದ ಕಾರ್ಯಾಗಾರದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ʼವಿಜ್ಞಾನ ಹೊರ ಜಗತ್ತಿನ ಬಗ್ಗೆ ತಿಳಿಸಿದರೆ ಆಧ್ಯಾತ್ಮ ಅಂತರಂಗದ ಬಗೆಗೆ ತಿಳಿಸುತ್ತದೆʼ ಎಂದರು.

ಹುಲಸೂರ ತೋಟಗಾರಿಕೆ ಇಲಾಖೆ ಅಧಿಕಾರಿ ಅಶ್ವಿನಿ ಯದಲಗುಂಡಿ ಮಾತನಾಡಿ, ʼಜನರಲ್ಲಿ ಆಹಾರ ಪ್ರಜ್ಞೆ ಬೆಳೆದಂತೆ ಸಾವಯವ ಕೃಷಿ ಹೆಚ್ಚಾಗಿದೆ. ಸಾವಯವ ಸಲಕರಣೆಗಳಿಗೆ ಮಾರುಕಟ್ಟೆಯ ಗುಣ ಬಂದಿದೆ. ಬಹು ವಾರ್ಷಿಕ ಬೆಳೆ ತೋಟಗಾರಿಕೆಯಲ್ಲಿ ಪಡೆಯಬಹುದು. ಗಿಡ, ಮರ, ಹೆಣ್ಣು, ಔಷಧೀಯ ಗಿಡಗಳು, ಎಲ್ಲದರ ಸಮಗ್ರ ಅಧ್ಯಯನ ವಿದ್ಯಾರ್ಥಿಗಳಿಗೆ ಅನುಕೂಲ. ಪ್ರತಿಯೊಬ್ಬರು ಪರಿಸರ ವ್ಯವಸ್ಥೆ ಕುರಿತು ಗಂಭೀರವಾಗಿ ಅರಿಯಬೇಕಾಗಿದೆ. ಜೇನು ಹುಳು ನಾಶವಾದರೆ ನಿಸರ್ಗದ ಚಲನೆಯ ನಿಂತು ಹೋಗುತ್ತದೆ. ಜೇನು ಹುಳುಗಳು ನಿಸರ್ಗದ ವಿಸ್ಮಯ. ಔಷಧಿ ಗುಣವಿರುವ ಮಶ್ರೂಮ್ ಹೆಚ್ಚು ಬೆಲೆಬಾಳುವ ಆಹಾರವಾಗಿ ಬಳಸುತ್ತಾರೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಹಾಗೂ ಆಧುನಿಕತೆಯಿಂದಾಗಿ ನಿಸರ್ಗದಿಂದ ವಿಮುಖರಾಗುತ್ತಿದ್ದೇವೆ. ಪರಿಸರದಿಂದ ಕಲಿಯಬೇಕಾದ ಹಲವು ಪಾಠಗಳಿಂದ ವಂಚಿತರಾಗುತ್ತಿದ್ದೇವೆ. ಪರಿಸರದ ಕುರಿತಾದ ಆಸಕ್ತಿ, ಕುತೂಹಲ ಕಡಿಮೆಯಾಗಿವೆ. ಮನುಷ್ಯ ಪಕೃತಿಯೊಂದಿಗಿನ ಸಾವಯವ ಸಂಬಂಧ ಕಡಿದುಕೊಂಡು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾನೆʼ ಎಂದು ಕಳವಳ ವ್ಯಕ್ತಪಡಿಸಿದರು.

ʼಮಣ್ಣಿನ ಸತ್ವ, ಸಸ್ಯ ಸಂಸ್ಕೃತಿ ಮತ್ತು ಜೀವ ಸಂಕುಲ ಒಂದಕ್ಕೊಂದು ಗಾಢವಾದ ಸಂಬಂಧವನ್ನು ಹೊಂದಿವೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪರಿಸರವಾದಿ ಚಿಂತನೆ ಕುರಿತೇ ಕನ್ನಡ ಸಾಹಿತ್ಯದಲ್ಲಿ ಒಂದು ಪರಂಪರೆಯಿದೆ. ಪಂಪ, ಕುವೆಂಪು, ಬಿಜಿಎಲ್ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ನಾಗೇಶ್ ಹೆಗಡೆ, ಮಾಧವ ಗಾಡ್ಗಿಳ್ ಮೊದಲಾದವರ ಬರಹಗಳು ಪರಿಸರ ಕೇಂದ್ರಿತವಾಗಿವೆʼ ಎಂದರು.

WhatsApp Image 2025 07 26 at 1.46.25 PM

ನೇತ್ರತ್ವ ವಹಿಸಿದ ಅನುಭವ ಮಂಟಪ ಸಂಚಾಲಕ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ʼಹಲವು ಶರಣೆಯರು ತಮ್ಮ ವಚನಗಳಲ್ಲಿ ಪರಿಸರ ಪ್ರಜ್ಞೆಯಿಂದ ಬರೆದಿದ್ದಾರೆ. ಶರಣರ ಬಹುಪಾಲು ವಚನಗಳಲ್ಲಿ ಪರಿಸರ ಚಿಂತನೆ ಅಡಕವಾಗಿದೆʼ ಎಂದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಸುಜಾತಾ, ಉಪನ್ಯಾಸಕರಾದ ಶ್ರೀನಿವಾಸ ಉಮಾಪುರೆ, ನಾಗವೇಣಿ ವಟಗೆ, ಗುರುದೇವಿ ಕಿಚಡೆ, ಸಚಿನ್ ಬಿಡವೆ, ಅಶೋಕ ಕುಂಬಾರ, ಗಂಗಾಧರ ಬಿರಾದಾರ , ಸಚಿನ್ ಕವಟೆ , ಶಂಕರ ಕವಟೆ , ಅಮರಪಾಲ, ಸಂಜು ಕುಮಾರ್ ಪಟ್ನೆ ಮೊದಲಾದವರು ಇದ್ದರು.

ಇದನ್ನೂ ಓದಿ : ಬೀದರ್‌ | ಮುಂಗಾರು ಮಳೆ : 36 ಮನೆಗಳಿಗೆ ಹಾನಿ, ಇಬ್ಬರ ಸಾವು

ಬಿಎಸ್ಸಿ ವಿದ್ಯಾರ್ಥಿಗಳಿಂದ ಅನುಭವ ಮಂಟಪ ಪರಿಸರದ ಹಾಗೂ ತ್ರಿಪುರಾಂತ ಕೆರೆ ಸುತ್ತಲಿನ ಗಿಡ ಮರ ಮತ್ತು ಜೀವಜಾಲದ ಕುರಿತು ವಿಶೇಷ ಅಧ್ಯಯನ , ಕ್ಷೇತ್ರಕಾರ್ಯ ಮಾಡಲಾಯಿತು.ಕಾರ್ಯಾಗಾರದ ಸಂಯೋಜಕ ಅಶೋಕರೆಡ್ಡಿ ಗದಲೇಗಾಂವ ಪ್ರಾಸ್ತಾವಿಕ ಮಾತನಾಡಿದರು. ಸ್ನೇಹಾ ರಾಜಪೂತ್ ಮತ್ತು ಶಾಂಭವಿ ಸಾಲಿಮಠ ನಿರೂಪಿಸಿದರು. ಆರತಿ ವೆಂಕಟರೆಡ್ಡಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...