ಬೀದರ್‌ | ಬಸವಣ್ಣನಿಗೆ ಇದ್ದಷ್ಟು ರಾಷ್ಟ್ರಭಕ್ತಿ ಯಾವ ಮತೀಯವಾದಿ ಸ್ವಾಮೀಜಿಗಳಿಗಿಲ್ಲ: ನಿಜಗುಣಾನಂದ ಸ್ವಾಮೀಜಿ

Date:

ಬಸವಣ್ಣನವರ ಧರ್ಮ ನಿಲ್ಲುವುದು ತತ್ವದ ಮೇಲೆ, ಬಸವಧರ್ಮ ಗರ್ಭಗುಡಿ ಸಂಸ್ಕೃತಿ ಅಲ್ಲ, ಗರ್ಭಗುಡಿ ಸಂಸ್ಕೃತಿ ಮೀರಿ ಮಾನವ ಸಂಸ್ಕೃತಿ ಕಡೆಗೆ ಬಂದಿರುವುದು ಬಸವ ಧರ್ಮ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಬಸವಕಲ್ಯಾಣದಲ್ಲಿ ಎರಡನೇ ದಿನ ಭಾನುವಾರ ನಡೆದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ʼಬಸವಕಲ್ಯಾಣ ವಿಕಾಸ : ಅಂದು-ಇಂದು-ಮುಂದು‘ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ʼಗರ್ಭಗುಡಿ ಸಂಸ್ಕೃತಿ ಮನುಷ್ಯರಿಗೆ ಯಾವುದೇ ಉತ್ತರ ನೀಡುವುದಿಲ್ಲ. ಆದರೆ, ಬಸವ ಸಂಸ್ಕೃತಿ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವಂತಹ ಏಕಮಯ ಧರ್ಮವಾಗಿದೆ. ಎಲ್ಲಾ ಮಹಾತ್ಮರು ದೇವರು, ಧರ್ಮ, ಪುಣ್ಯ, ಪಾಪ, ಸ್ವರ್ಗ, ನರಕ, ಪುನರ್ಜನ್ಮ ಇಂತಹ ವಿಚಾರಗಳ ಬಗ್ಗೆ ಮಾತನಾಡಿದರೆ, ಬಸವಣ್ಣನವರು ಮನುಷ್ಯ ಕುಲದ ಕುರಿತು ಮಾತನಾಡಿದ್ದರುʼ ಎಂದು ನುಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼ12ನೇ ಶತಮಾನದಲ್ಲಿ ಬಸವ ಸಂಸ್ಕೃತಿ ಉಳಿಸಿದಕ್ಕಿಂತಲೂ ಇಂದು ಬಸವ ಧರ್ಮ ಉಳಿಸುವುದು ಬಹಳ ಜರೂರಾಗಿದೆ. ಅಂದು ಶರಣಧರ್ಮ ವರ್ಗ ಮತ್ತು ವೈದಿಕ ವರ್ಗ ಎಂಬ ಎರಡು ವರ್ಗ ಮಾತ್ರ ಇದ್ದವು.ಆದರೆ, ಇಂದು ಬಸವಣ್ಣನವರ ತತ್ವಕ್ಕೆ ಬಸವ ಅನುಯಾಯಿಗಳಿಂದ, ಮತೀಯವಾದಿ ಲಿಂಗಾಯತ ಮಠಾಧೀಶರಿಂದ ಹಾನಿಯಿದೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಈ ಧರ್ಮವನ್ನು ಬಳಸಿಕೊಂಡು ಯಾವ ರೀತಿ ನಾಶ ಮಾಡಬೇಕೆಂಬ ಸಂಚಿನಲ್ಲಿದ್ದಾರೆ. ಇಂದು ಬಸವತತ್ವದ ಮೇಲೆ ಹೇಳಲಾರದಷ್ಟು ದಾಳಿಗೆ ಒಳಗಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ʼಇತ್ತೀಚೆಗೆ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಬೇರೆ ಧರ್ಮದ ಗೂಬೆ ತೋರಿಸಿ ಲಿಂಗಾಯತ ಧರ್ಮವನ್ನು ಗೊತ್ತಿಲ್ಲದಂತೆ ಮತೀಯವಾದಿಗಳು ಬಸವಧರ್ಮ ಹಾಳು ಮಾಡುವ ತಂತ್ರಗಾರಿಕೆಯಲ್ಲಿದ್ದಾರೆ. ಇದರಿಂದ ಲಿಂಗಾಯತರು ಎಚ್ಚರಗೊಳ್ಳಬೇಕು. ದೇಶದ ನಾನಾ ರಾಜ್ಯಗಳಲ್ಲಿ ಗುಡಿ, ಗುಂಡಾರ, ಕುಂಭಮೇಳ ಪರಂಪರೆ ಮುಂದುವರೆಸಿದರೆ, ಕರ್ನಾಟಕದ ಹಲವು ಲಿಂಗಾಯತ ಮಠಗಳು ಗುಡಿ, ಗುಂಡಾರ ಕಟ್ಟುವ ಬದಲಿಗೆ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳು ನಿರ್ಮಿಸಿದ್ದರು. ಅಷ್ಟೇ ಅಲ್ಲದೇ ನಾಡಿನ ಹಲವೆಡೆ ಉಚಿತ ಪ್ರಸಾದ ನಿಲಯ ತೆರೆದು ಕಾಯಕ, ದಾಸೋಹದ ತಳಹದಿ ಮೇಲೆ ಸೇವೆಗೈದಿರುವುದು ಎಂದಿಗೂ ಮರೆಯಬಾರದುʼ ಎಂದರು.

ʼಇದು ಬಹಳ ಸಂಕ್ರಮಣದ ಕಾಲ. ಬಸವಣ್ಣನವರು ಹಲವಾರು ಸಮುದಾಯದ ಶರಣರನ್ನು ಸೇರಿಸಿ ಲಿಂಗಾಯತ ಧರ್ಮ ಕಟ್ಟಿದರು. ಈಗ ಆಯಾ ಸಮುದಾಯದ ಜನ ಅವರವರ ಶರಣರನ್ನು ಕೊಂಡೊಯ್ದು ಬಸವಣ್ಣನವರನ್ನೇ ಕೈಬಿಟ್ಟು ಹೋಗಿದ್ದಾರೆ. ಬಾಯಲ್ಲಿ ಬಸಪ್ಪ ಒಳಗಡೆ ನಾಗಪ್ಪ ಎಂಬಂತೆ ಇರುವ ಮತೀಯವಾದಿ ಮಠಾಧೀಶರಿಂದ ಲಿಂಗಾಯತ ಧರ್ಮಕೆ ಭಾರಿ ಹಿನ್ನಡೆಯಾಗಿದೆ. ಬಸವಪರ ಚಿಂತನೆ ಬಿತ್ತುವವರನ್ನು ಸಭೆಗಳಿಗೆ ಕರೆಸುವದಕ್ಕೂ ಇಂತಹ ಮತೀಯವಾದಿ ಮಠಾಧೀಶರು ಹಿಂದೇಟು ಹಾಕುತ್ತಿದ್ದಾರೆʼ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮಠಾಧೀಶರಿಗೆ ಮದುವೆ ಮಾಡಿಸಬೇಕು : ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ

ಮತೀಯವಾದಿಗಳು ರಾಷ್ಟ್ರ ಪ್ರಜ್ಞೆಯ ತಳಹದಿ ಮೇಲೆ ಗೊತ್ತಿಲ್ಲದಂತೆ ಲಿಂಗಾಯತ ಧರ್ಮ ಕರಗಿಸಲು ಹೊರಟಿದ್ದಾರೆ. ಆದರೆ, ಜಗತ್ತಿನಲ್ಲಿ ಬಸವಣ್ಣನವರಿಗೆ ಇದ್ದಷ್ಟು ರಾಷ್ಟ್ರಭಕ್ತಿ ಯಾವ ಮತೀಯವಾದಿ, ವೈದಿಕ ಸ್ವಾಮೀಜಿಗಳಿಗಿಲ್ಲ. ದೇಶದಲ್ಲಿ ಬಸವಣ್ಣನವರ ವಿಚಾರಧಾರೆಯ ಪ್ರಜಾಪ್ರಭುತ್ವ ಧರ್ಮದ ಪಕ್ಷ ಸ್ಥಾಪನೆಯಾದರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ. ಕಾಯಕ, ರಾಷ್ಟ್ರ, ದಾಸೋಹ, ಆರ್ಥಿಕ ಪ್ರೇಮಿಗಳು ಲಿಂಗಾಯತರಾಗಿದ್ದಾರೆ. ಮಾನವ ಹಕ್ಕುಗಳ ಪ್ರತಿಪಾದಕರು ಲಿಂಗಾಯತರೇ ಆಗಿದ್ದಾರೆ ಎಂಬುದು ಅರ್ಥೈಸಿಕೊಳ್ಳಬೇಕುʼ ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...